Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

‘ಕೈ’ ಅಭ್ಯರ್ಥಿಗೆ ಮತ ಹಾಕುವಂತೆ ಬಂದೂಕು ಹಿಡಿದು ಬೆದರಿಸಿದ್ದ ವೀರಪ್ಪನ್!

Public TV
Last updated: March 31, 2023 3:16 pm
Public TV
Share
2 Min Read
veerappan 5
SHARE

ಮೈಸೂರು: ಒಂದು ಕಾಲಕ್ಕೆ ಚುನಾವಣೆ ಬಂತೆಂದರೆ ಚಾಮರಾಜನಗರ (Chamarajanagar) ಜಿಲ್ಲೆಯ ಗಡಿ ಭಾಗದಲ್ಲಿ ಕಾಡುಗಳ್ಳ, ನರಹಂತಕ ವೀರಪ್ಪನ್ (Veerappan) ಆತಂಕ ತಂದೊಡ್ಡುತ್ತಿದ್ದ. ಇದರಿಂದ ಆತನ ಕಾರ್ಯಕ್ಷೇತ್ರದಲ್ಲಿ ಮತಗಟ್ಟೆಗಳಿಗೆ, ರಾಜಕೀಯ ಪಕ್ಷಗಳ ಮುಖಂಡರಿಗೆ ಭದ್ರತೆ ಒದಗಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗುತ್ತಿತ್ತು.

ರಾಜಕಾರಣಿಗಳು ಅಪಹರಣ ಭಯದಿಂದ ಪ್ರಚಾರಕ್ಕೆ ಹೋಗಲು, ನೌಕರರು ಚುನಾವಣಾ ಕರ್ತವ್ಯಕ್ಕೆ ಹೋಗಲು ಹಿಂಜರಿಯುತ್ತಿದ್ದರು. ಆದರೆ 2008 ವಿಧಾನಸಭಾ ಚುನಾವಣೆಯಿಂದ  (Assembly Election) ಇದು ತಪ್ಪಿದೆ. ಲೋಕಸಭೆ ಚುನಾವಣೆಗೂ ಈತನ ಭಯವಿಲ್ಲ.

veerappan 4

ಕರ್ನಾಟಕ, ತಮಿಳುನಾಡು ಮತ್ತು ಕೇರಳ ಗಡಿ ಭಾಗದಲ್ಲಿ ವ್ಯಾಪಿಸಿಕೊಂಡಿರುವ ದಟ್ಟಡವಿಯನ್ನು ತನ್ನ ಕಾರ್ಯಕ್ಷೇತ್ರ ಮಾಡಿಕೊಂಡಿದ್ದ ವೀರಪ್ಪನ್ ಮೊದಲು ಶ್ರೀಗಂಧ ಕಳ್ಳ ಸಾಗಾಣಿಕೆ ಮಾಡುತ್ತಿದ್ದ. ಶ್ರೀಗಂಧ ಮುಗಿದ ನಂತರ ದಂತಕ್ಕಾಗಿ ಆನೆಗಳನ್ನು ಹತ್ಯೆ ಮಾಡತೊಡಗಿದ. ಆನೆಗಳು ಕಡಿಮೆಯಾದ ನಂತರ ಕರಿಕಲ್ಲು ಮಾಲೀಕರಿಂದ ಸುಲಿಗೆ ಮಾಡುತ್ತಿದ್ದ. ವಿಶೇಷ ಪಡೆಯ ಕಾರ್ಯಾಚರಣೆಯಿಂದ ತನ್ನೆಲ್ಲಾ ಕುಕೃತ್ಯಗಳಿಗೂ ತಡೆಯುಂಟಾದಾಗ ಅಧಿಕಾರಿಗಳು, ಗಣ್ಯ ನಾಗರಿಕರನ್ನು ಅಪಹರಿಸಿ, ಹಣ ವಸೂಲಿ ಮಾಡತೊಡಗಿದ.

ಮೊದಮೊದಲು ಗಣಿ ಮಾಲೀಕರ ಕಡೆಯವರನ್ನು ಅಪಹರಿಸಿ ಹಣ ವಸೂಲಿ ಮಾಡಿದ್ದ ವೀರಪ್ಪನ್ ಕೊನೆಗೆ ಡಾ. ರಾಜ್‌ಕುಮಾರ್ ಮತ್ತು ಮಾಜಿ ಸಚಿವ ಹೆಚ್. ನಾಗಪ್ಪ ಅವರನ್ನೇ ಅಪಹರಿಸಿದ್ದ. ಇಂತಹ ವೀರಪ್ಪನ್ 2004ರ ಅಕ್ಟೋಬರ್ 18 ರಂದು ತಮಿಳುನಾಡು ವಿಶೇಷ ಪಡೆಯ ಪೊಲೀಸರಿಗೆ ಬಲಿಯಾದ.

h nagappa 1

ಬಲಿಯಾದ ವೀರಪ್ಪನ್‌ಗೆ ಬಹಳ ವರ್ಷಗಳಿಂದ ರಾಜಕೀಯ ಪಕ್ಷದ ನಂಟಿತ್ತು. ಆದರೆ ಅದು ಬಹಿರಂಗವಾಗಿದ್ದು 1989ರ ಚುನಾವಣೆಯಲ್ಲಿ. ಆ ಚುನಾವಣೆಯಲ್ಲಿ ಆತ ಕಾಂಗ್ರೆಸ್ ಅಭ್ಯರ್ಥಿ ಜಿ. ರಾಜೂಗೌಡರಿಗೆ ಮತ ಹಾಕುವಂತೆ ಬಂದೂಕು ಹಿಡಿದು ಮತದಾರರಿಗೆ ಬೆದರಿಕೆ ಹಾಕಿದ್ದ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ವಿಷಯ ರಾಜ್ಯ ವಿಧಾನಮಂಡಲದಲ್ಲೂ ಪ್ರಸ್ತಾಪವಾಗಿ, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು. ಇದನ್ನೂ ಓದಿ: ರಾಜಕೀಯ ಅನುಭವವಿಲ್ಲದೆ ಸತತ ಎರಡು ಬಾರಿ MLA- ಪಕ್ಷ ಬದಲಿಸಿಯೂ ಗೆದ್ದಿದ್ದ ಡಾ.ಶಿವರಾಜ್ ಪಾಟೀಲ್‍ಗೆ ಈ ಬಾರಿ ಟಫ್

ಇದೇ ವೀರಪ್ಪನ್ ರಾಜೂಗೌಡರ ಬದ್ಧವೈರಿ ಮಾಜಿ ಸಚಿವ ಹೆಚ್. ನಾಗಪ್ಪ ಅವರನ್ನು ಅಪಹರಿಸಿದ್ದ. ನಾಗಪ್ಪ ಅವರು ವೀರಪ್ಪನ್ ವಶದಲ್ಲಿದ್ದಾಗಲೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆದರೆ ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರು 108 ದಿನಗಳ ವನವಾಸದ ನಂತರ ಸುರಕ್ಷಿತವಾಗಿ ಬಿಡುಗಡೆಯಾಗಿ ಬಂದಿದ್ದರು.

veerappan

ಸರಿಸುಮಾರು ಎರಡೂವರೆ ದಶಕಗಳ ಕಾಲ ಪೊಲೀಸರು ಮತ್ತು ಅರಣ್ಯ ಇಲಾಖೆಯವರನ್ನು ಕಾಡಿದ ವೀರಪ್ಪನ್ 111 ನಾಗರಿಕರು, 33 ಪೊಲೀಸರು, 5 ಅರಣ್ಯ ಸಿಬ್ಬಂದಿ ಮತ್ತು ಒಬ್ಬ ಬಿಎಸ್‌ಎಫ್ ಯೋಧನನ್ನು ಹತ್ಯೆ ಮಾಡಿದ್ದ. ಆತನ ವಿರುದ್ಧ 182 ಪ್ರಕರಣಗಳು ದಾಖಲಾಗಿದ್ದು, 135 ಮಂದಿ ಸಹಚರರನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಬಿಜೆಪಿ-ಕಾಂಗ್ರೆಸ್‍ನ ಹೊಸ ಮುಖಗಳ ಪ್ರಯೋಗ ಶಾಲೆಯಾಗುತ್ತಾ ರಾಜ್ಯದ ಏಕೈಕ ಮೀಸಲು ಕ್ಷೇತ್ರ ಸುಳ್ಯ?

ವೀರಪ್ಪನ್ ಹಾವಳಿಯಿಂದ ಮುಕ್ತವಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಈಗ ಅರಣ್ಯ ಇಲಾಖೆ ಪ್ರವಾಸೋದ್ಯಮಕ್ಕೆ ಅದ್ಯತೆ ನೀಡಿದೆ. ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಕೆ. ಗುಡಿ, ಭರಚುಕ್ಕಿ ಜಲಪಾತ, ಬಂಡೀಪುರಗಳಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ.

TAGGED:assembly electionchamarajanagarcongressH NagappamysuruVeerappanಕಾಂಗ್ರೆಸ್ಚಾಮರಾಜನಗರಮೈಸೂರುರಾಜೂಗೌಡವಿಧಾನಸಭಾ ಚುನಾವಣೆವೀರಪ್ಪನ್ಹೆಚ್. ನಾಗಪ್ಪ
Share This Article
Facebook Whatsapp Whatsapp Telegram

Cinema Updates

Kamal Haasan
ಕರ್ನಾಟಕದಲ್ಲಿ ಥಗ್‌ ಲೈಫ್‌ ರಿಲೀಸ್‌ಗಾಗಿ ಸುಪ್ರೀಂಗೆ PIL
12 hours ago
rakshitha prem
ಇಷ್ಟು ಜನ ಸೇರ್ತಾರೆ ಅಂತಾ ಗೊತ್ತಿರ್ಲಿಲ್ಲ ಅನ್ನೋದು ಎಷ್ಟು ಸರಿ? – ಕಾಲ್ತುಳಿತ ದುರಂತಕ್ಕೆ ರಕ್ಷಿತಾ ಬೇಸರ
15 hours ago
Khushi Mukherjee
ನಾನು ಚಡ್ಡಿ ಹಾಕಿದ್ನಾ.. ಇಲ್ವಾ ಅಂತ ಬಂದು ನೋಡಿದ್ರಾ? – ನೆಟ್ಟಿಗರ ಕಾಮೆಂಟ್‌ಗೆ ಖುಷಿ ಮುಖರ್ಜಿ ಬೋಲ್ಡ್‌ ಉತ್ತರ
16 hours ago
jayam ravi
ವದಂತಿ ಗೆಳತಿ ಜೊತೆ ಹಾರ ಹಾಕಿಸಿಕೊಂಡ ಜಯಂ ರವಿ
16 hours ago

You Might Also Like

BJP MLA Sharanu Salagar and Team 40 cattle in basavakalyan in Bidar 2
Bidar

ಶರಣು ಸಲಗರ್ ದಾಳಿ – ಬಲಿಗೆ ಸಿದ್ಧವಾಗಿದ್ದ 40 ಗೋವುಗಳ ರಕ್ಷಣೆ

Public TV
By Public TV
1 minute ago
bengaluru stambede rcb
Bengaluru City

Chinnaswamy Stampede | ಡಿಎನ್‌ಎ ಕಂಪನಿ ಮುಖ್ಯಸ್ಥ ನಾಪತ್ತೆ

Public TV
By Public TV
25 minutes ago
Elon Musk Trump
Latest

ಟ್ರಂಪ್‌ ಉಚ್ಚಾಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಮಸ್ಕ್‌ ಕಂಪನಿಗಳಿಗೆ ಶಾಕ್‌!

Public TV
By Public TV
29 minutes ago
Tumkur
Crime

ತುಮಕೂರು ಬಳಿ ಭೀಕರ ಅಪಘಾತ – ಮೂವರು ಬೈಕ್‌ ಸವಾರರು ಸಾವು

Public TV
By Public TV
1 hour ago
Elon Musk
Latest

ಸರ್ಕಾರದಿಂದ ಹೊರ ಬಂದ ಬೆನ್ನಲ್ಲೇ ಟ್ರಂಪ್‌ ವಿರುದ್ಧ ಮಸ್ಕ್‌ ಕೆಂಡಾಮಂಡಲ

Public TV
By Public TV
2 hours ago
CRIME
Crime

ಕಲಬುರಗಿ | ಹಳೇ ದ್ವೇಷಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?