ಮಡಿಕೇರಿ: ಪತಿಯಿಂದ(Husband) ದೂರವಾಗಿ ಮತ್ತೊಬ್ಬನ ಜೊತೆ ಗೌಪ್ಯ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯೊಬ್ಬಳು ಬೇರೊಬ್ಬನ ಸಂಗ ಬೆಳೆಸಿದ್ದಕ್ಕೆ ಪ್ರಿಯಕರಿನಿಂದ(Lover) ಕೊಲೆಯಾದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಕೊಡಗು(Kodagu) ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಾಪುರದ ಝಾಹಿರಾ ಮೃತ ಮಹಿಳೆ. ಝಾಹಿರಾ ಗಂಡನಿಂದ ದೂರಾಗಿ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಳು. ಇದರ ಜೊತೆಗೆ ಝಾಹಿರಾ ಹಲವು ವರ್ಷಗಳಿಂದ ಪೂವಯ್ಯನ ಜೊತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಳು. ಆಗಾಗ ಪೂವಯ್ಯ ಈಕೆಯ ಮನೆಗೆ ಬಂದು ಹೋಗುತ್ತಿದ್ದ. ಈ ಬಗ್ಗೆ ಊರವರೆಲ್ಲರೂ ಮಾತನಾಡಿಕೊಳ್ಳುತ್ತಿದ್ದರು.
ಪೂವಯ್ಯನಿಗೆ ಹೆಂಡತಿ, ಮಕ್ಕಳು ಇದ್ದರೂ, ಝಾಹಿರಾಳ ಜೊತೆ ಅಕ್ರಮ ಸಂಬಂಧ ಇಟ್ಕೊಂಡಿದ್ದ. ಆದರೆ ಇದರ ನಡುವೆ ಝಾಹಿರಾ ಮತ್ತೊಬ್ಬ ಗೆಳೆಯನನ್ನು ಬಯಸಿದ್ದಳು. ಈ ಬಗ್ಗೆ ತಿಳಿದ ಪೂವಯ್ಯ ಇಂದು ಝಾಹಿರಾ ಮನೆಗೆ ಬಂದು ಆಕೆಯ ಜೊತೆ ಕ್ಯಾತೆ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಝಾಹಿರಾಳಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ತನ್ನ ಹೆಂಡತಿಗೆ ಕರೆ ಮಾಡಿ ಬೇಗ ಮನೆಗೆ ಬಾ, ನಾನು ಕೊಲೆ ಮಾಡಿದ್ದೇನೆ. ಇನ್ನೇನು ಜೈಲಿಗೆ(Jail) ಹೋಗುತ್ತೇನೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ವಿರೋಧದ ಮಧ್ಯೆ ಮತಾಂತರ ನಿಷೇಧ ಮಸೂದೆ ಅಂಗೀಕಾರ
ಇದೀಗ ತಂದೆಯಿಂದ ದೂರಾಗಿದ್ದ ಮಕ್ಕಳು ತಾಯಿ ಝಾಹಿರಾಳ ನಡೆ ಹಾಗೂ ತಾಯಿಯ ಗೆಳೆಯ ಪೂವಯ್ಯನ ಕೃತ್ಯದಿಂದ ಇದೀಗ ಅನಾಥವಾಗಿವೆ. ಅತ್ತ ಹೆಂಡತಿ ಇದ್ದರೂ ಪರಸ್ತ್ರೀ ಆಸೆಗೆ ಬಿದ್ದ ಪೂವಯ್ಯ ಮಾಡಿದ ತಪ್ಪಿನಿಂದ ಆತನ ಹೆಂಡತಿ ಮಕ್ಕಳು ಕಣ್ಣಿರಲ್ಲಿ ಕೈ ತೊಳೆಯುವಂತಾಗಿದೆ. ಘಟನೆಗೆ ಸಂಬಂಧಿಸಿ ಮಾದವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೂವಯ್ಯನನ್ನು ಪೊಲೀಸರು ಬಂಧಿಸಿದ್ದಾರೆ.(Arrest) ಇದನ್ನೂ ಓದಿ: ಭಾರತವನ್ನು ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರವಾಗಿ ರೂಪಿಸಿ – ಗೆಹ್ಲೋಟ್