‘ಸಂಧ್ಯಾ ಸುರಕ್ಷಾ’ ಹೆಚ್ಚುವರಿ ಹಣ ಬರೋಕೆ ನವೆಂಬರ್ ವರೆಗೆ ಕಾಯಬೇಕು!

Public TV
1 Min Read
00f27a 4ffcc6a42615454e9fb8b8153132ce89

– ಕಂದಾಯ ಇಲಾಖೆಗೆ ಎಚ್‍ಡಿಕೆ ಕೊಟ್ಟಿದ್ದೇನು?

ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಮಂಡಿಸಿದ ಬಜೆಟ್‍ನಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಫಲಾನುಭವಿಗಳ ಮಾಸಾಶನವನ್ನು ಏರಿಕೆ ಮಾಡಲಾಗಿದೆ. ಇದುವರೆಗೆ 600 ರೂ. ಇದ್ದ ಮಾಸಾಶನ ಇನ್ನು ಮುಂದೆ 1000 ರೂ.ಗೆ ಏರಿಕೆಯಾಗಿದೆ. ಆದರೆ ಈ ಏರಿಕೆ ಈ ವರ್ಷ ನವೆಂಬರ್ 1ರಿಂದ ಜಾರಿಗೆ ಬರಲಿದೆ.

65 ವರ್ಷ ಮೀರಿದ 32.92 ಲಕ್ಷ ವೃದ್ಧರಿಗೆ ಇದರ ಪ್ರಯೋಜನ ಪಡೆಯಲಿದ್ದಾರೆ. ಈ ಮೊತ್ತ ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ ಏರಿಕೆಯಾಗಲಿದೆ. ಇದಕ್ಕಾಗಿ ಈ ಬಜೆಟ್‍ನಲ್ಲಿ ಹೆಚ್ಚುವರಿ 660 ಕೋಟಿ ರೂ. ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯದಲ್ಲಿ ಮರು ಭೂಮಾಪನಾ ಕಾರ್ಯ ಆರಂಭವಾಗಲಿದೆ. ಹಂತ ಹಂತವಾಗಿ ಈ ಪ್ರಕ್ರಿಯೆ ನಡೆಯಲಿದ್ದು, ಮೊದಲಿಗೆ 5 ಜಿಲ್ಲೆಗಳಲ್ಲಿ ಮರು ಭೂ ಮಾಪನ ಆರಂಭವಾಗಲಿದೆ. 50 ನಾಡ ಕಚೇರಿಗಳ ಮೂಲಭೂತ ಸೌಕರ್ಯ ಕಲ್ಪಿಸಲು 10 ಕೋಟಿ ರೂಪಾಯಿ ನೀಡುವುದಾಗಿ ಸಿಎಂ ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *