JDS, ಕಾಂಗ್ರೆಸ್ ಉಗ್ರಗಾಮಿಗಳ ಪರ ನಿಂತಿವೆ – ಮೋದಿ ಗಂಭೀರ ಆರೋಪ

Public TV
1 Min Read
NARENDRA MODI 1

ಬೆಂಗಳೂರು/ಚಿತ್ರದುರ್ಗ: ಬಿಜೆಪಿಗೆ (BJP) ಬೂಸ್ಟ್ ಕೊಡಲು ಮತ್ತೊಮ್ಮೆ ರಾಜ್ಯಕ್ಕೆ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ (Narendra Modi), ಚಿತ್ರದುರ್ಗ, ಹೊಸಪೇಟೆ, ಸಿಂಧನೂರಿನಲ್ಲಿ ಆಯೋಜಿಸಿದ್ದ ಸಮಾವೇಶಗಳಲ್ಲಿ ಪಾಲ್ಗೊಂಡು ಮತಬೇಟೆ ನಡೆಸಿದರು.

RAHUL GANDHI 5

ಇದೇ ವೇಳೆ ಕಾಂಗ್ರೆಸ್ (Congress), ಜೆಡಿಎಸ್ (JDS) ಉಗ್ರವಾದಿಗಳ ಪರವಿದೆ ಎಂಬ ಗಂಭೀರ ಆರೋಪ ಮಾಡಿದರು. ಸರ್ಜಿಕಲ್ ಸ್ಟ್ರೈಕ್‌ ನಡೆದಾಗ ಕಾಂಗ್ರೆಸ್‌ನವರು ಹೆಮ್ಮೆ ಪಡುವ ಬದಲು ಅಪಮಾನ ಮಾಡಿದರು ಎಂದು ದೂಷಿಸಿದ್ರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಡವರಿಗೆ ತಲುಪುವ ಯೋಜನೆಗಳು ನಿಲ್ಲುತ್ತವೆ. ಆದ್ದರಿಂದ ಕರ್ನಾಟಕದ ಅಭಿವೃದ್ಧಿಗಾಗಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ತರಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಬಿಜೆಪಿ ಜನರ ಆಶೀರ್ವಾದದಿಂದಲ್ಲ ಕಳ್ಳತನ ಮಾಡಿದ ಸರ್ಕಾರ, ಕಾಂಗ್ರೆಸ್‍ಗೆ ಪೂರ್ಣ ಬಹುಮತ ಕೊಡಿ: ರಾಹುಲ್ ಮನವಿ

kumaraswamy

ಕಾಂಗ್ರೆಸ್ ಇತಿಹಾಸ ಅವರ ಚಿಂತನೆಗಳನ್ನು ಮರೆಯಬಾರದು. ಆತಂಕ ಸೃಷ್ಟಿಸುವುದು ಕಾಂಗ್ರೆಸ್ ಇತಿಹಾಸ. ಕರ್ನಾಟಕದಲ್ಲಿ ಉಗ್ರ ಕೃತ್ಯಗಳು ನಡೆದಾಗ ಕಾಂಗ್ರೆಸ್ ಅವರ ಪರನಿಂತಿತು. ಜೆಡಿಎಸ್, ಕಾಂಗ್ರೆಸ್ ಎರಡೂ ಪಕ್ಷಗಳು ಉಗ್ರಗಾಮಿಗಳ (Extremists) ಪರ ನಿಂತಿವೆ. ಆದ್ರೆ ಬಿಜೆಪಿ ಆತಂಕವಾದಿಗಳು ಹಾಗೂ ಉಗ್ರವಾದಿಗಳನ್ನ ಶಮನಗೊಳಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಲಿಂಗಸುಗೂರು, ಮಾನ್ವಿಯಲ್ಲಿ HDK ಭರ್ಜರಿ ಮತಬೇಟೆ; ಕುಮಾರಸ್ವಾಮಿಗೆ ಟಗರು ಮರಿ ಗಿಫ್ಟ್‌

ಇದೇ ವೇಳೆ `ವಿಷಸರ್ಪ’ ಎಂದ ಮಲ್ಲಿಕಾರ್ಜುನ ಖರ್ಗೆ, ನಾಲಾಯಕ್ ಮಗ ಎಂದ ಪ್ರಿಯಾಂಕ್ ಖರ್ಗೆಯನ್ನು ಲಾಯಕ್ ಎನ್ನುತ್ತಲೇ ಮೋದಿ ಕಾಲೆಳೆದರು.

Share This Article