ಕೊಪ್ಪಳ: ನಿಮ್ಮ ಮನೆಯಲ್ಲಿ ಟಾಯ್ಲೆಟ್ ಇಲ್ಲ ಅಂದ್ರೆ ಈಗ್ಲೆ ಕಟ್ಟಿಕೊಳ್ಳಿ ಇಲ್ಲವಾದ್ರೆ ನಿಮ್ಮ ಮನೆಗೆ ವಿದ್ಯುತ್ ಕಟ್ ಆಗಲಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ಸೂಚನೆ ಮೇರೆಗೆ ಹೀಗೊಂದು ಫರ್ಮಾನು ಹೊರಡಿಸಲಾಗಿದೆ.
ಕೊಪ್ಪಳ ಜಿಲ್ಲೆಯನ್ನು ಅಕ್ಟೋಬರ್ 2 ರೊಳಗೆ ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡೋ ಉದ್ದೇಶದಿಂದ ಜಿಲ್ಲಾ ಪಂಚಾಯತ್ ಸರ್ಕಸ್ ಮಾಡ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 1.61 ಲಕ್ಷ ಶೌಚಾಲಯಗಳು ನಿರ್ಮಾಣಗೊಂಡಿವೆ. ಇನ್ನೂ 58 ಸಾವಿರ ಮನೆಗಳಲ್ಲಿ ಶೌಚಾಲಯ ಇಲ್ಲ.
ಹೀಗಾಗಿ ಬೇಗ ಟಾಯ್ಲೆಟ್ ಕಟ್ಟಿಕೊಳ್ಳಿ. ಇಲ್ಲ ಅಂದ್ರೆ ಕತ್ತಲ ಜೀವನಕ್ಕೆ ರೆಡಿಯಾಗಿ ಅಂತಾ ಜಿಲ್ಲಾ ಪಂಚಾಯ್ತಿ ಸಿಇಓ ಖಡಕ್ ಆದೇಶ ಮಾಡಿದ್ದಾರೆ. ಆದರೆ ನೀರಿಲ್ಲ, ಅದಿಲ್ಲ, ಇದಿಲ್ಲ ಅಂತಾ ಜನ ಸಬೂಬು ಹೇಳುತ್ತಿದ್ದಾರೆ.