ಇದು ನನ್ನ ಕೊನೆಯ ಚುನಾವಣೆ: ರಮೇಶ್‌ ಜಾರಕಿಹೊಳಿ‌

Public TV
3 Min Read
ramesh jarkiholi

ಬೆಳಗಾವಿ: ಯಾವಾಗ ಯುದ್ಧ ಮಾಡಬೇಕು. ಯಾವಾಗ ಬಾಣ ಬಿಡಬೇಕು, ಆ ತರಬೇತಿ ತಗೊಂಡು ರಾಜಕಾರಣಕ್ಕೆ ಬಂದಿದ್ದೇವೆ‌. ಇದು ನನ್ನ ಕೊನೆಯ ಚುನಾವಣೆಯಾಗಿದೆ ಎಂದು‌ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ‌ (Ramesh Jarkiholi) ಹೇಳಿದರು.

ಗೋಕಾಕ್‌ನಲ್ಲಿ ಬಿಜೆಪಿ (BJP) ಬೂತ್ ಅಧ್ಯಕ್ಷರು, ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಹಲವು ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಹಾಗೂ ಪ್ರಧಾನಿ ಗೆಲ್ಲಲು ಬೂತ್ ಮಟ್ಟದ ಅಧ್ಯಕ್ಷರು, ಪೇಜ್‌ ಪ್ರಮುಖರು ಕಾರಣರಾಗಿದ್ದಾರೆ. ಅಧಿಕಾರದಲ್ಲಿ ಇವತ್ತು ನಾವು ಮುಂದುವರಿಯಲು ಬೂತ್ ಮಟ್ಟದ ಅಧ್ಯಕ್ಷರು, ಪೇಜ್‌ ಪ್ರಮುಖರು ಅಂತಾ ಪ್ರಧಾನಿ ಮೋದಿಯವರೇ ಹೇಳಿದ್ದಾರೆ. ನಾನು ಕಳೆದ 5 ಬಾರಿ ಕಾಂಗ್ರೆಸ್ ಪಕ್ಷದ ಶಾಸಕನಾಗಿದ್ದೆ‌. ನಾನು ಕಾಂಗ್ರೆಸ್ ಪಕ್ಷದ ಶಾಸಕನಾಗಿದ್ದಾಗ ನಾವ್ ನಾವೇ ಗುದ್ದಾಡುವ ಪರಿಸ್ಥಿತಿ ಇತ್ತು. ಇಂದು ಇಷ್ಟು ಜನ ಸೇರಿದ್ದೀರಿ ಎಂದರೆ 1999ರ ನನ್ನ ಚುನಾವಣೆಯ ದಾಖಲೆಯನ್ನು ಮುರಿಯುತ್ತೀರಿ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

congress flag

ನಾನು ಕಾಂಗ್ರೆಸ್‌ನಲ್ಲಿದ್ದಾಗ (Congress) 200 ರಿಂದ 300 ಜನ ಸೇರಿ 20 ರಿಂದ 30 ಸಾವಿರ ಲೀಡ್ ಆಗುತ್ತಿತ್ತು. ಇವತ್ತು 8,500 ಕಾರ್ಯಕರ್ತರು ಸೇರಿದ್ದೀರಿ‌ ಎಂದರೇ 1999ರ ರೆಕಾರ್ಡ್ ಮುರಿಯಿರಿ ಸಾಕು. ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಹೀಗಾಗಿ 54 ಸಾವಿರ ಲೀಡ್ ಆಗಬೇಕು. ಬಿಜೆಪಿ ಬರುವ ಪೂರ್ವದಲ್ಲಿ ನನ್ನ ಹಿತೈಷಿಗಳು ಸೇರಿ ಬಹಳಷ್ಟು ಜನ ಅಲ್ಲಿ ಹೋಗಬೇಡ ಎಂದಿದ್ದರು. ಆದರೆ ಹಳೆಯ ಬಿಜೆಪಿ ಶಾಸಕರಿಗಿಂತ ಹೆಚ್ಚು ನಾನು ಆ ಪಕ್ಷದಲ್ಲಿ ವಿಲೀನ ಆಗಿದ್ದೇನೆ. ದಿಲ್ಲಿಯಿಂದ ಬೆಂಗಳೂರಿನವರೆಗೆ ಪಕ್ಷದ ನಾಯಕರು ನನ್ನ ಪ್ರೀತಿಯಿಂದ ನಡೆಸಿಕೊಂಡ ರೀತಿ ನೋಡಿದ್ರೆ ನನಗೆ ಬಹಳ ಸಂತೋಷ ಆಗುತ್ತದೆ. ಇವತ್ತು ನಾನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟ ಮುಸ್ಲಿಂ ಯುವಕರು

ಇಷ್ಟು ಪ್ರೀತಿ ಇದ್ರೆ ಮಂತ್ರಿ ಯಾಕೆ ಮಾಡಿಲ್ಲ ಎಂದು ನೀವು ಕೇಳಬಹುದು. ನನ್ನ ಮಂತ್ರಿ ಯಾಕೆ ಮಾಡಿಲ್ಲ ಅಂತಾ ಪ್ರಶ್ನೆ ಇದೆ. ಮುಂದೆ ಎಲ್ಲಕ್ಕಿಂತ ದೊಡ್ಡ ಹುದ್ದೆ ಯಾಕೆ ಕೊಡಬಾರದು ಪ್ರಮುಖರು? ಬಹಳಷ್ಟು ಜನ ಮಂತ್ರಿ ಯಾಕೆ ಮಾಡಿಲ್ಲ ಅಂತಾ ಪ್ರಶ್ನೆ ಮಾಡ್ತಾರೆ. ಆದ್ರೆ ಕೆಲವು ಸಲ ಶಕುನಿಗಳು ಯಶಸ್ವಿಯಾಗುತ್ತಾರೆ. ಬಳಿಕ ಅವರದ್ದು ಸೋಲು ನಮ್ಮ ಗೆಲುವಾಗುತ್ತದೆ. ರಮೇಶ್ ಜಾರಕಿಹೊಳಿ ಪಕ್ಷದಲ್ಲಿ ಉಳಿಯಲ್ಲ ಪಕ್ಷ ಬಿಡ್ತಾರೆ ಅಂತಾ ಶಕುನಿಗಳು ಕಿವಿ ತುಂಬಿದ್ದಾರೆ ಎಂದು ಟಾಂಗ್ ನೀಡಿದರು.

bjp flag

ಈಗ ಕೊನೆಗೆ ನಾನು ಯುದ್ಧ ಪ್ರಾರಂಭ ಮಾಡಿದ್ದೇನೆ. ಕಳೆದ ಒಂದೂವರೆ ವರ್ಷದಿಂದ ನಾನು ಶಾಂತನಾಗಿ ಕುಳಿತಿದ್ದೇನೆ. ಯಾಕೆ ಸಾಹುಕಾರ್ ಗಪ್ಪ ಕುಂತಾನು ಅಂತಾ ಎಲ್ಲರಿಗೂ ಸಂಶಯವಿತ್ತು. ಯಾವಾಗ ನಾನು ಬೆಳಗಾವಿಯಲ್ಲಿ ಯುದ್ಧ ಪ್ರಾರಂಭ ಮಾಡಿದೆ, ಬಿಜೆಪಿ ಬಿಡಲ್ಲ ಅಂತಾ ಅವರಿಗೆ ಗೊತ್ತಾಯ್ತು. ಸರಿಯಾದ ಸಮಯಕ್ಕೆ ನಾನು ಸುಮ್ಮನೆ ಕುಳಿತಿದ್ದೆ. ಯುದ್ಧ ಮಾಡಬೇಕಾದರೇ ಸಮಯ ಬೇಕಾಗುತ್ತದೆ. ಯುದ್ಧ ಮಾಡಬೇಕು, ಯಾವಾಗ ಬಾಣ ಬಿಡಬೇಕು ಆ ತರಬೇತಿ ತಗೊಂಡು ರಾಜಕಾರಣಕ್ಕೆ ಬಂದಿದ್ದೇವೆ. ಈಗ ಸೂಕ್ತ ಸಮಯದಲ್ಲಿ ನಾವು ಯುದ್ಧ ಪ್ರಾರಂಭ ಮಾಡಿದ್ದೇವೆ. ಬೆಳಗಾವಿ ಜಿಲ್ಲೆ ಸೇರಿ ಇತರ ಕ್ಷೇತ್ರದಲ್ಲಿ ಕೆಲಸ ಮಾಡಿ ಬಿಜೆಪಿ 140 ಸ್ಥಾನ ಗೆಲ್ಲಲು ಸಂಕಲ್ಪ ಮಾಡಿ ಕೆಲಸ ಪ್ರಾರಂಭ ಮಾಡಿದ್ದೇನೆ. ಗೋಕಾಕ್‌ ಗ್ರಾಮೀಣ ಮಟ್ಟದಲ್ಲಿ ಚೆನ್ನಾಗಿದೆ. ನಗರದಲ್ಲಿ ಒತ್ತು ಕೊಟ್ಟು ಕೆಲಸ ಮಾಡಬೇಕು ಎಂದರು. ಇದನ್ನೂ ಓದಿ: ಯುದ್ಧ ವಿಮಾನದ ಹಿಂದಿದ್ದ ಹನುಮಂತನ ಚಿತ್ರ ತೆಗೆದ ಹೆಚ್‌ಎಎಲ್

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *