ಮೊದಲ ಜಗಳ, ವಾದ, ಗಾಯ ಆಗಿದ್ದೇ ಉದಯ್‍ಯಿಂದ – ಬೇರೆಯವರ ಇಮೋಷನ್ ನೋಡಿ ಉದಯ್ ಡಿಸ್ಟರ್ಬ್ ಆಗಿದ್ರಾ?

Public TV
3 Min Read
uday

ವಾರದ ಎಲಿಮಿನೇಷನ್‍ನಲ್ಲಿ ಉದಯ್ ಮನೆಯಿಂದ ಹೊರ ಬಂದಿದ್ದಾರೆ. ಅದಕ್ಕೆ ಕಾರಣ ಎಲ್ಲರಿಗೂ ಗೊತ್ತಿದೆ. ಮನೆಯಲ್ಲಿ ಎಲ್ಲರ ಜೊತೆಗೂ ಒಂದೇ ರೀತಿ ಇರಬೇಕೆಂದುಕೊಂಡು ಸಿಕ್ಕಾಪಟ್ಟೆ ಯಡವಿದ್ದಾರೆ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹೇಳುತ್ತಲೇ ಹೋದರು. ಎಂಟರ್ಟೈನ್‍ಗಿಂತ ಹೆಚ್ಚಾಗಿ ಉದಯ್ ಅವರಿವರ ಬಗ್ಗೆ ಮಾತಾಡಿದ್ದೇ ಹೆಚ್ಚಾಗಿತ್ತು. ಹೀಗಾಗಿ ಮನೆಯವರೆಲ್ಲರಿಗೂ ಉದಯ್ ಬೇಡವಾಗಿದ್ದರು. ಜೊತೆಗೆ ಜನರಿಂದ ಕೂಡ ಉದಯ್ ವಿರುದ್ಧವಾಗಿಯೇ ವೋಟ್ ಆಗಿತ್ತು. ಈ ಕಾರಣದಿಂದ ಉದಯ್ ಮನೆಯಲ್ಲಿ ಇರುವುದಕ್ಕೆ ಅವಕಾಶ ಇರಲಿಲ್ಲ. ಬೇಗ ಹೊರಗೆ ಬಂದರು.

uday 1

ಉದಯ್ ಬಿಗ್ ಬಾಸ್ ಮನೆಯ ಒಳಗೆ ಹೋಗುವುದಕ್ಕೂ ಮುನ್ನ ಮೊದಲ ದಿನ ಇವರ ಪರ್ಫಾಮೆನ್ಸ್, ಅವರ ಸ್ಟ್ರೇಂಥ್, ಅವರ ನಡವಳಿಕೆ, ಕಾನ್ಫಿಡೆನ್ಸ್ ನೋಡಿ ಮನೆಯೊಳಗೆ ಸಕ್ಸಸ್ ಆಗುತ್ತಾರೆ ಎಂದೇ ಎಲ್ಲರು ನಂಬಿದ್ದರು. ಮನೆಯೊಳಗಿನ ಆಟವನ್ನು ಖಂಡಿತ ಇವರು ಅರಿತಿದ್ದಾರೆ ಎಂದು ಸ್ವತಃ ಸುದೀಪ್ ಕೂಡ ನಂಬಿದ್ದರು. ಆದರೆ ಉದಯ್ ಯಡವಿದ್ದೆಲ್ಲಿ ಎಂಬ ಬಗ್ಗೆ ಅವರೇ ಉತ್ತರ ಕೊಟ್ಟಿದ್ದಾರೆ.  ಇದನ್ನೂ ಓದಿ: ಜಯಶ್ರೀ, ಚೈತ್ರಾ ಬೆಸ್ಟಿ ಅಂದ ರೂಪೇಶ್- ಸಾನ್ಯಾಗೆ ಶುರುವಾಯ್ತು ಹೊಟ್ಟೆಕಿಚ್ಚು..?

uday 2

ನಾಮಿನೇಟ್ ಆದ ಮೇಲೆ ವೇದಿಕೆ ಮೇಲೆ ಉದಯ್ ಮಾತನಾಡಿದ್ದಾರೆ. ಸುದೀಪ್ ಅವರು ಉದಯ್ ಅವರನ್ನು ಕರೆದು ಮಾತನಾಡಿಸಿದ್ದಾರೆ. ಕಾರಣ ಕೇಳುವುದಕ್ಕೂ ಮುನ್ನ ಒಂದು ಸಣ್ಣ ವೀಟಿ ಪ್ಲೇ ಮಾಡಿದ್ದಾರೆ. ಆ ವಿಟಿಯಲ್ಲಿ ಉದಯ್ ನಗು, ಅಳು, ಹಾಸ್ಯ, ಆಟ ಎಲ್ಲವೂ ಅಡಗಿತ್ತು. ಒಂದು ಕ್ಷಣ ಇಡೀ ಜರ್ನಿಯನ್ನು ಅವರು ಹಿಂತಿರುಗಿ ನೋಡಿದಂತೆ ಆಗಿತ್ತು. ಉದಯ್ ಕೂಡ ಆ ಬೇಸರವನ್ನು ಮುಖದಲ್ಲಿ ತೋರಿಸಿದ್ದರು. ಆದರೆ ಆ ರೀತಿಯ ನಡವಳಿಕೆ ಉದಯ್‍ಗೆ ಬರುವುದಕ್ಕೆ ಕಾರಣವೇನು ಗೊತ್ತಾ?

uday 3

ತುಂಬಾ ಕಾನ್ಫಿಡೆನ್ಸ್‌ ನಿಂದ ಹೋದ ಉದಯ್ ದಾರಿ ತಪ್ಪಿದ್ದು ಹೇಗೆ ಎಂಬ ಪ್ರಶ್ನೆಯನ್ನು ಸುದೀಪ್ ಕೇಳಿದ್ದಾರೆ. ಫಸ್ಟ್ ಡೇಯಿಂದಾನೇ ಟಾಸ್ಕ್‍ನಲ್ಲಿ ಆಗಲಿ ಒಳ್ಳೆ ಪರ್ಫಾಮೆನ್ಸ್ ನೀಡಿದ್ದೆ. ಆದರೆ ನಾಮಿನೇಟ್ ಆಗಿ ಹೊರ ಬಂದ ಶಾಕ್‍ನಿಂದ ಇನ್ನು ಹೊರಗೆ ಬರಲು ಆಗುತ್ತಿಲ್ಲ. ಮಾಡಿದ್ದು ಒಂದು ತಪ್ಪು. ಅದು ಬೇರೆ ಕಡೆಗೆ ಹೋಗಿಬಿಟ್ಟಿತ್ತು. ಫ್ಲೋನಲ್ಲಿ ಆ ತಪ್ಪು ಈ ರೀತಿ ಟರ್ನ್ ಆಗುತ್ತದೆ ಅಂತ ಗೊತ್ತಿರಲಿಲ್ಲ. ಈಗಲೂ ಹೇಳುತ್ತೀನೆ, ಯಾರ ಮೇಲೂ ಬ್ಯಾಡ್ ಇಂಟೆನ್ಷನ್ ಇಟ್ಟುಕೊಂಡು ಮಾಡಿದ್ದಲ್ಲ. ಆದರೆ ಅದು ಆ ರೀತಿ ಹಬ್ಬಿತು ಎಂದು ಸಾನ್ಯಾ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಒಳಗಡೆ ಹೋಗುವಾಗ ಡ್ಯಾನ್ಸ್ ಎಲ್ಲಾ ಮಾಡಿಕೊಂಡು ಬಂದ್ರಿ. ಆ ಎನರ್ಜಿ ಪ್ಯಾಕ್ ಉದಯ್ ಒಳಗಡೆ ಹೋದಾಗ ಏನಾಯ್ತು ಎಂದು ಸುದೀಪ್ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಉದಯ್, ನಾನು ಸ್ವಲ್ಪ ಮಾತನಾಡುತ್ತಾ ಮಾತನಾಡುತ್ತಾ ಅತಿಯಾದ ಜಸ್ಟಿಫಿಕೇಷನ್‍ಗೆ ಹೀಗಿಬಿಟ್ಟೆ ಅನ್ನಿಸುತ್ತದೆ. ನನಗೆ ಯಾರಾದರೂ ಮಾತನಾಡಿದರೆ, ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಿದ್ದಾರೆ ಎನಿಸಿದಾಗ ಅದನ್ನು ಸರಿ ಮಾಡಲು ಯತ್ನಿಸುತ್ತಿದ್ದೆ. ಅದನ್ನು ಮಾಡುತ್ತಾ ಮಾಡುತ್ತಾ ಮತ್ತಷ್ಟು ತಪ್ಪು ಮಾಡಿಬಿಟ್ಟೆ. ನನ್ನ ಪರ್ಸನಾಲಿಟಿ ಇನ್ನು ಹೊರಗೆ ಬಂದಿಲ್ಲ ಎಂಬ ಬೇಸರ ನನಗೆ ಇದೆ ಎಂದಿದ್ದಾರೆ.

ಇನ್ನು ಮುಂದುವರೆದು ಪ್ರಶ್ನಿಸಿದ ಸುದೀಪ್, ಮೊದಲನೇ ಜಗಳ, ಮೊದಲನೇ ವಾದ, ಮೊದಲನೇ ಗಾಯ, ಮೊದಲನೇ ತಳ್ಳಾಟ ಎಲ್ಲಾ ಪ್ರಾರಂಭವಾಗಿದ್ದು ತಮ್ಮಿಂದ. ಆದರೆ ಆಮೇಲೆ ಯಾಕೆ ಸೈಡಿಗೆ ಹೋಗಿದ್ದು ಎಂದು ಪ್ರಶ್ನಿಸಿದಾಗ, ತುಂಬಾ ಭಾವನೆಗಳು ಅಲ್ಲಿ ಹುಟ್ಟಿಕೊಳ್ಳುವುದಕ್ಕೆ ಆರಂಭವಾಯಿತು. ಬೇರೆಯವರನ್ನು ನೋಡಿದಾಗ ನನ್ನ ಹಳೇ ಸ್ಟೋರಿಗಳು ನೆನಪಾಗುವುದಕ್ಕೆ ಶುರುವಾಯ್ತು. ಫ್ಯಾಮಿಲಿಯನ್ನು ಮಿಸ್ ಮಾಡಿಕೊಳ್ಳುತ್ತಾ ಇದ್ದೆ. ಅದೆಲ್ಲಾ ಯೋಚನೆ ಮಾಡುತ್ತಾ ಇದ್ದಾಗ ಸ್ವಲ್ಪ ಎಫೆಕ್ಟ್ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *