ರಾಂಚಿ: ಆಸ್ತಿ ವಿವಾದಕ್ಕೆ 70 ವರ್ಷದ ತಂದೆಯ ಕತ್ತು ಸೀಳಿ ಮಗನೇ ಹತ್ಯೆಗೈದಿರುವ ಘಟನೆ ಜಾರ್ಖಂಡ್ನ ಗೊಡ್ಡಾದಲ್ಲಿ ನಡೆದಿದೆ.
ಆರೋಪಿ ತನ್ನ ಕಿರಿಯ ಸಹೋದರನಿಗೆ ಆಸ್ತಿಯಲ್ಲಿ ಹೆಚ್ಚಿನ ಪಾಲು ನೀಡಲಾಗಿದೆ ಎಂದು ಭಾವಿಸಿದ್ದಾನೆ. ನಂತರ ತನ್ನ ಬೇಡಿಕೆಯನ್ನು ತಂದೆ ಪೂರೈಸದೇ ಇದ್ದಿದ್ದಕ್ಕೆ ಕೋಪಗೊಂಡು ತನ್ನ ತಂದೆಯ ಕತ್ತನ್ನು ಸೀಳಿ ಕೊಂದಿದ್ದಾನೆ. ಇದನ್ನೂ ಓದಿ: ಕೊರೊನಾ ಸ್ಫೋಟ ಒಟ್ಟು 2,479 ಪ್ರಕರಣ – ಬೆಂಗ್ಳೂರಲ್ಲಿ 2,053 ಕೇಸ್
2022ರ ಡಿಸೆಂಬರ್ 31ರಂದು ಈ ಘಟನೆ ನಡೆದಿದ್ದು, ಆರೋಪಿಯನ್ನು ಸುಬೋಧ್ ಎಂದು ಗುರುತಿಸಲಾಗಿದೆ. ಭೂಮಿ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಹೊಂದಿದ್ದ ಆರೋಪಿ ತನ್ನ ತಂದೆಗೆ ಸಮಾನವಾಗಿ ಹಂಚುವಂತೆ ಒತ್ತಾಯಿಸಿದ್ದಾನೆ. ಇದನ್ನೂ ಓದಿ: 35 ರೂ. ಬೆಲೆ ಬಾಳುವ ಕೋವಿಡ್ ಆಂಟಿವೈರಲ್ ಡ್ರಗ್ ಮುಂದಿನ ವಾರ ಮಾರುಕಟ್ಟೆಗೆ
ಘಟನೆ ಸಂಬಂಧಿಸಿದಂತೆ ತನಿಖೆ ವೇಳೆ ಮೃತರ ಹಿರಿಯ ಮಗನ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ ಮತ್ತು ಸಾಕ್ಷಿಗಳ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.