ನೋಟ್‍ ಬ್ಯಾನ್‍ಗೆ 1 ವರ್ಷ- 125 ಕೋಟಿ ಭಾರತೀಯರು ಹೋರಾಡಿ ಗೆದ್ದಿದ್ದಾರೆ ಎಂದ ಮೋದಿ, ದುರಂತವೆಂದು ಟೀಕಿಸಿದ ರಾಗಾ

Public TV
1 Min Read
MODI RAHUL

ನವದೆಹಲಿ: ಕಪ್ಪುಹಣ, ಭ್ರಷ್ಟಾಚಾರ, ಖೋಟಾ ನೋಟು ಹಾಗೂ ಭಯೋತ್ಪಾದನೆ ತಡೆಯಲೆಂದು ಪ್ರಧಾನಿ ನರೇಂದ್ರ ಮೋದಿ ಏಕಾಏಕಿ ನೋಟ್ ಬ್ಯಾನ್ ಮಾಡಿ ಇಂದಿಗೆ ಒಂದು ವರ್ಷವೇ ಕಳೆಯಿತು. ಹೀಗಾಗಿ ನೋಟ್ ಬ್ಯಾನ್‍ಗೆ ಸಹಕರಿಸಿದ ಜನತೆಗೆ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸಿದ್ದಾರೆ.

125 ಕೋಟಿ ಭಾರತೀಯರು ನಿರ್ಣಾಯಕ ಯುದ್ಧದಲ್ಲಿ ಹೋರಾಡಿ ಗೆದ್ದಿದ್ದಾರೆ ಅಂತ ಟ್ವೀಟ್ ಮಾಡಿರುವ ಪ್ರಧಾನಿ ನೋಟ್ ಬ್ಯಾನ್‍ನಿಂದ ಆಗಿರೋ ಪ್ರಯೋಜನದ ಬಗ್ಗೆ ಕಿರುಚಿತ್ರವನ್ನು ಟ್ವೀಟಿಸಿದ್ದಾರೆ.

ಇನ್ನು ನೋಟು ಅಮಾನ್ಯ ಒಂದು ದುರಂತ ಅಂತ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ. ಮುಂದಾಲೋಚನೆ ಇಲ್ಲದೇ ಕೈಗೊಂಡಿರುವ ನೋಟ್ ಬ್ಯಾನ್‍ನಿಂದ ಕೋಟ್ಯಾಂತರ ಜನರ ಬದುಕು ನಾಶವಾಗಿದೆ. ಪ್ರಾಮಾಣಿಕ ಭಾರತೀಯರ ಜೊತೆ ಸದಾ ನಾವಿರುತ್ತೇವೆ ಅಂತ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

vlcsnap 2017 11 08 07h13m20s29

ದೇಶದಲ್ಲಿ ನೋಟ್ ಬ್ಯಾನ್ ಆಗಿ ಇಂದಿಗೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ದೇಶಾದ್ಯಂತ ಕರಾಳ ದಿನ ಆಚರಣೆ ಮಾಡಲು ಮುಂದಾಗಿದೆ. ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ದೇಶದಾದ್ಯಂತ ಸಾವನ್ನಪ್ಪಿದ 150ಕ್ಕೂ ಹೆಚ್ಚು ಜನರಿಗೆ ಮೊಂಬತ್ತಿ ಬೆಳಗಿ ನಮನ ಸಲ್ಲಿಸಲಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಯಲಿದೆ ಅಂತಾ ಕಾಂಗ್ರೆಸ್ ಮೂಲಗಳು ತಿಳಿಸಿವೆ.

ನೋಟ್ ಬ್ಯಾನ್ ವರ್ಷಾಚರಣೆ ಹಿನ್ನೆಲೆಯಲ್ಲಿ ದೆಹಲಿ ಪ್ರದೇಶ ಕಾಂಗ್ರೆಸ್ ಮತ್ತು ಎಐಸಿಸಿ ನೇತೃತ್ವದಲ್ಲಿ ಹಲವೆಡೆ ಪ್ರತಿಭಟನೆ ನಡೆಯಲಿದೆ. ದೆಹಲಿ ಪ್ರದೇಶ ಕಾಂಗ್ರೆಸ್ ವತಿಯಿಂದ ಆರ್‍ಬಿಐ ಮುಂಭಾಗ ಪ್ರತಿಭಟನೆ ಹಾಗೂ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.

https://www.youtube.com/watch?v=R5Cc-PrwTBU

https://www.youtube.com/watch?v=vBwvhMHsHMY

500 2000

vlcsnap 2017 11 08 07h13m52s112

vlcsnap 2017 11 08 07h13m47s62

Share This Article
Leave a Comment

Leave a Reply

Your email address will not be published. Required fields are marked *