ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ, ನನಗೆ ಸ್ಥಾನ ಸಿಗಲೇಬೇಕು: ಭೀಮಾ ನಾಯ್ಕ್

Public TV
1 Min Read
vlcsnap 2219 03 27 21h17m57s983

ಬಳ್ಳಾರಿ: ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ. ನನಗೂ ಸಹ ಸಚಿವ ಸ್ಥಾನ ಸಿಗಲೇ ಬೇಕು ಎಂದು ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಎಸ್ ಭೀಮಾ ನಾಯ್ಕ್ ಹೇಳಿದ್ದಾರೆ.

ಸಚಿವ ಸ್ಥಾನ ತಪ್ಪಿದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಭೀಮಾ ನಾಯ್ಕ್ ಹೊಸಪೇಟೆಯ ತಮ್ಮ ನಿವಾಸದಲ್ಲಿ ಬೆಂಬಲಿಗರು, ಕಾರ್ಯಕರ್ತರು, ಹಾಗೂ ಪಕ್ಷದ ಮುಖಂಡರ ಜೊತೆ ಸಭೆ ನಡೆಸಿದರು.

ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಳ್ಳಾರಿಯಿಂದ 6 ಜನ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದೇವೆ. ಬಂಜಾರಾ ಕೋಟಾದಡಿ ನನಗೂ ಸಚಿವ ಸ್ಥಾನ ನೀಡಲೇಬೇಕು. ನಾನೂ ಸಹ ಸಚಿವ ಸ್ಥಾನ ಆಕ್ಷಾಂಕಿಯಾಗಿರುವೆ. ನಾನೂ ಸಹ ಅತೃಪ್ತ ಶಾಸಕನಾಗಿದ್ದೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ನನಗೆ ಸಚಿವ ಸ್ಥಾನ ನೀಡಲು ಒಪ್ಪಿಗೆ ನೀಡಿದ್ದಾರೆ. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಬೇಕಿದೆ ಎಂದರು.

ಕಡೆಗಣಿಸಿದ್ದಕ್ಕೆ ಬೇಸರ:
ಬಳ್ಳಾರಿ ಅತಿ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಟ್ಟ ಜಿಲ್ಲೆಯಾಗಿದೆ. ಆರು ಜನ ಇಲ್ಲಿಂದ ಆಯ್ಕೆಯಾಗಿದ್ರೂ ನಮ್ಮನ್ನ ಕಡೆಗಣಿಸಿದ್ದು ತುಂಬಾ ಬೇಸರ ತಂದಿದೆ. ನಾನು ಬಳ್ಳಾರಿಯಲ್ಲಿ ಹಿರಿಯ ಶಾಸಕ. ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ಬಣದಲ್ಲಿ ಸೇರಿಕೊಂಡಿಲ್ಲ. ಎಂ ಬಿ ಪಾಟೀಲ್ ಬಣದಲ್ಲಿ ಸೇರಿಕೊಂಡಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಏಕಾಂಗಿಯಾಗಿಯೇ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡ್ ಗೆ ಕೇಳಿಕೊಳ್ಳುತ್ತೇನೆ ಎಂದು ಪರಮೇಶ್ವರ ನಾಯ್ಕ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *