ರಾಜ್ಯದಲ್ಲಿ ಅಬ್ಬರದ ಬೇಸಿಗೆಯ ನಡುವೆಯೂ ಕೆಲವು ಭಾಗಗಳಲ್ಲಿ ಕಳೆದೆರೆಡು ದಿನಗಳಿಂದ ಮಳೆಯಾಗುತ್ತಿದೆ. ಇಂದು ಸಹ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಮುಂದಿನ ಮೂರು ದಿನಗಳಲ್ಲಿ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಸಣ್ಣ ಪ್ರಮಾಣದ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿನಲ್ಲಿ ಮಳೆಯಾಗಲಿದೆ. ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 34-22
ಮಂಗಳೂರು: 32-25
ಶಿವಮೊಗ್ಗ: 37-23
ಬೆಳಗಾವಿ: 35-23
ಮೈಸೂರು: 37-22
ಮಂಡ್ಯ: 37-23
ಮಡಿಕೇರಿ: 35-20
ರಾಮನಗರ: 38-23
ಹಾಸನ: 33-21
ಚಾಮರಾಜನಗರ: 38-22
ಚಿಕ್ಕಬಳ್ಳಾಪುರ: 33-21
ಕೋಲಾರ: 33-21
ತುಮಕೂರು: 33-23
ಉಡುಪಿ: 32-26
ಕಾರವಾರ: 32-25
ಚಿಕ್ಕಮಗಳೂರು: 33-20
ದಾವಣಗೆರೆ: 37-24
ಹುಬ್ಬಳ್ಳಿ: 38-23
ಚಿತ್ರದುರ್ಗ: 36-24
ಹಾವೇರಿ: 38-24
ಬಳ್ಳಾರಿ: 39-27
ಗದಗ: 37-25
ಕೊಪ್ಪಳ: 37-26
ರಾಯಚೂರು: 39-27
ಯಾದಗಿರಿ: 39-27
ವಿಜಯಪುರ: 37-26
ಬೀದರ್: 37-26
ಕಲಬುರಗಿ: 39-27
ಬಾಗಲಕೋಟೆ: 37-26