ಬಿಸಿಲ ಬೇಗೆಗೆ ಕಂಗೆಟ್ಟಿದ್ದ ಕರುನಾಡಿಗೆ ಹವಾಮಾನ ಇಲಾಖೆ ವರುಣಾಗಮನದ ಮುನ್ಸೂಚನೆ ಕೊಟ್ಟಿದೆ. ಮುಂದಿನ 5 ದಿನಗಳ ಕಾಲ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಉತ್ತರ, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಯ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, 7 ದಿನಗಳ ಕಾಲ ಬಹುತೇಕ ಜಿಲ್ಲೆಗಳ ಕೆಲ ಭಾಗಗಳಿಗೆ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 35-22
ಮಂಗಳೂರು: 33-26
ಶಿವಮೊಗ್ಗ: 38-22
ಬೆಳಗಾವಿ: 37-23
ಮೈಸೂರು: 38-23
ಮಂಡ್ಯ: 38-23
ಮಡಿಕೇರಿ: 32-19
ರಾಮನಗರ: 37-23
ಹಾಸನ: 36-22
ಚಾಮರಾಜನಗರ: 37-23
ಚಿಕ್ಕಬಳ್ಳಾಪುರ: 36-21
ಕೋಲಾರ: 36-21
ತುಮಕೂರು: 37-22
ಉಡುಪಿ: 33-26
ಕಾರವಾರ: 33-26
ಚಿಕ್ಕಮಗಳೂರು: 35-20
ದಾವಣಗೆರೆ: 38-24
ಹುಬ್ಬಳ್ಳಿ: 38-24
ಚಿತ್ರದುರ್ಗ: 37-23
ಹಾವೇರಿ: 38-24
ಬಳ್ಳಾರಿ: 39-26
ಗದಗ: 37-24
ಕೊಪ್ಪಳ: 38-26
ರಾಯಚೂರು: 38-26
ಯಾದಗಿರಿ: 38-27
ವಿಜಯಪುರ: 37-26
ಬೀದರ್: 34-23
ಕಲಬುರಗಿ: 37-26
ಬಾಗಲಕೋಟೆ: 38-26