ಬೆಂಗಳೂರು: ಹೊಸಬರ ಚಿತ್ರ ಎಂದರೆ ಒಂದು ಭಾಷೆಯಲ್ಲಿ ತೆರೆ ಕಾಣಲು ಹತ್ತಾರು ಸವಾಲುಗಳೆದುರಾಗುತ್ತವೆ. ಅಂಥಾದ್ದರಲ್ಲಿ ಹೊಸಾ ಹೀರೋ ಎಂಟ್ರಿ ಕೊಡುತ್ತಿರೋ ಚಿತ್ರವೊಂದು ಏಕಕಾಲದಲ್ಲಿಯೇ ಮೂರು ಭಾಷೆಗಳಲ್ಲಿ ತಯಾರಾಗಿದೆ ಅಂದರೆ ಅಚ್ಚರಿಯಾಗದಿರಲು ಸಾಧ್ಯವೇ ಇಲ್ಲ. ಸದ್ಯ ಬಿಡುಗಡೆಗೆ ತಯಾರಾಗಿರುವ ಖನನ ಚಿತ್ರವೂ ಅದೇ ಥರದ ಅಚ್ಚರಿಗೆ ಕಾರಣವಾಗಿದೆ.
- Advertisement 2
ಶ್ರೀನಿವಾಸ್ ನಿರ್ಮಾಣ ಮಾಡಿರುವ ಖನನ ಚಿತ್ರದ ಮೂಲಕ ಆರ್ಯವರ್ಧನ್ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಬಗ್ಗೆ ಎಲ್ಲೆಡೆ ಪಾಸಿಟಿವ್ ಟಾಕ್ಗಳೇ ಕೇಳಿ ಬರಲಾರಂಭಿದೆ. ಚಿತ್ರರಂಗ ಪಾಲಿಗೆ ತೀರಾ ಹೊಸತಾದ ಕಥೆಯೂ ಸೇರಿದಂತೆ ಖನನ ಪ್ರೇಕ್ಷಕರಿಗೆ ಹತ್ತಿರಾಗಿರೋದರ ಹಿಂದೆ ನಾನಾ ಕಾರಣಗಳಿವೆ. ಅದರಲ್ಲಿ ಈ ಚಿತ್ರ ರೂಪುಗೊಂಡಿರೋ ಅದ್ದೂರಿತನದ್ದು ಪ್ರಧಾನ ಪಾತ್ರ.
- Advertisement 3
- Advertisement 4
ರಾಧಾ ನಿರ್ದೇಶನ ಮಾಡಿರುವ ಈ ಚಿತ್ರ ಏಕ ಕಾಲದಲ್ಲಿಯೇ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ತಯಾರಾಗಿದೆ. ಹೊಸ ಹೀರೋ ಎಂಟ್ರಿ ಕೊಡುತ್ತಿರೋ ಚಿತ್ರವೊಂದನ್ನು ಈ ರೀತಿ ಮೂರು ಭಾಷೆಗಳಲ್ಲಿ ನಿರ್ಮಾಣ ಮಾಡಲು ಧೈರ್ಯ ಬೇಕಾಗುತ್ತದೆ. ಆದರೆ ನಿರ್ಮಾಪಕರು ಈ ಕಥೆಯನ್ನು ಮೆಚ್ಚಿಕೊಂಡು ಅಂಥಾದ್ದೊಂದು ಧೈರ್ಯ ಮಾಡಿದ್ದಾರೆ.
ಖನನ ಮೂಲಕ ಹೀರೋ ಆಗುತ್ತಿರುವ ಆರ್ಯವರ್ಧನ್ ನಿರ್ಮಾಪಕರ ಪುತ್ರ. ಆದ್ದರಿಂದಲೇ ತಮ್ಮ ಪುತ್ರನನ್ನು ಮೂರು ಭಾಷೆಗಳಲ್ಲಿ ಭರ್ಜರಿಯಾಗಿಯೇ ಲಾಂಚ್ ಮಾಡಲು ನಿರ್ಮಾಪಕ ಶ್ರೀನಿವಾಸ್ ಅವರು ಮುಂದಾಗಿದ್ದಾರೆ.
ಕನ್ನಡದ ಮಟ್ಟಿಗೆ ಹೊಸಾ ಹೀರೋ ಎಂಟ್ರಿ ಕೊಡುವ ಚಿತ್ರವೊಂದು ಈ ಪಾಟಿ ದೊಡ್ಡ ಮೊತ್ತದ ಬಜೆಟ್ಟಿನಲ್ಲಿ ನಿರ್ಮಾಣಗೊಂಡಿದ್ದು ಅಪರೂಪ. ನುರಿತ, ಕ್ರಿಯಾಶೀಲ ತಾಂತ್ರಿಕ ವರ್ಗ, ಎಲ್ಲದರಲ್ಲಿಯೂ ಅಚ್ಚುಕಟ್ಟುತನ ಹೊಂದಿರೋ ಈ ಚಿತ್ರ ತುಸು ತಡವಾದರೂ ಅದ್ಧೂರಿಯಾಗಿಯೇ ರೆಡಿಯಾಗಿ ಬಿಡುಗಡೆಗೆ ತಯಾರಾಗಿದೆ. ಖನನ ಇದೇ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.