ಅಶ್ವಥ್ ನಾರಾಯಣ್ ಹೇಳಿಕೆ ನಾನೂ ಒಪ್ಪಲ್ಲ, ಯಾವತ್ತೂ ಸಾವು ಬಯಸಬಾರದು – ಸಿ.ಟಿ ರವಿ

Public TV
1 Min Read
CT Ravi

ನವದೆಹಲಿ: ಸಚಿವ ಅಶ್ವಥ್ ನಾರಾಯಣ್‌ (Ashwath Narayan) ನೀಡಿದ ಹೇಳಿಯನ್ನು ನಾನೂ ಒಪ್ಪುವುದಿಲ್ಲ. ಸಿದ್ದರಾಮಯ್ಯ (Siddaramaiah) ನಮ್ಮವರೆ. ನಮ್ಮ ನಡುವೆ ಸೈದ್ಧಾಂತಿಕ, ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಸಾವನ್ನು ಯಾವತ್ತೂ ಬಯಸಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹೇಳಿದ್ದಾರೆ.

ASHWATH NARAYAN COMPLAINT

ಅಶ್ವಥ್ ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 30ಕ್ಕೂ ಅಧಿಕ ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ (BJP). ನಮ್ಮ ಪಕ್ಷವೂ ಇಂತಹ ಹೇಳಿಕೆಯನ್ನು ಒಪ್ಪುವುದಿಲ್ಲ. ಸಿದ್ದರಾಮಯ್ಯ ಅವರನ್ನು ಸೋಲಿಸಿ ಎನ್ನುವ ಹೇಳಿಕೆಗೆ ನಮ್ಮ ವಿರೋಧ ಇಲ್ಲ. ರಾಜಕೀಯದಲ್ಲಿ ಇದು ಸಾಮಾನ್ಯ. ಆದರೆ ಅಶ್ವಥ್ ನಾರಾಯಣ್ ಯಾವ ಆಯಾಮದಲ್ಲಿ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಪೂರ್ಣ ಮಾಹಿತಿ ಇಲ್ಲದೇ ಮಾತನಾಡುವುದು ತಪ್ಪಾಗುತ್ತದೆ. ಅದೇನಿದ್ದರೂ ಸಿದ್ದರಾಮಯ್ಯ (Siddaramaiah) ಅವರಿಗೆ ದೇವರು ದೀರ್ಘಾಯುಷ್ಯ ಕರುಣಸಲಿ ಎಂದು ಹಾರೈಸಿದರು. ಇದನ್ನೂ ಓದಿ: ಬಜೆಟ್‌ನಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಅನುದಾನ: ಬೊಮ್ಮಾಯಿ ಭರವಸೆ

SIDDARAMAIAH 7

ಶಾಸಕ ಯು.ಟಿ ಖಾದರ್ (UT Khader) ಅವರ ಮೀರ್ ಸಾಧಿಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ಮೀರ್ ಸಾಧಿಕ್ ಟಿಪ್ಪು ಸುಲ್ತಾನ್ (Tipu Sultan) ಆಶ್ರಯದಲ್ಲಿದ್ದವರು. ಟಿಪ್ಪುವನ್ನ ಯಾರು ಪ್ರೀತಿಸ್ತಾರೆ? ಟಿಪ್ಪುವನ್ನ ಪ್ರೀತ್ಸೋರು ಕಾಂಗ್ರೆಸ್‌ನವ್ರು. ಹೀಗಾಗಿ ಕಾಂಗ್ರೆಸ್‌ನವರು ಮೀರ್ ಸಾಧಿಕ್‌ಗಳು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮೋದಿ ಸರ್ಕಾರ ಮುಸ್ಲಿಂ ಸಮುದಾಯದ ಹಕ್ಕುಗಳಿಗಾಗಿ ಹೋರಾಡಿದೆ: ಕೌಸರ್‌ ಜಹಾನ್‌

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *