ಹಾವೇರಿ: ರಾಜ್ಯದಲ್ಲಿ ಒಂದೆಡೆ ಉಪಚುನಾವಣೆ ಕಣ ರಂಗೇರಿದ್ದರೆ, ಇನ್ನೊಂದೆಡೆ ಉಪಸಮರದ ನಂತರ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಹೇಳಿದ್ದಾರೆ.
ರಾಣೇಬೆನ್ನೂರಿನ ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಮುಂದಿನ ಉತ್ತರಾಧಿಕಾರಿಯಾಗಿ ಪುತ್ರ ಪ್ರಕಾಶ ಕೋಳಿವಾಡ ಕಣಕ್ಕೆ ಇಳಿಯುತ್ತಾನೆ. ಇನ್ನು ಮುಂದೆ ನಾನು ಚುನಾವಣೆಗೂ ನಿಲ್ಲುವುದಿಲ್ಲ. ನಾನು ನಿವೃತ್ತಿ ತೆಗೆದುಕೊಳ್ಳುತ್ತೇನೆ, ಸಾಕು ನಂಗೆ ಎಂದರು. ಅದರೆ ರಾಜಕೀಯದಿಂದ ದೂರ ಹೋಗುವ ಮುನ್ನ ಒಂದು ಸಾರಿ ಗೆಲವು ಕಾಣಬೇಕು. ಹೀಗಾಗಿ ಇದೊಂದು ಬಾರಿ ನನ್ನನ್ನು ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಐವತ್ತು ವರ್ಷದ ರಾಜಕೀಯ ಜೀವನದಲ್ಲಿ ಈ ಥರ ಎಲೆಕ್ಷನ್ ಮಾಡಿಲ್ಲ. ಆರ್. ಶಂಕರ್ ಆಯಾ ರಾಮ್ ಗಯಾ ರಾಮ್ ಏನೇನೂ ಕೆಲಸ ಮಾಡಿದ್ದಾರೆ ಅಂತ ಎರಡು ವರ್ಷದಲ್ಲಿ ನೋಡಿದ್ದಿರಲ್ಲ. ಹೀಗಾಗಿ ಕೊನೆಯ ಬಾರಿ ನನ್ನನ್ನು ಗೆಲ್ಲಿಸಿ ಬೀಳ್ಕೊಡುಗೆ ನೀಡಿ ಎಂದು ಕಾರ್ಯಕರ್ತರಲ್ಲಿ ಕೋರಿಕೊಂಡರು.