Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗುರುವನ್ನು ಸೋಲಿಸಿದ ಶಿಷ್ಯ: ಸಿಟಿ ರವಿ ಸೋತಿದ್ದು ಎಲ್ಲಿ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chikkamagaluru | ಗುರುವನ್ನು ಸೋಲಿಸಿದ ಶಿಷ್ಯ: ಸಿಟಿ ರವಿ ಸೋತಿದ್ದು ಎಲ್ಲಿ?

Chikkamagaluru

ಗುರುವನ್ನು ಸೋಲಿಸಿದ ಶಿಷ್ಯ: ಸಿಟಿ ರವಿ ಸೋತಿದ್ದು ಎಲ್ಲಿ?

Public TV
Last updated: May 14, 2023 4:30 pm
Public TV
Share
3 Min Read
CT Ravi
SHARE

ಚಿಕ್ಕಮಗಳೂರು: ಯಾವುದೇ ಜಾತಿ ಮತಗಳ ಬಲವೂ ಇಲ್ಲದೇ 19ನೇ ಸುತ್ತಿನವರೆಗೂ ಪೈಪೋಟಿ ಕೊಟ್ಟು ಸೋತಿರುವ ಸಿ.ಟಿ.ರವಿ (C.T.Ravi) ಅವರದ್ದು ಸೋಲೇ ಅಲ್ಲ. ಸಿ.ಟಿ.ರವಿ ಸೋಲಿನಲ್ಲೂ ಗೆಲುವನ್ನು ಕಂಡಿದ್ದಾರೆ ಎನ್ನುತ್ತಿದ್ದಾರೆ ತಾಲೂಕಿನ ಮತದಾರರು.

20 ವರ್ಷಗಳಿಂದ ವಿಧಾನಸೌಧಕ್ಕೆ ಖಾಯಂ ಸದಸ್ಯನಾಗಿದ್ದ ಸಿ.ಟಿ.ರವಿಗೆ ಐದನೇ ಬಾರಿ ವಿಧಾನಸೌಧ ಪ್ರವೇಶಿಸುವ ಕನಸಿಗೆ ಮತದಾರರು ತಣ್ಣೀರೆರಚಿದ್ದಾರೆ. 20 ವರ್ಷಗಳಿಂದ ಹಿಡಿತ ಸಾಧಿಸಿದ್ದ ಅವರಿಗೆ ಈ ಸೋಲನ್ನು ಅರಗಿಸಿಕೊಳ್ಳುವುದು ಕಷ್ಟಸಾಧ್ಯ. ಈ ಸೋಲನ್ನು ಸ್ವತಃ ಸಿ.ಟಿ.ರವಿಯವರೇ ಊಹಿಸಿರಲಿಲ್ಲ. ಮತದಾರರೇ ಮೋಸ ಮಾಡಿದ್ದಾರೋ, ನಂಬಿಕಸ್ಥರು ಮೋಸ ಮಾಡಿದ್ದಾರೋ ಅಥವಾ ಬದಲಾವಣೆಯ ಗಾಳಿ ಬೀಸಿದೆಯೋ ಗೊತ್ತಿಲ್ಲ. ಆದರೆ ಎರಡು ದಶಕಗಳಿಂದ ಚಿಕ್ಕಮಗಳೂರಿನಲ್ಲಿ (Chikkamagaluru) ಸೋಲಿಲ್ಲದ ಸರದಾರನಂತೆ ಪಾರುಪಥ್ಯ ಮೆರೆದಿದ್ದ ಅವರು ಮೊದಲ ಸೋಲನ್ನು ಕಂಡಿದ್ದಾರೆ. ಇದನ್ನೂ ಓದಿ: ನನ್ನ ಜೊತೆಗೇ ಇದ್ದು ಬೆನ್ನಿಗೆ ಚೂರಿ ಹಾಕಿದ್ರು: ಪರಾಜಿತ ಬಿಜೆಪಿ ಅಭ್ಯರ್ಥಿ ಈಶ್ವರ್ ಸಿಂಗ್ ಸ್ವ ಪಕ್ಷದ ವಿರುದ್ಧ ಕಿಡಿ

ಗುರುವನ್ನು ಸೋಲಿಸಿದ ಶಿಷ್ಯ:
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷದಿಂದ 6 ಜನ ಸ್ಪರ್ಧಿಸಿದ್ದರು. ಅವರೆಲ್ಲಾ 20 ವರ್ಷಗಳಿಂದಲೂ ಸಿ.ಟಿ.ರವಿ ವಿರೋಧಿಗಳೇ. ಅವರ ಎದುರು ಸೋತಿದ್ದರೆ ಬಿಜೆಪಿಯವರಿಗೆ (BJP) ಅಷ್ಟೇನು ನೋವಾಗುತ್ತಿರಲಿಲ್ಲ. ಆದರೆ ಅದೇ 20 ವರ್ಷಗಳಿಂದ ಸ.ಟಿ.ರವಿ ಜೊತೆಗಿದ್ದು, ಅವರ ಆಪ್ತರೆಂದೇ ಗುರುತಿಸಿಕೊಂಡಿದ್ದ ತಮ್ಮಯ್ಯನೆದುರು (H.D.Thammaiah) ಸೋತಿದ್ದು ಬಿಜೆಪಿಗೆ ಬಿಸಿ ತುಪ್ಪವಾಗಿದೆ. ಸಿ.ಟಿ.ರವಿ ಜೊತೆಗಿದ್ದು ರಾಜಕೀಯವನ್ನು ಕರಗತ ಮಾಡಿಕೊಂಡಿದ್ದ ತಮ್ಮಯ್ಯ ನಂತರ ಮಾಡಿದ ಒಳ ರಾಜಕೀಯವೇ ಇಂದು ಬಿಜೆಪಿ ಸೋಲಿಗೆ ಕಾರಣವಾಗಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇದನ್ನೂ ಓದಿ: ಸಮುದಾಯದ ಐವರಿಗೆ ಸಚಿವ ಸ್ಥಾನ, 1 ಡಿಸಿಎಂ ಕೊಡಿ – ಮುಸ್ಲಿಂ ಮುಖಂಡರ ಆಗ್ರಹ

ಭೋಜೇಗೌಡರ ಲೀಡ್ ರೋಲ್?
ಸಿ.ಟಿ.ರವಿ ಸೋಲಿಗೆ ಜೆಡಿಎಸ್ (JDS) ಎಂಎಲ್ಸಿ ಭೋಜೇಗೌಡರದ್ದು ಲೀಡ್ ರೋಲ್ ಇದೆ ಎನ್ನುತ್ತಾರೆ ಮತದಾರರು. ಯಾಕೆಂದರೆ ತಾನೇ ಜೆಡಿಎಸ್ ಟಿಕೆಟ್ ಕೊಡಿಸಿ ನಿಲ್ಲಿಸಿದ್ದ ತಿಮ್ಮಶೆಟ್ಟಿ ಜೆಡಿಎಸ್ ಅಭ್ಯರ್ಥಿಯಾಗಿ ಅಧಿಕೃತವಾಗಿ ಕಣಕ್ಕಿಳಿದಿದ್ದರೂ ಕೂಡಾ ರಾಜಾರೋಷವಾಗಿ ಜೆಡಿಎಸ್‌ಗೆ ಮತ ಹಾಕಬೇಡಿ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಹಳ್ಳಿಹಳ್ಳಿ ಸುತ್ತಿ ಪಂಚಾಯಿತಿ ಕಟ್ಟೆ ಮೇಲೆ ಭಾಷಣ ಮಾಡಿದ್ದರು. ಸಖರಾಯಪಟ್ಟಣ ಹಾಗೂ ಲಕ್ಯಾ ಭಾಗದಲ್ಲಿ ಒಂದಷ್ಟು ಹಿಡಿತವಿರುವ ಭೋಜೇಗೌಡ ಕೂಡಾ ಸಿ.ಟಿ.ರವಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ಸೋತಿರೋದಕ್ಕೆ ಕುಂಟು ನೆಪ ಹೇಳೋದು ಸರಿಯಲ್ಲ: ಕೈ ನಾಯಕರಿಗೆ ಸೂರ್ಯ ತಿರುಗೇಟು

ಯಡಿಯೂರಪ್ಪ ಕೈಕೊಟ್ರಾ?
ಇಂತಹದ್ದೊಂದು ಜಿಜ್ಞಾಸೆ ಚಿಕ್ಕಮಗಳೂರು ಮತದಾರರನ್ನು ಕಾಡುತ್ತಲೇ ಇದೆ. ಯಡಿಯೂರಪ್ಪ ಒಮ್ಮೆ ಚಿಕ್ಕಮಗಳೂರಿಗೆ ಭೇಟಿ ನೀಡಿ ಎಂ.ಜಿ.ರಸ್ತೆಯಲ್ಲಿ ಬಂದು ಒಮ್ಮೆ ಕೈಬೀಸಿ ಹೋಗಿದ್ದರೆ ಸಾಕಿತ್ತು. ಇಂದು ಅದೇ 5 ಸಾವಿರ ಮತಗಳ ಅಂತರದಲ್ಲಿ ಸಿ.ಟಿ.ರವಿ ಗೆಲ್ಲುತ್ತಿದ್ದರು ಎನ್ನುವುದು ಮತದಾರರ ಮನದಾಳದ ಮಾತು. ಇದರ ಜೊತೆಗೆ, ಜಿಲ್ಲೆಗೆ ಯಾವುದೇ ಸ್ಟಾರ್ ಕ್ಯಾಂಪೇನರ್ ಕೂಡ ಬರಲಿಲ್ಲ. 4 ಪಕ್ಷ ಹಾಗೂ 3 ಬಲಿಷ್ಠ ಸಮುದಾಯಗಳ ಜೊತೆ ಹೋರಾಡಿ, ಹೊಡೆದಾಡಿದ್ದು ಎಂದರೇ ಅದು ಸಿ.ಟಿ.ರವಿ ಮಾತ್ರ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಜೊತೆಗೆ ಇಡೀ ವ್ಯವಸ್ಥೆ ವಿರುದ್ಧವಾಗಿದ್ದರೂ ಕಾರ್ಯಕರ್ತರ ಜೊತೆ ಏಕಾಂಗಿಯಾಗಿ ಹೋರಾಡಿದ ಸಿ.ಟಿ.ರವಿ ಸೋಲನ್ನು ಅವರ ಅಭಿಮಾನಿಗಳು ಗೆಲುವು ಎಂದೇ ಬಣ್ಣಿಸಿದ್ದಾರೆ. ನಾವು ಸೋತಿದ್ದೇವೆ ಅಷ್ಟೇ, ಸತ್ತಿಲ್ಲ ಎಂದು ಸೋಲನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಗದ್ದುಗೆ ಏರಿದ ಕೈಗೆ ಅಣ್ಣಾಮಲೈ ಅಭಿನಂದನೆ

ಸಿ.ಟಿ.ರವಿ ಸೋಲಿಗೆ ಪ್ರಮುಖ ಕಾರಣಗಳು :
1. ಲಿಂಗಾಯುತ, ಕುರುಬ, ಮುಸ್ಲಿಂ ಸಮುದಾಯದ ವಿರುದ್ಧದ ಹೇಳಿಕೆಗಳು.
2. ಸಿದ್ದರಾಮಯ್ಯ ವಿರುದ್ಧ ನಿರಂತರ ಹೇಳಿಕೆ ನೀಡುತ್ತಾ ಸಿದ್ದರಾಮಯ್ಯನನ್ನು ಸಿದ್ರಾಮುಲ್ಲಾ ಖಾನ್ ಎಂದು ಹೇಳಿದ್ದು.
3. ರಾಷ್ಟ್ರ ರಾಜಕಾರಣಕ್ಕೆ ಹೋಗಿ ಕ್ಷೇತ್ರದಲ್ಲಿ ಒಂದಷ್ಟು ಹಿಡಿತ ಹಾಗೂ ಸಂಪರ್ಕ ಕಳೆದುಕೊಂಡದ್ದು.
4. ಲಿಂಗಾಯುತ ಪ್ರಾಬಲ್ಯದ ಕ್ಷೇತ್ರದಲ್ಲಿ ಬಿಎಸ್‌ವೈ ಕೈಕೊಟ್ಟದ್ದು ಹಾಗೂ ಸ್ಟಾರ್ ಪ್ರಚಾರಕರ ಕೊರತೆ.
5. ವ್ಯವಸ್ಥೆಯ ವಿರುದ್ಧ ಏಕಾಂಗಿಯಾಗಿ ಹೋರಾಡಿದ್ದು.
6. ಸಿ.ಟಿ.ರವಿಯನ್ನು ಸೋಲಿಸಲೇಬೇಕೆಂದು ಸ್ವಪಕ್ಷೀಯರ ಜೊತೆ ವಿಪಕ್ಷೀಯರು ಕೈಜೋಡಿಸಿದ್ದು.
7. 4 ಬಾರಿ ಶಾಸಕರಾಗಿದ್ದಾರೆ, ಸಾಕು ಎಂದು ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು.
8. ಮೂಡಿಗೆರೆ ಕ್ಷೇತ್ರದಲ್ಲಿ ಎಂ.ಪಿ.ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದರಿಂದ ದಲಿತ ವಿರೋಧಿ ಎಂಬ ಹಣೆಪಟ್ಟಿಯ ಆರೋಪ. ಇದನ್ನೂ ಓದಿ: ಸಿಎಂ ಕುರ್ಚಿ ಫೈಟ್‌; 50-50 ಪ್ಲಾನ್‌ ಡಿಕೆಶಿ ಮುಂದಿಡ್ತಾರಾ ಸಿದ್ದು?

TAGGED:bjpc t raviChikkamagalurucongresselectionH.D.Thammaiahpoliticsಕಾಂಗ್ರೆಸ್ಚಿಕ್ಕಮಗಳೂರುಚುನಾವಣೆಬಿಜೆಪಿರಾಜಕೀಯಸಿ.ಟಿ ರವಿಹೆಚ್.ಡಿ.ತಮ್ಮಯ್ಯ
Share This Article
Facebook Whatsapp Whatsapp Telegram

Cinema news

Ranveer Singh Rishab Shetty Kantara
ʻಕಾಂತಾರʼ ದೈವ ನಿಂದಿಸಿದ್ದ ರಣವೀರ್‌ಗೆ ಪಾಪಪ್ರಜ್ಞೆ – ಚಾಮುಂಡಿ ದೇಗುಲದಲ್ಲೇ ಕ್ಷಮೆ ಕೇಳಲು ನಿರ್ಧಾರ
Cinema Districts Karnataka Latest National Sandalwood South cinema Top Stories
Badshah Isha Rikhi Marriage
ಡಿವೋರ್ಸ್ ಪಡೆದು 6 ವರ್ಷಗಳ ಬಳಿಕ ರ‍್ಯಾಪರ್ ಬಾದ್‌ಶಾ ಎರಡನೇ ಮದುವೆ
Cinema Latest Top Stories
Dhurandhar 2 1
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ ‘ಧುರಂಧರ್‌ 2’; 800 ಕೋಟಿ ಕ್ಲಬ್‌ ಸೇರುವತ್ತ ಓಟ
Bollywood Cinema Latest Top Stories
Dhurandhar 2
ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ‘ಧುರಂಧರ್‌ 2’ – ಮೂರೇ ದಿನದಲ್ಲಿ ವಿಶ್ವಾದ್ಯಂತ 500 ಕೋಟಿ ಕಲೆಕ್ಷನ್‌
Bollywood Cinema Latest Top Stories

You Might Also Like

Chitradurga Murder
Chitradurga

ಎರಡು ಕುಟುಂಬದ ಮಧ್ಯೆ ಆಸ್ತಿ ವೈಷಮ್ಯ – ಅಪ್ರಾಪ್ತನಿಂದ ವ್ಯಕ್ತಿಯ ಕೊಲೆ

Public TV
By Public TV
19 minutes ago
KSOU 2
Bengaluru City

KSOU ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಆರೋಪ – ಸರ್ಕಾರಕ್ಕೆ ಪತ್ರ ಬರೆದು ವಿವಿ ಕುಲಪತಿಗಳಿಂದ ಸ್ಪಷ್ಟನೆ

Public TV
By Public TV
23 minutes ago
ajit pawar plane crash
Bengaluru City

ಅಜಿತ್ ಪವಾರ್ ಅವರದ್ದು ವಿಮಾನ ದುರಂತವಲ್ಲ ವ್ಯವಸ್ಥಿತ ಕೊಲೆ – ಬೆಂಗಳೂರಲ್ಲಿ ಝೀರೋ ಎಫ್‌ಐಆರ್‌ ದಾಖಲು

Public TV
By Public TV
41 minutes ago
Harish Rana
Latest

13 ವರ್ಷಗಳ ನರಕಯಾತನೆಗೆ ಮುಕ್ತಿ – ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ

Public TV
By Public TV
1 hour ago
Siddaramaiah DK Shivakumar cabinet meeting
Bagalkot

ದಾವಣಗೆರೆ, ಬಾಗಲಕೋಟೆ ಉಪಸಮರ – ಜವಾಬ್ದಾರಿ ಹಂಚಿಕೆಗೆ ಸಿದ್ಧತೆ; ಬುಧವಾರ ಸಿಎಲ್‌ಪಿ ಸಭೆ

Public TV
By Public TV
1 hour ago
KMF RCB
Bengaluru City

ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ RCB ಜೊತೆ ಒಪ್ಪಂದ – 1 ವರ್ಷಕ್ಕೆ 4.80 ಕೋಟಿ ಕೊಟ್ಟ KMF

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?