ನಾನು ಹೊರಗೆ ಒರಟ, ಆದ್ರೆ ಒಳಗೆ ಮೃದು: ಸಿಎಂ

Public TV
1 Min Read
mys cm 2

– ವೇದಿಕೆಯಲ್ಲಿದ್ದ ಪ್ರತಾಪ್ ಸಿಂಹಗೂ ತಮಾಷೆ ಮಾಡಿದ್ರು ಸಿದ್ದರಾಮಯ್ಯ

ಮೈಸೂರು: ರಾಜಕೀಯ ವಿಚಾರ ಹಾಗೂ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಹೊರಗೆ ಒರಟ, ಒಳಗೆ ಮೃದು. ಆದರೆ ಕವಿ ನಿಸಾರ್ ಅಹಮದ್ ಅವರು ಹೊರಗೂ ಮೃದು ಒಳಗೂ ಮೃದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದಸರಾ ಹಬ್ಬ ತುಂಬಾ ವೈಶಿಷ್ಟ್ಯತೆಯಿಂದ ಕೂಡಿದ್ದು, ಹಲವು ವಿಚಾರಗಳನ್ನು ಅಡಗಿಸಿಕೊಂಡಿದೆ. ದಸರಾ ವಿಶ್ವವಿಖ್ಯಾತಿ ಪಡೆದಿರುವುದು ನಮ್ಮ ದೇಶದ ಸಂಸ್ಕೃತಿಗೆ ಹಿಡಿದ ಕನ್ನಡಿ. ದಸರಾ ನೋಡಲು ದೇಶ ವಿದೇಶದಿಂದ ಪ್ರವಾಸಿಗರು ಬಂದು ಜಂಬೂಸವಾರಿಯನ್ನ ಕಣ್ತುಂಬಿಕೊಂಡು ಹಾಡಿ ಹೊಗಳುತ್ತಾರೆ ಅಂತ ಹೇಳಿದ್ರು.

mys cm 1

ನಾನೂ ಕೂಡ ಮೈಸೂರಿನವನು. ಚಿಕ್ಕವನಿದ್ದಾಗ ನನ್ನ ತಂದೆ ಹೆಗಲ ಮೇಲೆ ಕೂರಿಸಿಕೊಂಡು ನನಗೆ ದಸರಾ ತೋರಿಸಿದ್ದರು. ತಾಯಿಯ ಮಹಿಮೆ ಎಂತಹದು ಎಂದರೆ ಅಂದು ದಸರಾ ವೀಕ್ಷಣೆ ಮಾಡಿದ್ದೆ. ಆದರೆ ಈಗ ನಾನೇ ದಸರಾ ನಡೆಸಿದ್ದೇನೆ. ಅಲ್ಲದೇ ತಾಯಿ ಚಾಮುಂಡಿ ಕೃಪೆಯಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದು ಸಂತಸದ ವಿಚಾರ ಎಂದರು.

ಮುಂದಿನ ದಸರಾ ನಮ್ದೆ: ದಸರಾ ಕಾರ್ಯಕ್ರಮದಲ್ಲಿ ಮುಂದಿನ ದಸರಾ ಆಚರಣೆ ಬಗ್ಗೆ ವಿಚಾರ ಪ್ರಸ್ತಾಪ ನಡೆಯಿತು. ಈ ಐದು ವರ್ಷ ನಾನೇ ದಸರಾ ನಡೆಸಿದ್ದು, ಮುಂದಿನ ಐದು ವರ್ಷ ದಸರಾ ಉತ್ಸವವನ್ನು ನಾನೇ ನಡೆಸುತ್ತೇನೆ. ಹಿರಿಯ ನಾಯಕರಾದ ಜಿ.ಟಿ.ದೇವೇಗೌಡರೂ ಸಹ ನನಗೆ ವಿಶ್ ಮಾಡಿದ್ದಾರೆ. ಮುಂದಿನ ಐದು ವರ್ಷ ನಾನೇ ಉತ್ಸವ ಆಚರಣೆ ನಡೆಸುವಂತೆ ನೀನೂ ಕೂಡ ವಿಶ್ ಮಾಡಿಬಿಡು ಎಂದು ವೇದಿಕೆಯಲ್ಲಿದ್ದ ಸಂಸದ ಪ್ರತಾಪ್ ಸಿಂಹಗೆ ತಮಾಷೆ ಮಾಡಿದರು.

pratap simha dasara 2 1

dasara 1

Share This Article