ಬೆಳಗಾವಿ: ಶಿಕ್ಷಣದ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವುದು ಹಿಜಬ್ ಕಾಂಗ್ರೆಸ್ಸಿನ ಹಿಡನ್ ಅಜೆಂಡಾವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಬ್ ವಿವಾದ ಕಾಂಗ್ರೆಸ್ಸಿನ ಹಿಡನ್ ಅಜೆಂಡಾ ಆಗಿದೆ. ಶಾಲೆಗಳಲ್ಲಿ ಧರ್ಮದ ವಿಷಯಗಳನ್ನು ಬಿತ್ತಬಾರದು. ಕೋರ್ಟ್ ಕೂಡಾ ಅದಕ್ಕೆ ಪೂರಕವಾದ ನಿರ್ಣಯ ಕೈಗೊಂಡಿದೆ ಎಂದ ಅವರು, ಶಾಲಾ ಆವರಣದಲ್ಲಿ ರಾಜಕೀಯ ಮಾಡಲಾರದೆ, ಧರ್ಮದ ವಿಷಬೀಜ ಬಿತ್ತಲಾರದೆ, ಶೈಕ್ಷಣಿಕ ಕಲಿಕೆ ಅವಕಾಶ ಮಾಡಿಕೊಡಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನು ಶಿಕ್ಷಣದ ಮೂಲಕ ಮಾಡಲು ಹೊರಟಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದೆ. ಇದನ್ನು ನಾವು ರಾಜಕೀಯವನ್ನು ಮೀರಿ ನಿಂತು ನೋಡಬೇಕು ಎಂದು ಅಭಿಪ್ರಾಯಪಟ್ಟರು.
ಮಕ್ಕಳಿಗೆ ತಲೆಯಲ್ಲಿ ವಿಷಬೀಜ ಬಿತ್ತುವುದನ್ನು ಬಂದ್ ಮಾಡಬೇಕು. ಎಲ್ಲದಕ್ಕೂ ಆರ್ಎಸ್ಎಸ್ ತರುವುದು ಎಲ್ಲದಕ್ಕೂ ಬಿಜೆಪಿ ತರುವುದು ಒಳ್ಳೆಯದಲ್ಲ. ಶಾಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಇದ್ದನ್ನು ಮಾಡಿದ್ದಾರೆ. ಇದೊಂದು ಟೂಲ್ ಕಿಟ್ ಈ ವಿಚಾರವು ಮಾಧ್ಯಮದಲ್ಲಿ ಬಹಿರಂಗವಾಗಿದೆ.
ಇತ್ತೀಚೆಗೆ ಸೋಶಿಯಲ್ ಮಿಡಿಯಾ ದುರುಪಯೋಗ ಆಗುತ್ತಿದೆ. ಇದರ ಬಗ್ಗೆ ಸರ್ಕಾರ ಗಮನ ಹರಿಸುತ್ತಿದೆ. ಕಾಂಗ್ರೆಸ್ ಈ ರೀತಿ ಕೀಳು ರಾಜಕೀಯ ಮಾಡಬಾರದು. ಯಾವ ಕೆಲಸ ಆಗಿಲ್ಲ ಅದನ್ನು ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನ ಸಭೆಯಲ್ಲಿ ಚರ್ಚೆ ಮಾಡಲು ಅವಕಾಶ ಇದೆ. ಅದನ್ನು ಬಿಟ್ಟು ಈ ರೀತಿ ಶಿಕ್ಷಣ ಕ್ಷೇತ್ರವನ್ನು ಕೆಡಿಸುವ ಕೆಲಸ ಆಗಬಾರದು ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ
ಆ ಮಕ್ಕಳು ಈ ಶಾಲಾ ಆವರಣದಲ್ಲಿ ಯಾವ ರೀತಿ ಇರಬೇಕಿತ್ತೋ ಅವರು ಹಾಗಿಲ್ಲ. ಆದರೂ ಆ ಮಕ್ಕಳಿಗೆ ಶಿಕ್ಷಣ ಕೊಡುತ್ತೇವೆ ಎಂದು ಶಾಲೆ ಪ್ರಾಂಶುಪಾಲರು ಹೇಳಿದ್ದಾರೆ. ಅದನ್ನು ಎಲ್ಲಾ ವಿದ್ಯಾರ್ಥಿಗಳು ಪಾಲಿಸಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ವಿದ್ಯಾರ್ಥಿಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ, ಭೀತಿ ಮೂಡದಂತೆ ಶಾಲಾ, ಕಾಲೇಜುಗಳು ಪ್ರಾರಂಭ: ಬೊಮ್ಮಾಯಿ