ತನಿಖೆ ಮಾಡಿದ್ರೆ ಕಾಂಗ್ರೆಸ್ಸಿನವರಿಗೋಸ್ಕರ ಹೊಸ ಜೈಲು ತೆರೆಯಬೇಕಾಗುತ್ತೆ: ಆರಗ ತಿರುಗೇಟು

Public TV
1 Min Read
araga jnanendra 3

ಬೆಂಗಳೂರು: ತನಿಖೆ ಮಾಡಿದ್ರೆ ಅನೇಕ ಕಾಂಗ್ರೆಸ್ಸಿ (Congress) ಗರು ಜೈಲಿಗೆ ಹೋಗಬೇಕಾಗುವ ಸಾಧ್ಯತೆ ಇದೆ. ಅದಕ್ಕಾಗಿ ಹೊಸ ಜೈಲ (Jail) ನ್ನೇ ತೆರೆಯಬೇಕಾಗುತ್ತದೆ ಅಂತಾ ಗೃಹಸಚಿವ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.

CongressFlags1 e1613454851608

ನಾವು ಅಧಿಕಾರಕ್ಕೆ ಬಂದ್ರೆ ಬಿಜೆಪಿ (BJP)ಯವರನ್ನ ಜೈಲಿಗೆ ಕಳಿಸ್ತೀವಿ ಅನ್ನೋ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ಒಬ್ಬ ವಿಪಕ್ಷ ನಾಯಕನಾಗಿ ಹರಿಪ್ರಸಾದ್ ಸಿಲ್ಲಿ ಸ್ಟೇಟ್‍ಮೆಂಟ್ ನೀಡಿದ್ದಾರೆ ಅಂತಾ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ವೇಶ್ಯೆ ಅನ್ನೋ ಪದ ಬಳಸಿದ ಫೂಟೇಜ್ ಕೊಟ್ಟರೆ ಎಂಎಲ್‍ಸಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ: ಬಿ.ಕೆ ಹರಿಪ್ರಸಾದ್

congress flag b

ಕಾಂಗ್ರೆಸ್‍ನಲ್ಲಿರುವ ಅನೇಕರು ಜೈಲಿನ ಒಳಗಿದ್ದಾರೆ. ಇನ್ನೂ ಅನೇಕರು ಜೈಲಿಗೆ ಹೋಗಲಿದ್ದಾರೆ ಅಂತಾ ಕಿಡಿಕಾರಿದ್ರು. ನಾವು ಮೂರು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ ಅಂತಾ ರಮೇಶ್ ಕುಮಾರ್ ಹೇಳಿದ್ರು. ಅಲ್ಲಿರುವ ರೌಡಿಗಳು ಇವರ ಕಾಲದಲ್ಲಿ ಜೈಲನ್ನೇ ಗೆಸ್ಟ್ ಹೌಸ್ ಮಾಡಿಕೊಂಡಿದ್ರು ಈಗ ಸಾಮಾನ್ಯ ಜೈಲಾಗಿ ಉಳಿದಿದೆ ಅಂತಾ ತಿರುಗೇಟು ಕೊಟ್ಟರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *