ಬೆಂಗಳೂರು: ಸ್ನೇಹಿತರ ಜೊತೆ ಜಗಳ ನಡೆಯುದಿಲ್ಲವೇ? ಹಾಗೇ ಸಣ್ಣ ಜಗಳ ನಡೆದಿದೆ ಅಷ್ಟೇ. ಆದರೆ ಈ ಗಲಾಟೆ ವಿಚಾರವನ್ನು ನೀವೇ ದೊಡ್ಡದು ಮಾಡಿದ್ದೀರಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.
ಆನಂದ್ ಸಿಂಗ್ ಅವರ ಆರೋಗ್ಯವನ್ನು ವಿಚಾರಿಸಿದ ಬಳಿಕ ಅಪೋಲೋ ಆಸ್ಪತ್ರೆಯ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆನಂದ್ ಸಿಂಗ್, ಗಣೇಶ್, ಭೀಮಾನಾಯಕ್ ಜೊತೆಗಿದ್ದ ವೇಳೆ ಈ ಘಟನೆ ನಡೆದಿದೆ. ಮಾತು ಮಾತಿಗೆ ಜಗಳ ಆಗಿ ಸಣ್ಣದಾಗಿ ಹೊಡೆದಾಡಿಕೊಂಡಿದ್ದಾರೆ. ಕಣ್ಣಿಗೆ ಸಣ್ಣ ಪೆಟ್ಟು ಬಿದ್ದಿದೆ ಎಂದು ತಿಳಿಸಿದರು.
ಮಾಧ್ಯಮಗಳು 15 ಸ್ಟಿಚ್ ಹಾಕಲಾಗಿದೆ ಎಂದು ವರದಿ ಮಾಡುತ್ತಿವೆ. ಆ ರೀತಿ ಏನು ಆಗಿಲ್ಲ. ನಾಳೆ ಡಿಸ್ಚಾರ್ಜ್ ಆಗಲಿದ್ದಾರೆ. ಆನಂದ್ ಸಿಂಗ್ ಹುಷಾರಿದ್ದು ಇವತ್ತು ಬಿರಿಯಾನಿ ತರಿಸಿ ಊಟ ತಿಂದಿದ್ದಾರೆ ಎಂದು ತಿಳಿಸಿದರು.
ಸ್ನೇಹತರ ಅಂದ್ರೆ ಗಲಾಟೆ ಕಾಮನ್, ನಾನು ಮತ್ತು ಅಖಂಡ ಶ್ರೀನಿವಾಸ ಮೂರ್ತಿ ಸ್ನೇಹಿತರು. ಆದರೆ ನಿನ್ನೆ ನಮ್ಮಿಬ್ಬರ ಮಧ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣ ಜಗಳ ನಡೆಯಿತು. ಮಾಧ್ಯಮಗಳಲ್ಲಿ ಬರುತ್ತಿರುವ ಹಾಗೇ ದೊಡ್ಡಮಟ್ಟದ ಗಾಯವೇನು ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಈ ವೇಳೆ ಬೆಳಗ್ಗೆ ಡಿಕೆ ಶಿವಕುಮಾರ್ ಜಗಳ ನಡೆದಿಲ್ಲ ಎಂದು ಹೇಳಿದರೆ ಬಳಿಕ ಡಿಕೆ ಸುರೇಶ್ ಎದೆನೋವು ಅಂತ ಹೇಳಿದ್ದಾರೆ. ಈಗ ನೀವು ಸಣ್ಣ ಜಗಳವಾಗಿದೆ ಎಂದು ಹೇಳಿದ್ದೀರಿ. ಈ ವಿಚಾರದಲ್ಲಿ ನಾಯಕರ ಮಧ್ಯೆ ಇಷ್ಟೊಂದು ಗೊಂದಲ ಯಾಕೆ ಎಂದು ಕೇಳಿದ್ದಕ್ಕೆ, ಗೊಂದಲ ಇಲ್ಲಿ ಯಾವುದು ಇಲ್ಲ. ಗೊಂದಲ ಮಾಧ್ಯಮಗಳಿಂದ ಸೃಷ್ಟಿಯಾಗುತ್ತಿದೆ ಎಂದು ಹೇಳಿ ಅಲ್ಲಿಂದ ಜಮೀರ್ ಅಹಮದ್ ಸ್ಥಳದಿಂದ ತೆರಳಿದರು.
https://www.youtube.com/watch?v=9xgPiNXdmxU
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv