Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಜ್ಞಾತ ಸ್ಥಳದತ್ತ ಶಶಿಕಲಾ ಬೆಂಬಲಿಗರು: ನಿನ್ನೆ ರಾತ್ರಿಯಿಂದ ಇಲ್ಲಿಯವರೆಗಿನ ಟೈಂ ಲೈನ್ ಇಲ್ಲಿದೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಅಜ್ಞಾತ ಸ್ಥಳದತ್ತ ಶಶಿಕಲಾ ಬೆಂಬಲಿಗರು: ನಿನ್ನೆ ರಾತ್ರಿಯಿಂದ ಇಲ್ಲಿಯವರೆಗಿನ ಟೈಂ ಲೈನ್ ಇಲ್ಲಿದೆ

Latest

ಅಜ್ಞಾತ ಸ್ಥಳದತ್ತ ಶಶಿಕಲಾ ಬೆಂಬಲಿಗರು: ನಿನ್ನೆ ರಾತ್ರಿಯಿಂದ ಇಲ್ಲಿಯವರೆಗಿನ ಟೈಂ ಲೈನ್ ಇಲ್ಲಿದೆ

Public TV
Last updated: February 8, 2017 5:49 pm
Public TV
Share
4 Min Read
SHARE

ಚೆನ್ನೈ: ತಮಿಳುನಾಡಲ್ಲಿ ಯಾರೂ ನಿರೀಕ್ಷಿಸದ ಮಟ್ಟಕ್ಕೆ ಕ್ಷಿಪ್ರ ರಾಜಕೀಯ ಕ್ರಾಂತಿ ಆಗ್ತಿದೆ. ಮಂಗಳವಾರ ರಾತ್ರಿ ಜಯಯಲಿತಾ ಸಮಾಧಿ ಮುಂದೆ ಪನ್ನೀರ್ ಸೆಲ್ವಂ ಧ್ಯಾನಕ್ಕೆ ಇಳಿದು ನಂತರ ನೀಡಿದ ಹೇಳಿಕೆ ಬಳಿಕ ರಾಜಕೀಯದ ಚದುರಂಗದಾಟ ಶುರುವಾಗಿದೆ.

ನಾನು ಯಾವುದೇ ಕಾರಣಕ್ಕೂ ಸುಮ್ಮನಿರಲ್ಲ. ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಸುತ್ತೇನೆ. ಜನ ಬಯಸಿದ್ದರೆ ಮತ್ತೆ ರಾಜೀನಾಮೆ ವಾಪಾಸ್ ಪಡೆಯುತ್ತೇನೆ. ಶಶಿಕಲಾರನ್ನ ಸಿಎಂ ಆಗೋಕೆ ಬಿಡಲ್ಲ ಅಂತಾ ಪನ್ನೀರ್ ಸೆಲ್ವಂ ರಣಕಹಳೆ ಊದಿದ್ದಾರೆ. ರಾಜ್ಯಪಾಲರ ಭೇಟಿಗೂ ಸಮಯ ಕೇಳಿದ್ದಾರೆ.

ಆದರೆ ಯಾವುದೇ ಕಾರಣಕ್ಕೂ ಕುರ್ಚಿ ಬಿಡಲು ಶಶಿಕಲಾ ನಟರಾಜನ್ ಕೂಡಾ ರೆಡಿಯಿಲ್ಲ. ಶಶಿಕಲಾ ಶಾಸಕಾಂಗ ಪಕ್ಷದ ಸಭೆ ಕೂಡಾ ನಡೆಸಿದ್ದಾರೆ. ನಾನು ಕದ್ದುಮುಚ್ಚಿ ಶಾಸಕಾಂಗ ಸಭೆ ನಡೆಸಿಲ್ಲ. ಪನ್ನೀರ್ ಸೆಲ್ವಂ ಒಬ್ಬ ನಯವಂಚಕ. ಜಯಲಲಿತಾ ವಿರೋಧಿಗಳ ಜೊತೆಯೇ ಸೇರಿಕೊಂಡಿದ್ದಾರೆ ಅಂತಾ ಆರೋಪಿಸಿದ್ರು. ಪಕ್ಷದ ಒಗ್ಗಟ್ಟು ಒಡೆಯಲು ಯಾರಿಗೂ ಸಾಧ್ಯವಿಲ್ಲ. ಅಮ್ಮನನ್ನು ಪ್ರೀತಿಸುವವರೆಲ್ಲರೂ ನನಗೆ ಬೆಂಬಲಿಸುತ್ತೀರಿ ಎಂದು ನಂಬಿದ್ದೇನೆ ಅಂತ ಹೇಳಿದ್ರು.

ಈಗಾಗಲೇ 134 ಶಾಸಕರಲ್ಲಿ 131 ಮಂದಿ ಶಾಸಕರನ್ನು ಒಟ್ಟುಮಾಡಿಕೊಂಡಿರುವ ಶಶಿಕಲಾ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ನಾಳೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡುವ ಸಾಧ್ಯತೆಯಿದೆ. ಅಲ್ಲದೇ ಪ್ರಮಾಣ ವಚನಕ್ಕೆ ಬಾರದ ರಾಜ್ಯಪಾಲರ ವಿರುದ್ಧವೂ ದೂರು ನೀಡಲಿದ್ದಾರೆ. ರಾಜ್ಯಪಾಲ ವಿದ್ಯಾಸಾಗರ್ ರಾವ್ ಇನ್ನೂ ಚೆನ್ನೈಗೆ ಬಂದಿಲ್ಲ. ರಾಜ್ಯಪಾಲರು ಎಲ್ಲಿಯವರೆಗೆ ವಿಳಂಬ ಮಾಡುತ್ತಾರೋ ಅಲ್ಲಿಯವರೆಗೆ ಪನ್ನೀರ್ ಸೆಲ್ವಂಗೆ ಶಶಿಕಲಾ ವಿರುದ್ಧ ರಣತಂತ್ರ ಹೆಣೆಯಲು ಅವಕಾಶವಿದೆ.

ನಿನ್ನೆ ರಾತ್ರಿಯಿಂದ ಏನಾಯ್ತು?
* ರಾತ್ರಿ 9.09 – ಚೆನ್ನೈನ ಮರೀನಾ ಬೀಚ್‍ನ ಜಯಾ ಸಮಾಧಿಗೆ ಸೆಲ್ವಂ ಭೇಟಿ
* ರಾತ್ರಿ 9.10 – ಜಯಾ ಸಮಾಧಿ ಮುಂದೆ ಸೆಲ್ವಂ ಧ್ಯಾನ ಆರಂಭ (ಧ್ಯಾನದ ಮಧ್ಯೆ ಕಣ್ಣೀರು ಹಾಕಿದ ಓಪಿಎಸ್)
* ರಾತ್ರಿ 9.45 – ಸಮಾಧಿ ಮುಂದೆ ಧ್ಯಾನ ಅಂತ್ಯ
* ರಾತ್ರಿ 9.54 – ಮಾಧ್ಯಮಗಳಿಗೆ ಸೆಲ್ವಂ ಪ್ರತಿಕ್ರಿಯೆ

* ರಾತ್ರಿ 9.57 – ಶಶಿಕಲಾ ವಿರುದ್ಧ ಬಂಡಾಯದ ಕಹಳೆ
* ರಾತ್ರಿ 10 ಗಂಟೆ – ಜಯಾ ಸ್ಮಾರಕದ ಬಳಿ ಪನ್ನೀರ್ ಸೆಲ್ವಂಗೆ ಜನಬೆಂಬಲ
* ರಾತ್ರಿ 10.30 – ನಿವಾಸಕ್ಕೆ ಮರಳಿದ ಪನ್ನೀರ್ ಸೆಲ್ವಂ
* ರಾತ್ರಿ 10.45 – ಸೆಲ್ವಂ ನಿವಾಸದ ಮುಂದೆ ಜನಸ್ತೋಮ

* ರಾತ್ರಿ 10.45 – ಅತ್ತ ಪೋಯಸ್ ಗಾರ್ಡನ್ ಮುಂದೆ ಶಶಿಕಲಾ ಅಭಿಮಾನಿಗಳ ಜಮಾವಣೆ
* ರಾತ್ರಿ 11 – ಎಐಎಡಿಎಂಕೆ ಶಾಸಕರು, ಸಚಿವರಿಗೆ ಶಶಿಕಲಾ ತುರ್ತು ಬುಲಾವ್
* ಮಧ್ಯರಾತ್ರಿ 11.30 – ಶಶಿಕಲಾ ಮನೆಯಲ್ಲಿ 20 ಸಚಿವರು 80 ಶಾಸಕರು ಹಾಜರು
* ಮಧ್ಯರಾತ್ರಿ 12 – ಪೋಯಸ್ ಗಾರ್ಡನ್ ನಿವಾಸದಲ್ಲಿ ಅಣ್ಣಾಡಿಎಂಕೆ ಪಕ್ಷದ ಸಭೆ
* ಮಧ್ಯರಾತ್ರಿ 12.45 – ಪಕ್ಷದ ಖಜಾಂಚಿ ಹುದ್ದೆಯಿಂದ ಪನ್ನೀರ್ ಸೆಲ್ವಂ ಔಟ್

* ಮಧ್ಯರಾತ್ರಿ 1 ಗಂಟೆ – ಶಶಿಕಲಾ ನಾಯಕತ್ವದಲ್ಲಿ ಪಕ್ಷ ಅಧಿಕಾರ ನಡೆಸುತ್ತೆ – ಎಐಎಡಿಎಂಕೆ
* ಮಧ್ಯರಾತ್ರಿ 1.13 – ಪೋಯಸ್ ಗಾರ್ಡನ್ ನಿವಾಸದಿಂದ ಹೊರಬಂದ ಶಶಿಕಲಾ
* ಮಧ್ಯರಾತ್ರಿ 1.16 – ನಾವೆಲ್ಲಾ ಒಂದೇ ಕುಟುಂಬ. ಎಲ್ಲಾ 134 ಶಾಸಕರು ಒಗ್ಗಟ್ಟಾಗಿದ್ದೇವೆ – ಶಶಿಕಲಾ
* ಮಧ್ಯರಾತ್ರಿ 1.17 – ಇದರ ಹಿಂದೆ ಡಿಎಂಕೆ ಕೈವಾಡ ಇದೆ. ಸೆಲ್ವಂರನ್ನ ಪಕ್ಷದಿಂದ ಉಚ್ಚಾಟಿಸ್ತೇವೆ -ಶಶಿಕಲಾ
* ಮಧ್ಯರಾತ್ರಿ 1.20 – ಶಶಿಕಲಾ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡಬೇಕು – ತಂಬಿದೊರೈ
* ಮಧ್ಯರಾತ್ರಿ 1.40 – ನಾನು ಪಕ್ಷದ ನಿಷ್ಠಾವಂತ. ನನ್ನನ್ನ ಯಾರೂ ಹೊರಹಾಕೋಕೆ ಆಗಲ್ಲ – ಸೆಲ್ವಂ

* ಬೆಳಗ್ಗೆ 9.08 – ಡಿಎಂಕೆಗೂ ಇದಕ್ಕೂ ಸಂಬಂಧವಿಲ್ಲ – ಡಿಎಂಕೆಯ ಟಿಕೆಎಸ್ ಇಳಂಗೋವನ್ ಹೇಳಿಕೆ
* ಬೆಳಗ್ಗೆ 9.17 – ತಮಿಳುನಾಡು ರಾಜಕೀಯ ಅಸ್ಥಿರತೆಗೆ ಕೇಂದ್ರ ಕಾರಣ – ಕಾಂಗ್ರೆಸ್ ಆರೋಪ
* ಬೆಳಗ್ಗೆ 9.27 – ಅಮ್ಮಾ ಭೇಟಿ ಮಾಡಲು ಶಶಿಕಲಾ ಅವಕಾಶ ಕೊಡಲಿಲ್ಲ – ಸೆಲ್ವಂ ಆರೋಪ
* ಬೆಳಗ್ಗೆ 10.15 – ಶಶಿಕಲಾ ಪರ ಸುಬ್ರಮಣಿಯನ್ ಸ್ವಾಮಿ ಬ್ಯಾಟಿಂಗ್
* ಬೆಳಗ್ಗೆ 10.16 – ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲ್ಲ. ರಾಜ್ಯಪಾಲರಿಂದ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಎಂದ ವೆಂಕಯ್ಯ ನಾಯ್ಡು

* ಬೆಳಗ್ಗೆ 10.36 – ಸೆಲ್ವಂಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ರಾಜ್ಯಸಭಾ ಸದಸ್ಯ ಮೈತ್ರೆಯನ್
* ಬೆಳಗ್ಗೆ 10.47 – ಪನ್ನೀರ್ ಸೆಲ್ವಂ – ಪಾಂಡಿಯನ್ ಸುದ್ದಿಗೋಷ್ಠಿ – ವಿಧಾನಸಭೆಯಲ್ಲಿ ನನ್ನ ಬಲ ಏನೆಂದು ತೋರಿಸುವೆ. ಜಯಾ ಸಾವಿನ ಬಗ್ಗೆ ತನಿಖೆಗೆ ಆದೇಶ
* ಬೆಳಗ್ಗೆ 11.37 – ಅಣ್ಣಾಡಿಎಂಕೆ ಕಚೇರಿಯಲ್ಲಿ ಶಶಿಕಲಾ ನೇತೃತ್ವದಲ್ಲಿ ಶಾಸಕರ ಸಭೆ. 130 ಶಾಸಕರು ಹಾಜರು
* ಬೆಳಗ್ಗೆ 11.44 – ಇವತ್ತು ಮುಂಬೈನಲ್ಲೇ ಉಳಿಯಲು ರಾಜ್ಯಪಾಲ ವಿದ್ಯಾಸಾಗರ್ ರಾವ್ ನಿರ್ಧಾರ

* ಮಧ್ಯಾಹ್ನ 12.10 – ಶಶಿಕಲಾಗೆ ಚುನಾವಣಾ ಆಯೋಗಕ್ಕೆ ಶಾಕ್. ಜನೆರಲ್ ಸೆಕ್ರೆಟರಿಯಾಗಿ ಆಯ್ಕೆಯಾದ ಬಗ್ಗೆ ವಿವರ ಕೋರಿ ನೋಟೀಸ್
* ಮಧ್ಯಾಹ್ನ 1.10 – ಶಾಸಕರ ಸಭೆ ಬಳಿಕ ಶಶಿಕಲಾ ಸುದ್ದಿಗೋಷ್ಠಿ. ಪನ್ನೀರ್ ಸೆಲ್ವಂ ಒಬ್ಬ ವಂಚಕ. ಡಿಎಂಕೆ ಜೊತೆ ಸೇರಿದ್ದಾರೆ ಎಂದು ವಾಗ್ದಾಳಿ
* ಮಧ್ಯಾಹ್ನ 1.37 – ಶಶಿಕಲಾ ಆರೋಪ ತಳ್ಳಿಹಾಕಿದ ಎಂ ಕೆ ಸ್ಟಾಲಿನ್
* ಮಧ್ಯಾಹ್ನ 2.15 – ರಾಷ್ಟ್ರಪತಿಗಳ ಮುಂದೆ ಬಲಪ್ರದರ್ಶನ ಮಾಡಲು ಶಶಿಕಲಾ ಅಂಡ್ ಟೀಂ ಚಿಂತನೆ
* ಮಧ್ಯಾಹ್ನ 3.20 – 130 ಶಾಸಕರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಶಶಿಕಲಾ

TAGGED:AIADMKjayalalithapublic tvsasikalatamilnaduಎಐಎಡಿಎಂಕೆಜಯಲಲಿತಾತಮಿಳುನಾಡುಪನ್ನೀರ್ ಸೆಲ್ವಂಪಬ್ಲಿಕ್ ಟಿವಿ
Share This Article
Facebook Whatsapp Whatsapp Telegram

Cinema news

Karunya Ram Samrudhi Ram
25 ಲಕ್ಷ ವಂಚನೆ – ತಂಗಿ ವಿರುದ್ಧವೇ ನಟಿ ಕಾರುಣ್ಯಾ ರಾಮ್‌ ದೂರು
Cinema Crime Latest Main Post Sandalwood
Kavya
BBK 12 | ಧ್ರುವಂತ್‌ ಔಟ್‌ – Top 6 ಸ್ಪರ್ಧಿಯಾಗಿ ಕಾವ್ಯ ಸೇಫ್‌
Cinema Latest Main Post TV Shows
Shri Mahadev
ಅಮೂಲ್ಯ ನಟನೆಯ ಪೀಕಬೂ ಚಿತ್ರಕ್ಕೆ ಶ್ರೀರಾಮ್ ಹೀರೋ
Cinema Latest Sandalwood Top Stories
bigg boss 1
Bigg Boss: ಇಂದು ಮಿಡ್‌ ವೀಕ್‌ ಎಲಿಮಿನೇಷನ್‌ – ಮನೆಯಿಂದ ಹೊರ ಹೋಗೋದ್ಯಾರು?
Cinema Latest Top Stories TV Shows

You Might Also Like

Lawrence Bishnoi Gang
Crime

ದೆಹಲಿ | ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರು ಶಾರ್ಪ್‌ಶೂಟರ್ಸ್ ಅರೆಸ್ಟ್‌ -‌ ಓರ್ವನಿಗೆ ಗುಂಡೇಟು

Public TV
By Public TV
58 seconds ago
Sports Authority Of India Keral
Crime

ಕೇರಳ | ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಹಾಸ್ಟೆಲ್‌ನಲ್ಲಿ ಇಬ್ಬರು ಬಾಲಕಿಯರು ನೇಣಿಗೆ ಶರಣು

Public TV
By Public TV
25 minutes ago
donald trump
Latest

ಇರಾನ್‌ ವಿರುದ್ಧ ಮಿಲಿಟರಿ ದಾಳಿ ವಾರ, ತಿಂಗಳ ಕಾಲ ನಡೆಯಬಾರದು: ಟ್ರಂಪ್‌ ಸೂಚನೆ

Public TV
By Public TV
30 minutes ago
makar sankranti 1
Karnataka

ಹಳ್ಳಿಗಳಲ್ಲಿ ಸುಗ್ಗಿ ಸಂಕ್ರಾಂತಿ – ಹಬ್ಬ ಆಚರಣೆ ಹೇಗಿರುತ್ತೆ?

Public TV
By Public TV
35 minutes ago
RCB 2
Bengaluru City

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ – ಮಕರ ಸಂಕ್ರಾಂತಿಗೆ ಶುಭ ಹಾರೈಸಿದ ಆರ್‌ಸಿಬಿ

Public TV
By Public TV
52 minutes ago
Kashi Chandramouleshwara Temple Srirangapatna
Districts

ಮಕರ ಸಂಕ್ರಾಂತಿ – ಕಾಶಿ ಚಂದ್ರಮೌಳೇಶ್ವರ ಗರ್ಭಗುಡಿಯ ಶಿವಲಿಂಗದ ಮೇಲೆ ಸೂರ್ಯರಶ್ಮಿ ಸ್ಪರ್ಶ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?