ಬೆಂಗಳೂರು: ಬಜೆಟ್ ಮಂಡನೆ ಮತ್ತು ಸಚಿವ ಸಂಪುಟ ರಚನೆ, ಜನತಾ ದರ್ಶನ ಹೀಗೆ ಪ್ರತಿದಿನ ಬ್ಯುಸಿಯಾಗಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಂದೆ ಹೇಳಿದ ಮಾತಿನಂತೆ ರಿಲ್ಯಾಕ್ಸ್ ಆಗಿದ್ದಾರೆ.
ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಅಧಿಕಾರಿ ಎಚ್.ಡಿ. ದೇವೇಗೌಡ ಅವರು, ನೀನು ಆರೋಗ್ಯದ ಕಡೆ ಗಮನ ಕೊಡು. ಆಡಳಿತ, ಆರೋಗ್ಯ ಇದರ ಬಗ್ಗೆ ಮಾತ್ರ ನಿನ್ನ ಗಮನ ಇರಲಿ ಎಂದು ಮಗನಿಗೆ ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಸರ್ಕಾರ ಎಷ್ಟು ದಿನ ಇರುತ್ತೋ, ಬಿಡುತ್ತೋ ಅನ್ನೋ ಚಿಂತೆ ನಿನಗೆ ಬೇಡ. ನಾನು ಎಲ್ಲವನ್ನು ನೋಡಿಕೊಳ್ಳುತ್ತೀನಿ. ಮುಂದೆ ನಿಂತು ನಾನು ಲೀಡ್ ಮಾಡ್ತೀನಿ. ನೀನು ನಿನ್ನ ಆರೋಗ್ಯ ನೋಡಿಕೋ. ಮೈತ್ರಿ ಸರ್ಕಾರದ ರಾಜಕಾರಣ ನನಗೆ ಬಿಡು. ಕಾಂಗ್ರೆಸ್ ಹೈಕಮಾಂಡ್ ಹತ್ತಿರ ನಾನು ಮಾತನಾಡುತ್ತೇನೆ. ರಾಜ್ಯ ನಾಯಕರು, ಶಾಸಕರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ಅವರ ರಿಮೋಟ್ ನನ್ ಹತ್ರ ಇದೆ ಎಂದು ಕುಮಾರಸ್ವಾಮಿಗೆ ತಂದೆ ದೇವೇಗೌಡರು ಉಪದೇಶ ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.