ಅಕಾಡೆಮಿ ಪ್ರಶಸ್ತಿ ವಿಜೇತರಿಗೆ ವರದಿಗಾರರ ಕೂಟ ಅಭಿನಂದನೆ

Public TV
1 Min Read
karnataka media accademy

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ (Karnataka Media Academy) ಪ್ರಶಸ್ತಿ ವಿಜೇತ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಬೆಂಗಳೂರಿನಲ್ಲಿ (Bengaluru) ನಡೆಯಿತು.

ಬೆಂಗಳೂರು ವರದಿಗಾರರ ಕೂಟ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತರನ್ನು ಸಚಿವ ಗೋಪಾಲಯ್ಯ ಗೌರವಿಸಿ ಪುರಸ್ಕರಿಸಿದರು. ಅಕಾಡೆಮಿಯ ಪ್ರಶಸ್ತಿಗೆ ಭಾಜನರಾದ ಬೆಂಗಳೂರು ವರದಿಗಾರರ ಕೂಟದ ಸದಸ್ಯರನ್ನು ಗೌರವಿಸಲಾಯಿತು. ಇದನ್ನೂ ಓದಿ: ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಭವಿಷ್ಯ- ಆದೇಶ ಕಾಯ್ದಿರಿಸಿದ ಹೈಕೋರ್ಟ್

karnataka media academy1

ಪ್ರಶಸ್ತಿ ವಿಜೇತರಾದ ಎಸ್‌.ರಾಜಶೇಖರ್‌, ಅ.ಮ.ಸುರೇಶ್‌, ಸೋಮಸುಂದರ್‌ ರೆಡ್ಡಿ, ಕೆ.ಎನ್.ಪಂಕಜಾ, ಕೆಂಚೇಗೌಡ, ಹೆಚ್‌.ವಿ.ಕಿರಣ್‌, ಎ.ಎಂ.ಸುರೇಶ್‌, ಆರ್‌.ಹೆಚ್‌.ಜಯಪ್ರಕಾಶ್‌, ವಿ.ಎಸ್‌.ಸುಬ್ರಹ್ಮಣ್ಯ, ವಿಜಯ್‌ ಜೊನ್ನಹಳ್ಳಿ, ಶಿವಣ್ಣ, ಚಿದಾನಂದ ಪಟೇಲ್‌, ಬೇಲೂರು ಹರೀಶ್‌, ರವಿಶಂಕರ್‌, ಶಿವರಾಮ್‌, ರಾಮನಾಥ ಶೆಣೈ, ಎಂ.ಚಂದ್ರಶೇಖರ್‌, ಆರ್‌.ಶ್ರೀಧರ್ ಇವರಿಗೆ ಸಚಿವರು ಗೌರವ ಸಮರ್ಪಣೆ ಮಾಡಿದರು.

ಇದೇ ವೇಳೆ ರಂಜಾನ್‌ ಸಾಬ್‌ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಬೆಲಗೂರು ಸಮೀವುಲ್ಲಾ ಅವರನ್ನೂ ಗೌರವಿಸಲಾಯಿತು.‌ ಇದನ್ನೂ ಓದಿ: ಇತಿಹಾಸದ ಪುಟ ತೆರೆದು ನೋಡಿದ್ರೆ ಉರಿಗೌಡ, ನಂಜೇಗೌಡನ ಹೆಸರಿದೆ: ಶೋಭಾ ಕರಂದ್ಲಾಜೆ

ಹಿರಿಯ ಬಿಜೆಪಿ ಮುಖಂಡ ಕೆ.ಎನ್.ಚಕ್ರಪಾಣಿ, ಪ್ರೆಸ್‌ಕ್ಲಬ್‌ ಪ್ರಧಾನ ಕಾರ್ಯದರ್ಶಿ ಪಿ.ಬಿ.ಮಲ್ಲಪ್ಪ, ವರದಿಗಾರರ ಕೂಟದ ಉಪಾಧ್ಯಕ್ಷ ಆರ್‌.ಟಿ.ವಿಠಲಮೂರ್ತಿ, ಮಾಧ್ಯಮ ಅಕಾಡೆಮಿ ಸದಸ್ಯರಾದ ಕೆ.ಎಂ.ಶಿವರಾಜು, ಲಕ್ಷ್ಮೀ ನಾರಾಯಣ್‌, ಬದ್ರುದ್ದೀನ್‌ ಕೆ.ಮಾಣಿ, ಹಿರಿಯ ಪತ್ರಕರ್ತ ಸೋಮಣ್ಣ, ದೊಡ್ಡಬೊಮ್ಮಯ್ಯ ಸೇರಿದಂತೆ ಹಲವು ಹಿರಿಯ ಪತ್ರಕರ್ತರು ಈ ಸರಳ ಸಮಾರಂಭಕ್ಕೆ ಸಾಕ್ಷಿಯಾದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಮಾರ್ಚ್‌ 13 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2019, 2020, 2021 ಹಾಗೂ 2022 ಸಾಲಿನ ಪ್ರಶಸ್ತಿಗಳನ್ನು ನೀಡಿ ಗೌರವಿಸಿತ್ತು. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಸಿನಿಮಾ : ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಿಡಿ

Share This Article
Leave a Comment

Leave a Reply

Your email address will not be published. Required fields are marked *