ಸೋಮವಾರ ಬಂದ್ ಆಗೇ ಆಗುತ್ತೆ, ಬಸ್ ಸಂಚಾರ, ಹೋಟೆಲ್ ತೆರೆಯಲು ಬಿಡಲ್ಲ: ವಾಟಾಳ್

Public TV
1 Min Read
VATAL NAGARAJ

ಬೆಂಗಳೂರು: ರಾಜ್ಯದ ಜನರಿಗೆ, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹಾಗೂ ನೆಲ-ಜಲ, ನಾಡು-ನುಡಿ ರಕ್ಷಣೆಗಾಗಿ ಅನೇಕ ಬೇಡಿಕೆಗಳನ್ನ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಸೋಮವಾರ ನಡೆಯುವ ಬಂದ್ ಗೆ ಬೆಂಬಲ ನೀಡುವಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್ ನಿಲ್ಲಿಸಲು ಕೆಲವರು ಪಿತೂರಿ ಮಾಡುತ್ತಿದ್ದಾರೆ. ಅವರಿಗೆ ಭಯವಿದೆ, ಎಲ್ಲಿ ಮುಂದೆ ಪ್ರಾದೇಶಿಕ ಪಕ್ಷ ಕಟ್ತಾರೆ ಅಂತಾ. ನಾನು ಇದಕ್ಕೆಲ್ಲ ಬಗ್ಗಲ್ಲ, ಬಂದ್ ನಡೆಸೇ ನಡೆಸ್ತೀವಿ. ಕೆಲ ಸಂಘಟನೆಗಳ ವಿರೋಧ ಇದೆ. ಬಂದ್ ಆದ್ರೇ ಏನಾಗಿ ಹೋಗುತ್ತೆ. ಬಂದ್ ವಾಪಸು ಪಡೆದುಕೊಳ್ಳುವ ಮಾತೇ ಇಲ್ಲ. ಹೀಗಾಗಿ ನಾಳೆ ಬಂದ್ ಆಗೇ ಆಗುತ್ತೆ. ಬಸ್ ಸಂಚಾರ, ಹೋಟೆಲ್ ತೆರೆಯಲು ಬಿಡಲ್ಲ ಅಂತಾ ವಾಟಾಳ್ ಸ್ಪಷ್ಟಪಡಿಸಿದ್ದಾರೆ.

ಬಳಿಕ ಸಾರಿಗೆ ನೌಕರರ ಸಂಘದ ಅನಂತ್ ಸುಬ್ಬರಾವ್ ಹಾಗು ನಾಗರಾಜ್ ವಿರುದ್ಧ ಕಿಡಿಕಾರಿದ ವಾಟಾಳ್ ನಾಗರಾಜ್, ನನ್ನ ಕರೆಯನ್ನು ಇವರು ಸ್ವೀಕರಿಸುತ್ತಿಲ್ಲ. ನಾನು ಅವರ ಹೋರಾಟಕ್ಕೆ ಸಾಕಷ್ಟು ಬೆಂಬಲ ನೀಡಿದ್ದೇನೆ. ಆದ್ರೆ ಈಗ ನನ್ನಂಥವನ ಕರೆಯನ್ನು ಸ್ಪೀಕರಿಸಲ್ಲ. ನಾಳೆ ಬಸ್ ಸಂಚಾರಕ್ಕೂ ಬಿಡಲ್ಲ ಅಂತಾ ಹೇಳಿದರು.

ಮಾಧ್ಯಮದ ವಿರುದ್ಧ ಕಿಡಿ: ಬಂದ್ ಗೆ ಕೆಲ ಸಂಘಟನೆಗಳ ವಿರೋಧವಿದೆ. ವಿರೋಧಿಸುವ ಸಂಘಟನೆಗಳು ಕೆಲ ಸಣ್ಣಪುಟ್ಟ ಹೇಳಿಕೆಗಳನ್ನು ಕೊಟ್ಟರೆ ಮಾಧ್ಯಮದವರು ಅದನ್ನೇ ದೊಡ್ಡದು ಮಾಡುತ್ತೀರಿ. ಒಟ್ಟಿನಲ್ಲಿ ಬಂದ್ ಗೆ ವಿರೋಧ ಮಾಧ್ಯಮ ಸೃಷ್ಠಿ ಅಂತಾ ಮಾಧ್ಯಮದ ಮೇಲೆ ಗೂಬೆ ಕೂರಿಸಿದರು.

Share This Article
Leave a Comment

Leave a Reply

Your email address will not be published. Required fields are marked *