ಎಲ್ಲಾ ಹಗರಣವನ್ನು ಬಿಚ್ಚಿಡುತ್ತೇನೆ – ಮಾಧುಸ್ವಾಮಿ ವಿರುದ್ಧ ಸಿಡಿದೆದ್ದ ಮಾಜಿ ಶಾಸಕ ಸುರೇಶ್ ಬಾಬು

Public TV
1 Min Read
J C Madhuswamy And Suresh Babu

ತುಮಕೂರು: ವಿಧಾನಸಭಾ ಚುನಾವಣಾ (Karnataka Assembly Election 2023) ಕಾವು ತುಮಕೂರಿನಲ್ಲೂ (Tumakuru) ಜೋರಾಗಿದೆ. ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ (J.C Madhuswamy) ಮತ್ತು ಮಾಜಿ ಶಾಸಕ ಸುರೇಶ್ ಬಾಬು (Suresh Babu) ಪರಸ್ಪರ ವಾಕ್ಸಮರಕ್ಕೆ ಇಳಿದಿದ್ದಾರೆ.

MADHUSWAMY ASSEMBLY SESSION 2021

ಮಾಧುಸ್ವಾಮಿ ನನ್ನನ್ನು ವೈಯಕ್ತಿಕವಾಗಿ ನಿಂದನೆ ಮಾಡುತಿದ್ದು ಅದು ಅವರ ಸಂಸ್ಕೃತಿ ತೋರಿಸುತ್ತಿದೆ. ಇದೇ ರೀತಿ ವೈಯಕ್ತಿಕ ನಿಂದನೆ ಮಾಡುತ್ತಿದ್ದರೆ ಮಾಧುಸ್ವಾಮಿ ಅವರ ಒಂದೊಂದು ಹಗರಣವನ್ನು ಬಿಚ್ಚಿಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಒಕ್ಕಲಿಗರ ಭದ್ರಕೋಟೆಯಲ್ಲಿ ಮತ್ತೆ ಡಿಕೆಶಿ ಸಿಎಂ ಜಪ- ಬಸವನ ಕಿವಿಯಲ್ಲಿ ತಮ್ಮ ಕೋರಿಕೆ ಹೇಳಿದ್ರಾ ಶಿವಕುಮಾರ್?

SURESH BABU

ನೀವು ಕೆಎಂಎಫ್‍ನಲ್ಲಿ (KMF) ಇದ್ದಾಗಿನಿಂದ ಹಿಡಿದು, ಏನೇನಾಯ್ತು ಎಲ್ಲಾ ಮಾಹಿತಿ ಇದೆ. ನಿಮ್ಮನ್ನು ಯಾರು ರಾಜಕೀಯಕ್ಕೆ ತಂದ್ರು, ನೀವೇನು ಹುಟ್ಟುತ್ತಲೇ ಬೃಹಸ್ಪತಿ ಅಲ್ಲ. ನಾಗಮಂಗಲದ ಒಬ್ಬ ಮುಖಂಡ ಇದ್ರು, ಅವರ ಹೆಸರು ಕೂಡ ಗೊತ್ತು. ಅವರು ನಿಮಗೆ ಏನೇನು ಧಾರೆ ಎರೆದ್ರು ಎಲ್ಲವೂ ಕೂಡ ನನಗೆ ಗೊತ್ತಿದ್ದು ನೀವು ಇದೇ ರೀತಿ ವೈಯಕ್ತಿಕ ನಿಂದನೆ ಮುಂದುವರಿಸಿದರೆ ಎಲ್ಲಾ ರಹಸ್ಯವನ್ನೂ ಬಿಚ್ಚಿಡಬೇಕಾಗುತ್ತದೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಎಲ್ಲಾ ನಾನೇ ನಿರ್ಧಾರ ಮಾಡ್ತೀನಿ- ದೊಡ್ಡಗೌಡ್ರ ಗುಟುರಿಗೆ ಎಲ್ಲರೂ ಗಪ್ ಚಿಪ್

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *