Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಳಿ ಹುಲಿ ರಕ್ಷಿತಾರಣ್ಯಕ್ಕೆ ಶ್ವಾನ ದಳದ ಬಲ; ಅಪರಾಧ ಕೃತ್ಯ ಪತ್ತೆಗೆ ಅವನಿ, ತಾರ ಕಣ್ಗಾವಲು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಕಾಳಿ ಹುಲಿ ರಕ್ಷಿತಾರಣ್ಯಕ್ಕೆ ಶ್ವಾನ ದಳದ ಬಲ; ಅಪರಾಧ ಕೃತ್ಯ ಪತ್ತೆಗೆ ಅವನಿ, ತಾರ ಕಣ್ಗಾವಲು

Latest

ಕಾಳಿ ಹುಲಿ ರಕ್ಷಿತಾರಣ್ಯಕ್ಕೆ ಶ್ವಾನ ದಳದ ಬಲ; ಅಪರಾಧ ಕೃತ್ಯ ಪತ್ತೆಗೆ ಅವನಿ, ತಾರ ಕಣ್ಗಾವಲು

Public TV
Last updated: December 23, 2025 11:39 pm
Public TV
Share
2 Min Read
kali tiger reserve dog squad
SHARE

ಕಾರವಾರ: ಚಾಮರಾಜನಗರ ಅರಣ್ಯದಲ್ಲಿ ನಡೆದ ಹುಲಿ ಹತ್ಯೆ ಪ್ರಕರಣದ ಬೆನ್ನಲ್ಲೇ ರಾಜ್ಯಾದ್ಯಂತ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಹುಲಿಗಳ ರಕ್ಷಣೆ ಹಾಗೂ ಅರಣ್ಯ ಅಪರಾಧಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಶ್ವಾನದಳವನ್ನು ಉನ್ನತೀಕರಿಸಲಾಗಿದೆ.

ಈಗಾಗಲೇ ಕಾಳಿ ಹುಲಿ ರಕ್ಷಿತಾರಣ್ಯದ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ವಾನ ‘ಕ್ವೀಪರ್’ ಜೊತೆಗೆ, ಹೊಸದಾಗಿ ಬೆಲ್ಜಿಯಂ ಷಫರ್ಡ್ ತಳಿಯ ಅವನಿ ಮತ್ತು ತಾರ ಎಂಬ ಎರಡು ಶ್ವಾನಗಳು ಶ್ವಾನದಳಕ್ಕೆ ಸೇರ್ಪಡೆಯಾಗಿದ್ದು, ಈ ಮೂಲಕ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಮೂರು ಶ್ವಾನಗಳ ಕಣ್ಗಾವಲು ವ್ಯವಸ್ಥೆ ಕಾರ್ಯನಿರ್ವಹಿಸಲಿದೆ.

ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ 2016ರಿಂದ ಕಾರ್ಯನಿರ್ವಹಿಸುತ್ತಿರುವ ಶ್ವಾನದಳ ಕೇವಲ ಒಂದೇ ಶ್ವಾನದೊಂದಿಗೆ ಆರಂಭವಾಗಿದ್ದ ಕಾಳಿ ಹುಲಿ ರಕ್ಷಿತಾರಣ್ಯದ ಶ್ವಾನದಳ, ಇದುವರೆಗೂ ಅರಣ್ಯ ಅಪರಾಧ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಶ್ವಾನ ಕ್ವೀಪರ್ ಈವರೆಗೆ 120ಕ್ಕೂ ಹೆಚ್ಚು ಅರಣ್ಯ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಿದ ಕೀರ್ತಿ ಹೊಂದಿದೆ. ಇದೀಗ 11 ವರ್ಷ ಪ್ರಾಯದ ಕ್ವೀಪರ್ ನಿವೃತ್ತಿಯ ಹಂತಕ್ಕೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲೇ ಹೊಸ ಶ್ವಾನಗಳ ಸೇರ್ಪಡೆ ಮೂಲಕ ಶ್ವಾನದಳಕ್ಕೆ ಮತ್ತಷ್ಟು ಬಲ ನೀಡಲಾಗಿದೆ.

14 ವಿಧದ ಅರಣ್ಯ ಅಪರಾಧ ಪತ್ತೆ ಕಾರ್ಯ ಮಾಡುವ ಶ್ವಾನಗಳು
ಕಾಳಿ ಹುಲಿ ರಕ್ಷಿತಾರಣ್ಯ (KTR)ಗೆ ಸೇರ್ಪಡೆಗೊಂಡ ಅವನಿ ಮತ್ತು ತಾರ ಶ್ವಾನಗಳು ಬಂಡೀಪುರದಲ್ಲಿರುವ ಅರಣ್ಯ ಇಲಾಖೆಯ ಡಾಗ್ ಸ್ಕ್ವಾಡ್‌ನಲ್ಲಿನ ತರಬೇತಿ ಕೇಂದ್ರದಲ್ಲಿ 2024ರ ಡಿಸೆಂಬರ್ ತಿಂಗಳಿಂದ ವಿಶೇಷ ತರಬೇತಿ ಪಡೆದಿವೆ.

kali tiger reserve dog squad 1

‘ಐದು ಹುಲಿ ಇರುವ ಪ್ರದೇಶಕ್ಕೆ ಒಂದು ಶ್ವಾನ’ ಎಂಬ ಗುರಿಯೊಂದಿಗೆ ಅರಣ್ಯ ಇಲಾಖೆಯದ ಶ್ವಾನಗಳಿಗೆ ತರಬೇತಿ ನೀಡಲಾಗಿದೆ. ಈ ಹಿಂದೆ ಶ್ವಾನತರಬೇತಿಗೆ ಅರಣ್ಯ ಇಲಾಖೆ ಹೊರಗಿನ ತರಬೇತಿ ಕೇಂದ್ರವನ್ನು ಅವಲಂಭಿಸಬೇಕಾಗಿದ್ದು, ಇದೀಗ ಬಂಡಿಪುರದಲ್ಲಿ ಅರಣ್ಯ ಇಲಾಖೆಯ ಶ್ವಾನ ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಬಂಡೀಪುರದಲ್ಲಿ ಅರಣ್ಯ ಇಲಾಖೆಯೇ ತರಬೇತಿ ನೀಡಿದ ಮೊದಲ ಬ್ಯಾಚ್‌ನ ಶ್ವಾನಗಳು ಇದಾಗಿದ್ದು, ಒಂದೂವರರೆ ವರ್ಷದ ವಯಸ್ಸಿನದ್ದಾಗಿದೆ.

ಈ ಶ್ವಾನಗಳು, ಕಳ್ಳಬೇಟೆ, ಮರ ಕಳ್ಳ ಸಾಗಣೆ, ಶಸ್ತ್ರಾಸ್ತ್ರ ಪತ್ತೆ, ಮಾದಕ ಪದಾರ್ಥ ಪತ್ತೆಕಾರ್ಯ ಸೇರಿದಂತೆ ಒಟ್ಟು 14 ವಿವಿಧ ಅರಣ್ಯ ಅಪರಾಧ ಕೃತ್ಯಗಳನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿವೆ. ಹೊಸದಾಗಿ ಸೇರ್ಪಡೆಗೊಂಡ ಅವನಿ ಮತ್ತು ತಾರ ಶ್ವಾನಗಳನ್ನು ದಾಂಡೇಲಿ ಅರಣ್ಯ ವಲಯದ ಎಸಿಎಫ್ ಎಂ.ಎಸ್.ಕರಳೀಮಠ್ ಮಾರ್ಗದರ್ಶನದಲ್ಲಿ ಡಿಆರ್‌ಎಫ್‌ಓ ವೆಂಕಟೇಶ್ ಅಮೀಲ್ ಸಾಬ್ ಹಾಗೂ ಅರಣ್ಯ ಸಿಬ್ಬಂದಿ ದೊಂಡು ಮತ್ತು ಬೊಮ್ಮ ಕೇರ್‌ಟೇಕರ್‌ಗಳಾಗಿ ನೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅರಣ್ಯ ಇಲಾಖೆಯ ಕ್ಯಾಮೆರಾಗಳನ್ನು ಕದ್ದ ಪ್ರಕರಣದಲ್ಲೂ ಈ ಹೊಸ ಶ್ವಾನಗಳು ಪ್ರಮುಖ ಸುಳಿವು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿವೆ.

ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಹೆಚ್ಚುತ್ತಿರುವ ಅರಣ್ಯ ಅಪರಾಧಗಳು ಹಾಗೂ ಮಾನವ–ವನ್ಯಜೀವಿ ಸಂಘರ್ಷದ ನಡುವೆಯೂ, ಶ್ವಾನದಳದ ಬಲವರ್ಧನೆ ಅರಣ್ಯ ಇಲಾಖೆಗೆ ಹೊಸ ಶಕ್ತಿಯಾಗಿ ಪರಿಣಮಿಸಿದೆ. ಅವನಿ ಮತ್ತು ತಾರ ಶ್ವಾನಗಳ ಸೇರ್ಪಡೆ, ಅರಣ್ಯ ಅಪರಾಧಿಗಳ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ.

TAGGED:dog squadKali Tiger Reservekarwarಕಾರವಾರಕಾಳಿ ಹುಲಿ ರಕ್ಷಿತಾರಣ್ಯಶ್ವಾನ ದಳ
Share This Article
Facebook Whatsapp Whatsapp Telegram

Cinema news

rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories
trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema

You Might Also Like

kea
Bengaluru City

ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ: ಕೆಇಎ

Public TV
By Public TV
1 minute ago
Benjamin Netanyahu 1
Latest

ಲೆಬನಾನ್‌ ಜೊತೆ ನೇರ ಮಾತುಕತೆ ಆರಂಭಿಸಲು ಸಂಪುಟಕ್ಕೆ ನೆತನ್ಯಾಹು ಆದೇಶ

Public TV
By Public TV
7 minutes ago
Social Media Ban
Bengaluru City

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಪ್ರಕ್ರಿಯೆ ಶುರು

Public TV
By Public TV
51 minutes ago
Dunia Vijay
Bengaluru City

Video Viral | ಬೆಂಗಳೂರಲ್ಲಿ `ಜೊಂಬಿ ಡ್ರಗ್’ ನಶೆಯಲ್ಲಿ ತೇಲಾಡಿದ ಆರೋಪ – ನಟ ದುನಿಯಾ ವಿಜಯ್‌ ಕಳವಳ

Public TV
By Public TV
1 hour ago
Hulivmanu death
Bengaluru City

ಜಾತ್ರೆ ನೋಡ್ತಿದ್ದವನ ಮೇಲೆಯೇ ಹರಿದ ಪಲ್ಲಕ್ಕಿ ಹೊತ್ತ ಟ್ರ‍್ಯಾಕ್ಟರ್ – ಲಗ್ನಪತ್ರಿಕೆ ನೀಡಲು ಹೋಗಿದ್ದ ಯುವಕ ಮಸಣಕ್ಕೆ

Public TV
By Public TV
1 hour ago
Yelahanka Suicide
Bengaluru City

ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ ಆತ್ಮಹತ್ಯೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?