ಲಂಚ ಕೊಟ್ರೆ ಮಾತ್ರ ಮನೆ ಮಂಜೂರು- ಹಾರಕನಾಳು ಪಿಡಿಓ ಲಂಚಾವತಾರ ಬಯಲು

Public TV
1 Min Read
DVG 1

ದಾವಣಗೆರೆ: ವಸತಿ ಯೋಜನೆ ಫಲಾನುಭವಿಗಳನ್ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬ ಮನೆಗೆ ಕರೆಸಿಕೊಂಡು ಲಂಚ ಪಡೆಯುತ್ತಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಾರಕನಾಳು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಹಾರಕನಾಳು ಗ್ರಾಪಂ ಪಿಡಿಓ ಸಿ.ಬಸಪ್ಪ ಲಂಚ ಪಡೆಯುವ ಪಿಡಿಓ. ಬಸವ ವಸತಿ ಯೋಜನೆಯಡಿ ಮನೆ ಮಂಜೂರಿಗೆ 20 ರಿಂದ 30 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಡುತ್ತಿರುವ ಈತ, ಲಂಚ ಕೊಟ್ರೆ ಮಾತ್ರ ಮನೆ ಮಂಜೂರು ಇಲ್ಲದಿದ್ದರೆ ಫಲಾನುಭವಿಗಳ ಅಲೆದಾಡುವ ಪರಿಸ್ಥಿತಿಯಾಗಿತ್ತು.

DVG 3

ಇತ್ತೀಚೆಗೆ ಪಿಡಿಓ ಬಸಪ್ಪನ ನ ಮನೆಯಲ್ಲಿ ಫಲಾನುಭವಿಯಿಂದ 20 ಸಾವಿರ ರೂ. ಲಂಚ ಪಡೆಯುವುದು ಕ್ಯಾಮೆರಾಗೆ ಸೆರೆಯಾಗಿದ್ದು. ಗರಿಗರಿ 2 ಸಾವಿರ ನೋಟುಗಳನ್ನು ರಾಜರೋಷವಾಗಿ ಎಣಿಸುತ್ತಿದ್ದ. ಸದ್ಯ ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

ಸರ್ಕಾರದಿಂದ ಬರುವ ಯೋಜನೆಗಳನ್ನು ಫಲಾನುಭವಿಗಳಿಗೆ ನೀಡಬೇಕು ಎಂದರೆ ಸಾಮಾನ್ಯ ಜನರು ಇಂತಹ ಲಂಚಬಾಕ ಅಧಿಕಾರಿಗಳ ಹೊಟ್ಟೆ ತುಂಬಿಸುವಂತ ಪರಿಸ್ಥಿತಿ ಎದುರಾಗಿದೆ. ಲಂಚಕೋರರಿಗೆ ಕಠಿಣ ಕ್ರಮವಾಗಬೇಕು ಎನ್ನುವುದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

DVG 1 1

Share This Article
Leave a Comment

Leave a Reply

Your email address will not be published. Required fields are marked *