ದುರಹಂಕಾರಕ್ಕೆ ನಾನು ಅವನ ಹಿಂದೆ ಹೋಗಿದ್ದೆ: ಗಾಯಾಳು

Public TV
3 Min Read
BENGALURU MUTTAPPA

ಬೆಂಗಳೂರು: ದುರಹಂಕಾರಕ್ಕೆ ನಾನು ಅವನ ಹಿಂದೆ ಹೋಗಿದ್ದೆ ಎಂದು ಬೈಕಿನ (Bike) ಹಿಂದೆ ನೇತುಬಿದ್ದು ಒಂದು ಕಿ.ಮೀ ಎಳೆದೊಯ್ತಲ್ಪಟ್ಟ ಚಾಲಕ ಮುತ್ತಪ್ಪ ತಿಳಿಸಿದ್ದಾನೆ.

ಬೆಂಗಳೂರಿನ (Bengaluru) ಆಸ್ಪತ್ರೆಯಲ್ಲಿ (Hospital) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲತಃ ಬಿಜಾಪುರದವನಾಗಿದ್ದು, ಆದರೆ 54 ವರ್ಷದಿಂದ ಬೆಂಗಳೂರಿನಲ್ಲಿದ್ದೇನೆ. ಕುವೆಂಪು ಪ್ರಾಶಾಭಾರತಿಗೆ ಹೋಗುತ್ತಿದ್ದೆ. ಈ ವೇಳೆ ಈ ಘಟನೆ ನಡೆದಿದೆ. ಬೈಕ್ ಸವಾರ ಸಾಹಿಲ್ ಹಿಂಬದಿಯಿಂದ ಬಂದು ನನ್ನ ಬುಲಾರೋ ಗಾಡಿಗೆ ಗುದ್ದಿದ್ದಾನೆ. ಈ ವೇಳೆ ಆತ ಮೊಬೈಲ್‍ನಲ್ಲಿ ಮಾತನಾಡುತ್ತ ಬಂದಿದ್ದ. ಸ್ಥಳದಲ್ಲೇ ಕ್ಷಮಿಸಿ ಎಂದಿದ್ದರೇ ನಾನು ಆತನನ್ನು ಕ್ಷಮಿಸುತ್ತಿದ್ದೆ. ಆದರೆ ಆತನಿಗೆ ದುರಹಂಕಾರ. ಆತ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆದರೆ ಈ ವೇಳೆ ಆತನನ್ನು ನಾನು ಹಿಡಿದೆ ಎಂದು ಹೇಳಿದರು.

BENGALURU HIT AND RUN CASE 1

ಮಾಗಡಿ ರೋಡ್‍ನ ಎಸ್‍ಬಿಐ ಡಿವೈಡರ್ ಬಳಿಯಿಂದ ಹೊಸಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಎಳೆದೊಯ್ದಿದ್ದಾನೆ. ಆತ ನಾನು ಕೆಳಗೆ ಬಿದ್ರೂ ಗಾಡಿ ನಿಲ್ಲಿಸಲಿಲ್ಲ. ಬದಲಿಗೆ ಆತ ಒಂದೇ ಕೈಯಲ್ಲೇ ಬೈಕ್‍ನ್ನು ಚಲಿಸುತ್ತಿದ್ದ. ನನ್ನ ಕೈ ಹಾಗೂ ಬೆರಳನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸುತ್ತಿದ್ದ. ಆದರೂ ನಾನು ಬೈಕ್ ಬಿಡಲಿಲ್ಲ. ಆ ವೇಳೆ ಆತ ಬೈಕ್‍ನ್ನು ಹೇಗೇಗೋ ಚಲಾಯಿಸುತ್ತಿದ್ದ. ಆದರೂ ನಾನು ಆತನನ್ನು ಬಿಡಬಾರದು ಎಂದು ನಿರ್ಧರಿಸಿದ್ದೆ ಎಂದರು.

ಆ ವೇಳೆ ಆತ ನನ್ನನ್ನು ದರದರನೇ ಎಳೆದೊಯ್ದಿದ್ದಾನೆ. ಅಲ್ಲಿದ್ದ ಒಂದೆರಡು ಯುವಕರು ಇದನ್ನು ಗಮನಿಸಿದರು. ಆತನನ್ನು ಬೆನ್ನಟ್ಟಿದ್ದಾರೆ. ಆದರೆ ಅವರು ವಿಫಲನಾಗಿದ್ದಾನೆ. ಅದಾದ ಬಳಿಕ ಅಲ್ಲಿದ್ದ ಆಟೋ ಚಾಲಕ ಬೈಕ್ ಸವಾರ ಸಾಹಿಲ್‍ನನ್ನು ಬೆನ್ನತ್ತಿದ್ದಾನೆ. ಆ ಬಳಿಕ ಅವನನ್ನು ತಡೆದು ಥಳಿಸಿದ್ದಾರೆ ಎಂದರು.

BENGALURU HIT AND RUN CASE

ಘಟನೆ ವೇಳೆ ಕೈ, ಕಾಲು ಮಂಡಿ, ಸೊಂಟದ ಕೆಳಗಿನ ಭಾಗ ಕಿತ್ತು ಹೋಗಿದೆ. ಒಂದು ಕಿಮೀ ದೂರ ಸಾಹಿಲ್ ಎಳೆದೊಯ್ದಿದ್ದ. ಈ ವೇಳೆ ಹೊಸ ಪ್ಯಾಂಟ್ ಹರಿದು ಹೋಗಿದೆ. ಕೈ ಕಾಲು ಎಲ್ಲಾ ಕಡೆ ಗಾಯಗಳಾಗಿವೆ. ಈಗ ಕುಟುಂಬದವರು ಕ್ಷಮೆ ಕೇಳ್ತಿದ್ದಾರೆ ಎಂದು ತಿಳಿಸಿದರು.

ಘಟನೆಯೇನು?: ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಈ ಹಿಟ್ ಅಂಡ್ ರನ್ ಕೇಸ್ ಘಟನೆ ನಡೆದಿದೆ. ಟೋಲ್ ಗೇಟ್ ಬಳಿ ಮುತ್ತಪ್ಪ (70) ಅವರ ಬೊಲೆರೊ ವೆಹಿಕಲ್‍ಗೆ ಬೈಕ್ ಸವಾರ ಸಾಹಿಲ್ ಡಿಕ್ಕಿ ಹೊಡೆದಿದ್ದ. ಈ ವೇಳೆ ಬೈಕ್ ಹತ್ತಿ ಸವಾರ ಎಸ್ಕೇಪ್ ಆಗಲು ಮುಂದಾಗಿದ್ದಾನೆ. ಆದರೆ ಸಾಹಿಲ್‍ನನ್ನು ಹಿಡಿಯಲು ಮುತ್ತಪ್ಪ ಮುಂದಾಗಿದ್ದು, ಸಾಹಿಲ್‍ನ ಬೈಕ್‍ನ್ನು ಹಿಡಿದುಕೊಂಡಿದ್ದ.

BENGALURU HIT AND RUN CASE 2

ಈ ವೇಳೆ ಮುತ್ತಪ್ಪನನ್ನು ಸಾಹಿಲ್ ಎಳೆದೊಯ್ದಿದ್ದಾನೆ. ಹೀಗೆ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿಯಿಂದ ಹೊಸಹಳ್ಳಿ ಮೆಟ್ರೋ ನಿಲ್ದಾಣದವರೆಗೆ ದರದರನೇ ಮುತ್ತಪ್ಪನನ್ನು ಸಾಹಿಲ್ ಎಳೆದೊಯ್ದಿದ್ದಾನೆ. ಇದನ್ನು ನೋಡಿದ ಸಾರ್ವಜನಿಕರು ಬೈಕ್ ಸವಾರನನ್ನು ಬೆನ್ನಟ್ಟಿದ್ದಾರೆ. ಇದನ್ನೂ ಓದಿ: ರೈಲ್ವೆಯಲ್ಲಿ ಕೆಲಸ ಸಿಗದಿದ್ದರಿಂದ ಮನನೊಂದು ಯುವಕ ಆತ್ಮಹತ್ಯೆ

ಕೊನೆಗೂ ಬೈಕ್ ಸವಾರನನ್ನು ತಡೆಯುವಲ್ಲಿ ಯಶಸ್ವಿಯಾದ ಸಾರ್ವಜನಿಕರು, ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ನಂತರ ಬೈಕ್ ಸವಾರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಧಾವಿಸಿದ ವಿಜಯ ನಗರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬೈಕ್‍ನ ಹಿಂದೆ ನೇತುಬಿದ್ದು ಒಂದು ಕಿ.ಮೀವರೆಗೆ ಎಳೆದೊಯ್ಯಲ್ಪಟ್ಟ ಮುತ್ತಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಗೋವಿಂದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಅಪಘಾತ ಮಾಡಿ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ಸಾಹಿಲ್‍ನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಚಾಲಕನನ್ನು 1 ಕಿ.ಮೀ ಎಳೆದೊಯ್ದ ಬೈಕ್ ಸವಾರ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *