ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಬೇಕು: ಗಣಪತಿಗೆ ಭಕ್ತನ ಮನವಿ

Public TV
1 Min Read
chikkamagaluru Hindu rashtra

ಚಿಕ್ಕಮಗಳೂರು: ಭಾರತ (India) ಸಂಪೂರ್ಣ ಹಿಂದೂ (Hindu) ರಾಷ್ಟ್ರವಾಗಬೇಕು. 140 ಕೋಟಿ ಭಾರತೀಯರು ಹಿಂದೂಗಳಾಗಬೇಕು. ಗಣಪತಿ ಇದಕ್ಕೆ ಕೃಪೆ ತೋರು ತಂದೆ ಎಂದು ಭಕ್ತನೋರ್ವ ಗಣಪತಿ ಕಾಣಿಕೆ ಹುಂಡಿಗೆ ಕಾಣಿಕೆ ಬದಲು ಚೀಟಿ ಬರೆದು ಹಾಕಿ ಬೇಡಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ.

ಇಷ್ಟು ದಿನಗಳ ಕಾಲ ನಾವೆಲ್ಲಾ ದೇವರೇ ಮದುವೆ ಮಾಡು. ಬೇಗ ಹುಡುಗಿ ಸಿಗಲಿ. ಪರೀಕ್ಷೆಯಲ್ಲಿ ಪಾಸ್ ಮಾಡು. ನನ್ನ ಪ್ರೀತಿ ಗೆಲ್ಲುವಂತೆ ಮಾಡು. ಸರ್ಕಾರಿ ಕೆಲಸ ಸಿಗಲಿ ಹೀಗೆ ನಾನಾ ರೀತಿಯ ಬೇಡಿಕೆಯನ್ನು ಬರೆದು ಚೀಟಿಯನ್ನ ಕಾಣಿಕೆ ಹುಂಡಿಯಲ್ಲಿ ಹಾಕಿರುವುದನ್ನು ನೋಡಿರುತ್ತೇವೆ. ಆದರೆ, ಇದೇ ಮೊದಲ ಬಾರಿಗೆ ಭಕ್ತರು ನಾನಾ ಬೇಡಿಕೆಗಳನ್ನ ಗಣಪತಿ ಮುಂದೆ ಇಟ್ಟಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‍ನಿಂದ ನೀರು ಜಾಸ್ತಿ ಬಿಟ್ಟಿದ್ದಕ್ಕೆ ಬಂಗಾಳದಲ್ಲಿ ಪ್ರವಾಹ: ಮಮತಾ ಆಕ್ರೋಶ

web.whatsapp 7

ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಓಂಕಾರೇಶ್ವರ ದೇಗುಲದ ಪಕ್ಕದಲ್ಲಿ ಇಟ್ಟಿದ್ದ ಹಿಂದೂ ಮಹಾ ಸಭಾ ಗಣಪತಿಯನ್ನು ಸೆ.18ರಂದು ವಿಸರ್ಜನೆ ಮಾಡಲಾಯಿತು. ವಿಸರ್ಜನೆ ಮೆರವಣಿಗೆಯಲ್ಲಿ 20 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದ ಕಾಣಿಕೆ ಹುಂಡಿ ಹಣ ಎಣಿಕೆಯನ್ನು ಇಂದು (ಶುಕ್ರವಾರ) ಹಮ್ಮಿಕೊಂಡಿದ್ದರು. ಹುಂಡಿಯಲ್ಲಿ ಹಣದ ಜೊತೆ ನಾನಾ ಬೇಡಿಕೆಯ ಚೀಟಿಗಳು ಪತ್ತೆಯಾಗಿವೆ. ಇದನ್ನೂ ಓದಿ: Tirupati Laddu Row| ತಮಿಳುನಾಡು ಮೂಲದ ಕಂಪನಿಯಿಂದ ಕಲಬೆರೆಕೆ ತುಪ್ಪ: ಟಿಡಿಡಿ ಇಓ

ಚೀಟಿಗಳಯಲ್ಲಿ ಏನೆಲ್ಲಾ ಬೇಡಿಕೆ ಇತ್ತು?
ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಬೇಕು. ದೇಶದ 140 ಕೋಟಿ ಜನರೂ ಹಿಂದೂಗಳಾಗಬೇಕು. ಸಿ.ಟಿ ರವಿ ( C T Ravi) ಮುಂದಿನ ಸಿಎಂ ಆಗಬೇಕು. ಹಿಂದೂಗಳೆಲ್ಲಾ ಒಗ್ಗಟ್ಟಾಗಿ ಇರಬೇಕು. ದತ್ತಪೀಠ ಆದಷ್ಟು ಬೇಗ ಹಿಂದೂಗಳ ಪೀಠವಾಗಬೇಕು ಹೀಗೆ ಭಕ್ತರು ನಾನಾ ರೀತಿ ಬೇಡಿಕೊಂಡಿದ್ದಾರೆ. ಅದರಲ್ಲಿ ಓರ್ವ ಭಕ್ತ ಮಾತ್ರ ನನ್ನ ಮಗನಿಗೆ ಮದುವೆ ಮಾಡು, ಮುಂದಿನ ವರ್ಷ ನಿನ್ನ ಸೇವೆ ಮಾಡುತ್ತೇನೆ ಎಂದು ಬರೆದು ಹಾಕಿದ್ದನು. ಇದನ್ನೂ ಓದಿ: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು: ಕೆಇಎ

Share This Article