ಕ್ಯಾನ್ಸರ್ ರೋಗ ಪರೀಕ್ಷೆ ಎಂದರೇನೇ ರೋಗಿಯ ಎದೆ ಬಡಿತ ಏರುಪೇರಾಗುತ್ತದೆ. ಶಸ್ತ್ರ ಚಿಕಿತ್ಸೆ, ಕಿಮೋಥೆರಪಿ ಅಥವಾ ರೇಡಿಯೇಷನ್ ಯಾವುದೇ ಇರಲಿ, ಮುಂದೇನು ಕಾದಿದೆಯೋ ಎಂಬ ಭಯವೇ ರೋಗಿ ಮತ್ತು ಅವರ ಪರಿವಾರದವರು ಇನ್ನಷ್ಟು ಹೈರಾಣಾಗುವಂತೆ ಮಾಡುತ್ತದೆ. ಹಾಗಾಗಿ ರೋಗಿಯ ಚಿಕಿತ್ಸೆಗಾಗಿ ರೂಪಿಸಲ್ಪಟ್ಟ ಯೋಜನೆಯನ್ನು ಅನುಭವಿ ತಜ್ಞರೆ ನಿಖರವಾಗಿ ನಿರ್ಧರಿಸಲ್ಪಟ್ಟ ಹಂತಗಳನ್ನು ಅನುಸರಿಸುವ ಮೂಲಕ ಕಾರ್ಯರೂಪಕ್ಕೆ ತರಬೇಕಾಗುತ್ತದೆ.
ಈಗ ಲಭ್ಯವಿರುವ ಎಲ್ಲಾ ಚಿಕಿತ್ಸಾ ವಿಧಾನಗಳಲ್ಲಿ ಕಿಮೋಥೆರಪಿಯ ಕುರಿತು ಇರುವ ಕಟ್ಟುಕತೆ, ಅನಿಸಿಕೆ ಸಂಶಯ ಏನೆಂದರೆ, ಪ್ರಸ್ತುತ ಇರುವ ಕಿಮೋಥೆರಪಿಯು ರೋಗಿಯಲ್ಲಿ ಕ್ಯಾನ್ಸರ್ನ ಹರಡುವಿಕೆಯನ್ನು ತಡೆಗಟ್ಟಲು ಇಂದು ಅತ್ಯಂತ ಸುರಕ್ಷಿತ ಮತ್ತು ಅತಿ ಹೆಚ್ಚು ಪರಿಣಾಮಕಾರಿ ವಿಧಾನ; ಇದನ್ನು ಅನುಷ್ಠಾನಗೊಳಿಸುವ ವಿಶೇಷ ವೈದ್ಯಕೀಯ ಪರಿಣತಿ ಮತ್ತು ಕ್ಷೇತ್ರದಲ್ಲಿ ಅನುಭವ ಅತ್ಯಗತ್ಯ.
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಎಲ್ಲಕ್ಕಿಂತ ಹೆಚ್ಚು ಭಯಾನಕ ಜಟಿಲತೆ ಎಂದರೆ ರೋಗನಿರೋಧಕ ಶಕ್ತಿಯ ಕುಗ್ಗುವಿಕೆ. ಮಾನವನ ರೋಗನಿರೋಧಕ ಶಕ್ತಿಯನ್ನು ಕ್ಯಾನ್ಸರ್ ನಿಯಂತ್ರಣಕ್ಕೆ ಬಳಸಿಕೊಳ್ಳಲು ಕ್ಯಾನ್ಸರ್ ವಿಜ್ಞಾನಿಗಳು ಹಲವು ದಶಕಗಳಿಂದ ಶ್ರಮಿಸುತ್ತಿದ್ದಾರೆ. ಈ ದಿಶೆಯಲ್ಲಿ ಅನೇಕ ಮೈಲಿಗಲ್ಲುಗಳನ್ನು ಕಂಡು ಹಿಡಿದಿದ್ದಾರೆ. ಆದರೆ ಪ್ರಸ್ತುತ ದಶಕದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ರೋಗನಿರೋಧಕ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ವಿಜ್ಞಾನಿಗಳು ಮಹತ್ತರ ಯಶಸ್ಸನ್ನು ಪಡೆದಿದ್ದಾರೆ. ಬೆಂಗಳೂರಿನಲ್ಲಿರುವ ಆಧುನಿಕ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ಸೈಟ್ ಕೇರ್ ನ ಹಿರಿಯ ಕನ್ಸಲ್ಟೆಂಟ್ ವೈದ್ಯರಾಗಿರುವ ಡಾ. ಪ್ರಸಾದ್ ನಾರಯಣನ್ರವರ ಮಾತಿನಲ್ಲಿ, “ಪ್ರಮುಖ ಕ್ಯಾನ್ಸರ್ ಚಿಕಿತ್ಸೆಯಾಗಿ ಇಮ್ಮ್ಯೂನೋಥೆರಪಿಯ ಬೆಳವಣಿಗೆ ಬಹಳಷ್ಟು ಕ್ಯಾನ್ಸರ್ ರೋಗಿಗಳ ಜೀವನದಲ್ಲಿ ಬಹಳ ಒಳ್ಳೆಯ ಪರಿಣಾಮ ಉಂಟುಮಾಡಿದೆ. ಕ್ಯಾನ್ಸರ್ ಚಿಕಿತ್ಸೆ ಬಹಳ ಕಠಿಣ ಎನ್ನುವ ಕಾಲವೊಂದಿತ್ತು. ಆದರೆ ಈಗ ಮೆಲನೋಮಾದಂತೆ ಇಮ್ಮ್ಯೂನೋಥೆರಪಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈ ವಿಧಾನವು ಭಾರತದಲ್ಲಿ ಶ್ವಾಸಕೋಶ, ತಲೆ, ಕುತ್ತಿಗೆ, ಉದರ/ಹೊಟ್ಟೆ, ಸರ್ವಿಕ್ಸ್ (ಗರ್ಭಕಂಠ) ಮತ್ತು ಜೆನಿಟೋ ಯೂರಿನರಿ ಕ್ಯಾನ್ಸರುಗಳಂತಹ ಅನೇಕ ಸಾಮಾನ್ಯ ಕ್ಯಾನ್ಸರುಗಳ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅನೇಕ ಇಮ್ಮ್ಯೂನೋ ಮಾಡ್ಯುಲೇಟರಿ ಔಷಧಗಳು ಕ್ಯಾನ್ಸರನ್ನು ಎದುರಿಸುವ ವಿಧಾನದಲ್ಲಿ ಬಹಳಷ್ಟು ಪ್ರಭಾವ ಬೀರಿವೆ. ಉದಾಹರಣೆಗೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆ ಕಳೆದ ದಶಕದಲ್ಲಿ ಸಂಪೂರ್ಣ ಬದಲಾವಣೆಯನ್ನು ಕಂಡಿದೆ.
ಶ್ವಾಸಕೋಶದ ಕ್ಯಾನ್ಸರಿಗೆ ಕಾರಣವಾಗುವ ಜೆನೆಟಿಕ್ ಫ್ರೇಮ್ ವರ್ಕ್ಗಳಲ್ಲಿ ನಿರ್ದಿಷ್ಟ ಸಮಸ್ಯೆಗಳ ಕುರಿತು ಹೆಚ್ಚಿದ ತಿಳುವಳಿಕೆಯ ಪರಿಣಾಮವಾಗಿ ಬಹಳಷ್ಟು ಕ್ಯಾನ್ಸರ್ ರೋಗಿಗಳು ಯೋಜಿತ ಚಿಕಿತ್ಸೆ ಮತ್ತು ಇಮ್ಮ್ಯೂನೋಥೆರಪಿಯ ಲಾಭ ಪಡೆದು ಉತ್ತಮ ಪರಿಣಾಮ ಕಂಡಿದ್ದಾರೆ. ಸರಿಯಾದ ಇಮ್ಮ್ಯೂನೋಥೆರಪಿಯನ್ನು ನಿರ್ಣಯಿಸಲು ರೋಗಿಗಳನ್ನು ತರಬೇತಿ ಹೊಂದಿರುವ ಆಂಕಾಲಜಿಸ್ಟರು ನೋಡಬೇಕು. ಬಹುಮುಖ ವಿಶೇಷಜ್ಞರ ತಂಡದಿಂದ ಚಿಕಿತ್ಸಾಪೂರ್ವ ಪರೀಕ್ಷೆ ನಡೆಸಿದ ನಂತರ ಒಂದು ಪೂರ್ಣರೂಪದ ಚಿಕಿತ್ಸಾ ಯೋಜನೆಯನ್ನು ರೋಗಿಗೆ ನೀಡಲಾಗುತ್ತದೆ. ರೋಗಿಗೆ ನಿಯಮಿತ ಮೇಲ್ವಿಚಾರಣೆ ವತ್ತು ಯೋಜಿತ ಅನುಕರಣೆಯ ಮೂಲಕ ಹೊರರೋಗಿಯಂತೆ ಚಿಕಿತ್ಸೆ ನೀಡಲಾಗುತ್ತದೆ. ಇಮ್ಮ್ಯೂನೋ ಚಿಕಿತ್ಸೆಯನ್ನು ಪಡೆಯುವ ಕ್ಯಾನ್ಸರ್ ರೋಗಿಗಳಿಗೆ ಒಂದು ಸಮಗ್ರ ಆರೈಕೆಯ ವ್ಯವಸ್ಥೆ ರೋಗಿಗಷ್ಟೇ ಸಹಾಯಕವಾಗುದಲ್ಲದೆ ಅವರ ಕುಟುಂಬಕ್ಕೂ ಸಾಂತ್ವನಕಾರಿಯಾಗಿರುತ್ತದೆ”.
ಆದರೆ ಇಮ್ಮ್ಯೂನೋಥೆರಪಿಯಲ್ಲಿ ಅಪಾಯವೇ ಇಲ್ಲವೇ? ‘ಅಪಾಯವೇ ಇಲ್ಲದ ಕ್ಯಾನ್ಸರ್ ಚಿಕಿತ್ಸೆ ಬಹಳ ಕಡಿಮೆ.’ ಎನ್ನುತ್ತಾರೆ ಡಾ ಪ್ರಸಾದ್ ನಾರಾಯಣನ್ರವರು. ಆದರೆ ಇಮ್ಮ್ಯೂನೊಥೆರಪಿಯನ್ನು ಆರಂಭಿಸುವ ಮುನ್ನ ಅದರಲ್ಲಿನ ಅಪಾಯ ಮತ್ತು ಲಾಭದ ಕುರಿತು ತೂಗಿನೊಡಬೇಕಾದ್ದೂ ಅನಿವಾರ್ಯ ಎಂದು ಹೇಳುತ್ತಾರೆ. ಇಮ್ಮ್ಯೂನೋಥೆರಪಿ ಒದಗಿಸುವ ಕ್ಯಾನ್ಸರ್ ಕೇಂದ್ರಗಳ ಸಾಮಥ್ರ್ಯ ಗಮನಿಸಬೇಕಾದ್ದೂ ಬಹಳ ಮುಖ್ಯ ಎನ್ನುತ್ತಾರೆ.
ಇಮ್ಮ್ಯೂನೋಥೆರಪಿಯಲ್ಲಿ ಅಡ್ಡಪರಿಣಾಮಗಳು ಇಲ್ಲದಿಲ್ಲ. ನಾವು ರೋಗಿಯ ರೋಗನಿರೋಧಕ ಶಕ್ತಿಯನ್ನು ಉದ್ದೀಪಿಸುತ್ತೇವೆ. ಆಗ ಅದು ಅಗತ್ಯಕ್ಕಿಂತ ಹೆಚ್ಚು ಉದ್ದೀಪನಗೊಳ್ಳುವ ಸಾಧ್ಯತೆ ಇದೆ. ಆದರೆ ಎಲ್ಲಾ ಸಮಯದಲ್ಲೂ ಚಿಕಿತ್ಸೆಯು ನಮಗೆ ಬೇಕಾದ ಹಾಗೆಯೇ ನಡೆಯುತ್ತದೆ ಎಂದು ಹೇಳಲು ಬರುವುದಿಲ್ಲ. ಆದ್ದರಿಂದ ಈ ರೀತಿಯ ಜಟಿಲ ಚಿಕಿತ್ಸೆಗಳಿಗಾಗಿ ಈ ಚಿಕಿತ್ಸೆಗಳಲ್ಲಿ ಉತ್ತಮ ಸಾಮಥ್ರ್ಯ ಹೊಂದಿದ ವಿಶೇಷ ಆಸ್ಪತ್ರೆಗಳನ್ನು ಅವಲಂಬಿಸುವುದು ಅಗತ್ಯ. ಎನ್ನುತ್ತಾರೆ ಸೈಟ್ ಕೇರ್ ನ ವಿಶೇಷಜ್ಞರಾದ ಡಾ. ಪ್ರಸಾದ್.
“ಪ್ರಸ್ತುತ ಪರಿಸ್ಥಿತಿಯಲ್ಲಿ ಇಮ್ಮ್ಯೂನೋಥೆರಪಿ ಕ್ಯಾನ್ಸರ್ ಚಿಕಿತ್ಸೆಯ ಬತ್ತಳಿಕೆಗೆ ಇಂದು ಮುಖ್ಯ ಸೇರ್ಪಡೆ. ರೋಗಿಗಳ ರೋಗನಿರೋಧಕ ಶಕ್ತಿಯನ್ನು ಹೀರುವ ಮೂಲಕ ಈ ಚಿಕಿತ್ಸೆ ಕೆಲಸ ಮಾಡುತ್ತದೆ. ಇದು ರೋಗನಿರೋಧಕವನ್ನು ಮಾರ್ಪಡಿಸುವ ಮೂಲಕ ವಿಪರೀತ ವಿಭಜನೆಗೊಳ್ಳುವ ಕ್ಯಾನ್ಸರ್ ಕಣಗಳನ್ನು ಸಂಭಾಳಿಸಲು ದೇಹವನ್ನೇ ಸಶಕ್ತಗೊಳಿಸುತ್ತದೆ. ಕ್ಯಾನ್ಸರ್ ಎದುರಿಸಲು ದೇಹವು ತನ್ನದೇ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವಂತೆ ಮಾಡುವುದು ಇಲ್ಲಿನ ಉದ್ದೇಶ.”
ಡಾ.ಪ್ರಸಾದ್ ನಾರಾಯಣನ್, ಸೀನಿಯರ್ ಕನ್ಸಲ್ಟೆಂಟ್, ಮೆಡಿಕಲ್ ಆಂಕಾಲಜಿ
ಕ್ಯಾನ್ಸರ್ ಕುರಿತ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ: www.cytecare.com