ನವದೆಹಲಿ: ಸರಿಸುಮಾರು ಮೂರು ವರ್ಷಗಳಿಂದ ಭಾರತ ಅನುಸರಿಸಿದ ಕೋವಿಡ್ ನಿರ್ವಹಣೆ ಮಾದರಿಯಿಂದ ಇಡೀ ಜಗತ್ತು ಪಾಠ ಕಲಿಯಬೇಕು ಎಂದು ಜಾಗತಿಕ ನಾಯಕರು ಅಕ್ಷಾ ಕಾರ್ಯಕ್ರಮದಲ್ಲಿ ಮೆಚ್ಚುಗೆಯ ಮಾತನಾಡಿದ್ದಾರೆ.
ಬಿಲ್ ಹಾಗೂ ಮಿಲಿಂಡಾ ಗೇಟ್ಸ್ ಫೌಂಡೇಶನ್ ಆಯೋಜಿಸಿದ ಆಕ್ಷಾ ಭಾರತದಿಂದ ಪಾಠಗಳು ಕಾರ್ಯಕ್ರಮದಲ್ಲಿ ಜಾಗತಿಕ ನಾಯಕರು ಭಾಗವಹಿಸಿದ್ದರು. ಕೊರೊನಾ ಸೋಂಕಿನ ನಿಯಂತ್ರಣದ ವೇಳೆ ಭಾರತ ಕೈಗೊಂಡಿರುವ ನಿರ್ಧಾರ ಕುರಿತಾಗಿ ಚರ್ಚೆ ಮಾಡಲಾಗಿದೆ.
ಈ ವೇಳೆ ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ದೇಶೀಯ ನಿರ್ದೇಶಕ ಟೇಕೂ ಕೊನಿಶಿ ಭಾರತದ ಕೋವಿಡ್ ನಿರ್ವಹಣಾ ಮಾದರಿಯಿಂದ ಉತ್ತಮವಾಗಿದ್ದು, ಅನುಕರಣೆಗೆ ಯೋಗ್ಯವಾಗಿದೆ. ಇದರಿಂದ ಇಡೀ ಜಗತ್ತು ಪಾಠ ಕಲಿಯಬೇಕು ಎಂದು ಹೇಳಿದ್ದಾರೆ.
Highlighted how India’s scientific evidence-based approach to combat #COVID19 helped the world in the fight against the pandemic, at a programme on ‘Lessons From India – The World’s Largest Vaccination Drive’. pic.twitter.com/bOwhVVTbAq
— Dr Mansukh Mandaviya (@mansukhmandviya) March 21, 2022
ಭಾರತದಲ್ಲಿನ ಯುನಿಸೆಫ್ ಪ್ರತಿನಿಧಿ ಯಾಸು ಮಾಸಾ ಕಿಮುರಾ, ಭಾರತ ದೇಶದಲ್ಲಿ ಕೊರೊನಾ ಸಮರ್ಥವಾಗಿ ನಿಭಾಯಿಸಿದೆ. ವಿವಿಧ ದೇಶಗಳಿಗೂ ಲಸಿಕೆ ಒದಗಿಸಿ ಸಹಾಯ ಮಾಡಿದೆ ಎಂದು ಹಾಡಿ ಹೊಗಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಭಾರತದ ಪ್ರತಿನಿಧಿ ಡಾ. ರೊಡೆರಿಕೊ ಆಫ್ರಿನ್ ಕೋವಿಡ್ ವಿರುದ್ಧದ ಹೋರಾಟಕ್ಕೆ ಭಾರತ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.
ಭಾರತವು ಸುರಕ್ಷಿತ ಲಸಿಕೆಗಳ ತಯಾರಿಕೆಗೆ ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಿ ಅಷೇ ವೇಗದಲ್ಲಿ ಲಸಿಕೆಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡಿದೆ. ಕ್ರಿಸ್ ಎಲಿಯಾಸ್ ಮೆಚ್ಚುಗೆ ವ್ಯಕ್ತಡಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಮಾತನಾಡಿ, ಭಾರತದ ಕೋವಿಡ್ ನಿರ್ವಹಣೆ ಯಶಸ್ಸು ಸಮರ್ಪಣೆ, ಪಾಲುಗಾರಿಕೆ ಹಾಗ ತಂತ್ರಜ್ಞಾನದ ಹಂಚಿಕೆಯ ಫಲವಾಗಿದೆ ಎಂದು ಹೇಳಿದ್ದಾರೆ.