ಮೊಹಾಲಿ: ಬುಮ್ರಾ(Jasprit Bumrah) ಅನುಪಸ್ಥಿತಿ ಟೀಂ ಇಂಡಿಯಾಗೆ(Team India) ಕಾಡುತ್ತಿದ್ದು ಮತ್ತೆ ಬೌಲರ್ಗಳು ಕೈಕೊಟ್ಟಿದ್ದಾರೆ. ಕೊನೆಯ ಓವರ್ಗಳಲ್ಲಿ ರನ್ಗೆ ಕಡಿವಾಣ ಹಾಕದ ಕಾರಣ ಭಾರತ(India) ಮತ್ತೆ ಸೋಲನ್ನು ಅನುಭವಿಸಿದೆ.
ಕೊನೆಯ 24 ಎಸೆತಗಳಲ್ಲಿ ಆಸ್ಟ್ರೇಲಿಯಾ(Australia) 55 ರನ್ ಗಳಿಸಬೇಕಿತ್ತು. 17ನೇ ಓವರ್ ಎಸೆದ ಭುವನೇಶ್ವರ್ ಕುಮಾರ್(Bhuvneshwar Kumar) 15 ರನ್ ಕೊಟ್ಟರೆ 18ನೇ ಓವರ್ನಲ್ಲಿ ಹರ್ಷಲ್ ಪಟೇಲ್(Harshal Patel) 22 ರನ್ ನೀಡಿದರು. 19ನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ 16 ರನ್ ಹೊಡೆಸಿಕೊಂಡಿದ್ದಾರೆ.
ತಮ್ಮ 4 ಓವರ್ಗಳ ಕೋಟಾದಲ್ಲಿ ಭುವನೇಶ್ವರ್ ಕುಮಾರ್ 52 ರನ್, ಹರ್ಷಲ್ ಪಟೇಲ್ 49 ರನ್ ನೀಡಿದ್ದಾರೆ. ಇವರಿಬ್ಬರೇ 101 ರನ್ ನೀಡಿದ್ದು ಟೀ ಇಂಡಿಯಾಗೆ ಮುಳುವಾಯಿತು. ಭುವನೇಶ್ವರ್ ಕುಮಾರ್ ಏಷ್ಯಾ ಕಪ್ನಲ್ಲೂ 19ನೇ ಓವರ್ನಲ್ಲಿ ದುಬಾರಿ ರನ್ ನೀಡಿದ್ದರು. ಸೂಪರ್ ಸಿಕ್ಸ್ನಲ್ಲಿ ಪಾಕಿಸ್ತಾನದ ವಿರುದ್ಧ 19 ರನ್ ನೀಡಿದ್ದರೆ ಶ್ರೀಲಂಕಾದ ವಿರುದ್ಧ 17 ರನ್ ಹೊಡೆಸಿಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ 16 ರನ್ ಹೊಡೆಸಿಕೊಂಡಿದ್ದಾರೆ. ಇಬ್ಬರು ಒಂದು ವಿಕೆಟ್ ಪಡೆಯದೇ ಇಷ್ಟು ರನ್ ಚಚ್ಚಿಸಿಕೊಂಡಿದ್ದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಪದೇ ಪದೇ ಭುವನೇಶ್ವರ್ ಕುಮಾರ್ ವೈಫಲ್ಯ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಲಾಗುತ್ತಿದೆ. ಏಷ್ಯಾ ಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅರ್ಶ್ದೀಪ್ ಅವರನ್ನು ಕೈಬಿಟ್ಟಿದ್ದು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಪಾಂಡ್ಯ, ಕೆ.ಎಲ್ ರಾಹುಲ್ ಕ್ಲಾಸಿಕ್ ಬ್ಯಾಟಿಂಗ್ – ಅಕ್ಷರ್ ಆಟ ವ್ಯರ್ಥ, ಆಸೀಸ್ಗೆ 4 ವಿಕೆಟ್ಗಳ ಜಯ
ಬೌಲರ್ಗಳ ಬಗ್ಗೆ ನಾಯಕ ರೋಹಿತ್ ಶರ್ಮಾ(Rohith Sharma) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ನಾವು ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ ಎಂದು ನಾನು ಭಾವಿಸುವುದಿಲ್ಲ. 200 ರನ್ ಉತ್ತಮ ಮೊತ್ತವಾಗಿದ್ದು ನಾವು ಡಿಫೆಂಡ್ ಮಾಡಬಹುದಿತ್ತು. ನಮ್ಮ ಬ್ಯಾಟರ್ಗಳ ಪ್ರಯತ್ನ ಉತ್ತಮವಾಗಿತ್ತು. ಕೊನೆಯ 4 ಓವರ್ಗಳಲ್ಲಿ 60 ರನ್ ಬಂತು. ಅವರ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಭಾರತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದರೆ ಆಸ್ಟ್ರೇಲಿಯಾ 19.2 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ 4 ವಿಕೆಟ್ಗಳ ಜಯ ಸಾಧಿಸಿತು. 30 ಎಸೆತಗಳಲ್ಲಿ61 ರನ್(8 ಬೌಂಡರಿ, 4 ಸಿಕ್ಸರ್) ಚಚ್ಚಿದ ಕ್ಯಾಮರೂನ್ ಗ್ರೀನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.