ಆನಂದ್ ಸಿಂಗ್ ತಂದೆ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಕಂಪ್ಲಿ ಗಣೇಶ್

Public TV
1 Min Read
Ganesh Anand Singh

ಬಳ್ಳಾರಿ: ಹೊಸಪೇಟೆಯ ಶಾಸಕ ಆನಂದ್ ಸಿಂಗ್ ತಂದೆ ಪೃಥ್ವಿರಾಜ್ ಸಿಂಗ್ ಅವರ ಕಾಲು ಮುಗಿದು ತಪ್ಪಾಯಿತು ಕ್ಷಮಿಸಿ ಎಂದು ಕಂಪ್ಲಿ ಶಾಸಕ ಗಣೇಶ ಕೇಳಿಕೊಂಡಿದ್ದಾರೆ.

ಹೊಸಪೇಟೆಯ ವೇಣುಗೋಪಾಲ ದೇವಸ್ಥಾನಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಶಾಸಕರು, ಪೃಥ್ವಿರಾಜ್ ಸಿಂಗ್ ಅವರ ಕಾಲು ಮುಗಿದು ತಪ್ಪು ನಡೆದು ಹೋಗಿದೆ. ದಯವಿಟ್ಟು ಕ್ಷಮಿಸಿ ಎಂದು ಅಂಗಲಾಚಿದ್ದಾರೆ. ಇದೇ ವೇಳೆ ಆನಂದ್ ಸಿಂಗ್ ಅವರ ಕೈಹಿಡಿದು ತಪ್ಪಾಯ್ತು ಅಣ್ಣಾ, ಕ್ಷಮಿಸು ಎಂದು ಕೇಳಿಕೊಂಡಿದ್ದಾರೆ.

BLY Ganesh A

ರಾಮನಗರ ರೆಸಾರ್ಟ್ ನಲ್ಲಿ ಆನಂದ್ ಸಿಂಗ್ ಅವರ ಮೇಲೆ ಮಾರಣಂತಿಕ ಹಲ್ಲೆ ಮಾಡಿದ್ದ ಕಂಪ್ಲಿ ಶಾಸಕ ಗಣೇಶ್ ಜೈಲು ಸೇರಿದ್ದರು. ಜಾಮೀನು ಪಡೆದ ಶಾಸಕರು ಹೊರ ಬಂದಿದ್ದಾರೆ. ಹೊಸಪೇಟೆಯಲ್ಲಿ ಶುಕ್ರವಾರ ಕಾರ್ಯಕರ್ತರ ಸಭೆ ನಡೆಸಿದ್ದ ಗಣೇಶ್ ಅವರು, ನಾನು ಆನಂದ್ ಸಿಂಗ್ ಅಣ್ಣ ತಮ್ಮಂದಿರು ಎಂದಿದ್ದರು. ಅಷ್ಟೇ ಅಲ್ಲದೆ ತಮ್ಮ ಗೆಲುವಿಗೆ ಕಾರಣರಾದ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರನ್ನು ಭೇಟಿ ಮಾಡಿದರು.

BLY Ganesh 1

Share This Article
Leave a Comment

Leave a Reply

Your email address will not be published. Required fields are marked *