Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹಸಿವಿನ ಬಗ್ಗೆ ನಿಮಗೆಷ್ಟು ಗೊತ್ತು? – ನೀವು ನಿಜವಾಗಿಯೂ ಹಸಿದಿದ್ದೀರಾ or ಇಲ್ಲವಾ?; ತಜ್ಞರು ಏನು ಹೇಳ್ತಾರೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Health | ಹಸಿವಿನ ಬಗ್ಗೆ ನಿಮಗೆಷ್ಟು ಗೊತ್ತು? – ನೀವು ನಿಜವಾಗಿಯೂ ಹಸಿದಿದ್ದೀರಾ or ಇಲ್ಲವಾ?; ತಜ್ಞರು ಏನು ಹೇಳ್ತಾರೆ?

Health

ಹಸಿವಿನ ಬಗ್ಗೆ ನಿಮಗೆಷ್ಟು ಗೊತ್ತು? – ನೀವು ನಿಜವಾಗಿಯೂ ಹಸಿದಿದ್ದೀರಾ or ಇಲ್ಲವಾ?; ತಜ್ಞರು ಏನು ಹೇಳ್ತಾರೆ?

Public TV
Last updated: May 8, 2024 1:34 pm
Public TV
Share
3 Min Read
hungry
SHARE

ಹಸಿವು (Hungry) ಯಾರ ಅನುಭವಕ್ಕೆ ಬಾರದೇ ಇದೆ ಹೇಳಿ? ಈ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಸಕಲ ಜೀವರಾಶಿಗೂ ಹಸಿವು ಎನ್ನುವುದ ಇದ್ದೇ ಇರುತ್ತದೆ. ಮನುಷ್ಯ ಬುದ್ದಿಜೀವಿ. ತನಗೆ ಹಸಿವಾದಾಗ ಬಾಯಿ ಬಿಟ್ಟು ಹೇಳಿಕೊಳ್ಳುತ್ತಾನೆ. ಆದರೆ ಇತರೆ ಜೀವಿಗಳಿಗೆ ಹಸಿವಾದರೂ ಅದನ್ನು ಹೇಳಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಒಂದು ಮತ್ತೊಂದನ್ನು ಅವಲಂಬಿಸಿ, ಬೇಟೆಯಾಡಿ ತಿಂದು ಹಸಿವನ್ನು ನೀಗಿಸಿಕೊಳ್ಳುತ್ತವೆ.

ಋತುಚಕ್ರ ಬದಲಾವಣೆಯೊಂದಿಗೆ ಜಗತ್ತು ಕ್ರಿಯಾಶೀಲವಾಗಿದೆ. ಮನುಷ್ಯನ ಅಸ್ತಿತ್ವಕ್ಕೆ ಜೀವನಚಕ್ರ ಆಕಾರ. ಅಂತೆಯೇ ಮಾನವ ದೇಹದ ಬೆಳವಣಿಗೆಯಲ್ಲಿ ಜೀರ್ಣಕ್ರಿಯೆ ಆಧಾರ. ಮಾನವನಿಗೆ ಹಸಿವಾಗಲು ಜೀರ್ಣಕ್ರಿಯೆಯೇ ಪ್ರಮುಖ ಕಾರಣ. ಇದನ್ನೂ ಓದಿ: PublicTV Explainer: ಬೆಂಗಳೂರಿನ ಕುದುರೆಗಳಲ್ಲಿ ಗ್ಲ್ಯಾಂಡರ್ಸ್‌ ರೋಗ; ಏನಿದು ಮಾರಕ ಕಾಯಿಲೆ – ಮನುಷ್ಯರಿಗೂ ಹರಡುತ್ತಾ?

DIET FOOD

ಹಸಿವು ಕೇವಲ ಹೊಟ್ಟೆಗೆ ಸೀಮಿತವಾದದ್ದು ಎಂದು ಕೆಲವರು ತಪ್ಪಾಗಿ ಭಾವಿಸುತ್ತಾರೆ. ಹೊಟ್ಟೆ ಹಸಿದಾಗ ಊಟ ಮಾಡಬೇಕು ಎಂದಷ್ಟೇ ಯೋಚಿಸುವವರೂ ಇದ್ದಾರೆ. ಹಸಿವಿನ ಸಂಕೇತ ಹೊಟ್ಟಿಯಿಂದಷ್ಟೇ ವ್ಯಕ್ತವಾಗುತ್ತದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು ಕಲ್ಪನೆ. ಹಸಿವು ಅನ್ನೋದು ಸಂಕೀರ್ಣ ವಿಷಯ. ಅದು ಇಡೀ ದೇಹಕ್ಕೆ ಸಂಬಂಧಿದ್ದು. ಅಷ್ಟೇ ಅಲ್ಲ, ಹಸಿವಿಗೂ ಮನುಷ್ಯನ ಆರೋಗ್ಯಕರ ಮಾನಸಿಕತೆ ಮತ್ತು ಭಾವನೆಗಳಿಗೂ ಸಂಬಂಧಿಸಿದ್ದಾಗಿದೆ. ನೀವು ನಿಜವಾಗಿಯೂ ಹಸಿದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಇದು ದೈಹಿಕ ಸೂಚನೆಗಳು, ಭಾವನಾತ್ಮಕ ಸ್ಥಿತಿಗಳು ಮತ್ತು ಅಭ್ಯಾಸದ ನಡವಳಿಕೆಗಳ ಸೂಕ್ಷ್ಮ ಸಮತೋಲನವನ್ನು ಒಳಗೊಂಡಿರುತ್ತದೆ.

ಹಸಿವು ಹೇಗಾಗುತ್ತೆ?
ನಾವು ತಿಂಡಿ ಅಥವಾ ಊಟ ಸೇವಿಸಿದಾಗ ಹೊಟ್ಟೆಯೊಳಗಡೆ ಒಂದು ಪ್ರಕ್ರಿಯೆ ನಡೆಯುತ್ತದೆ. ಹಿಂದಿನ ಊಟದ ಜೀರ್ಣಕ್ರಿಯೆಯು ಸಂಪೂರ್ಣವಾಗಿ ಮುಗಿದಾಗ, ಹೊಟ್ಟೆಯೊಳಗೆ ಆಹಾರದ ಮಂಥನವಾಗುತ್ತದೆ. ದೇಹದ ಜೀವಕೋಶಗಳು ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳುವ ಕೆಲಸ ಮಾಡುತ್ತವೆ. ವೇಸ್ಟ್ ಎನ್ನುವಂತಹದ್ದನ್ನು ಹೊರಕ್ಕೆ ತಳ್ಳಲಾಗುತ್ತದೆ. ಈ ಕೆಲಸ ಮುಗಿದಂತೆಯೇ ಅಂಗಗಳಿಗೆ ವಿಶ್ರಾಂತಿ ಬೇಕಾಗುತ್ತದೆ. ಹೊಟ್ಟೆಯ ಚೀಲವು ಎಲ್ಲವನ್ನೂ ಸಂಪೂರ್ಣವಾಗಿ ತೆರವುಗೊಳಿಸಿದ ನಂತರ ಹಸಿವುಂಟಾಗುತ್ತದೆ.

Food 2

ದೇಹದಲ್ಲಿ ಹಸಿವಾದಾಗ ಮನಸ್ಸು ಅದನ್ನು ಅರ್ಥೈಸಿಕೊಳ್ಳುತ್ತದೆ. ಆಹಾರ ಬೇಕೆಂಬ ಸೂಚನೆ ಬುದ್ಧಿಗೆ ರವಾನೆಯಾಗುತ್ತದೆ. ದೇಹದ ದೀರ್ಘಾಯುಷ್ಯ, ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಮತ್ತು ಮನಸ್ಸು ಚೈತನ್ಯದಿಂದ ಕೂಡಿರಲು ಆಹಾರ ಅತ್ಯವಶ್ಯಕ. ಹಸಿವಾದಾಗ ಮಾತ್ರ ನಾವು ಆಹಾರ ಸರಿಯಾದ ಪ್ರಮಾಣದಲ್ಲಿ ಸೇವಿಸಬಹುದು. ಇದನ್ನೂ ಓದಿ: ತೀವ್ರವಾಗಿರುವ ಬಿಸಿಲಿನಿಂದ ನಿಮ್ಮನ್ನು ನೀವು ಹೀಗೆ ರಕ್ಷಿಸಿಕೊಳ್ಳಿ

ಹಸಿವಾದಾಗ ತಿನ್ನುವುದು ಎಷ್ಟು ಉತ್ತಮ?
ತಿನ್ನುವುದನ್ನೇ ಹೆಚ್ಚು ಹವ್ಯಾಸ ಮಾಡಿಕೊಂಡವರು ಬೇಸರದಲ್ಲಿದ್ದಾಗ, ಕೆಲಸದ ಒತ್ತಡದಲ್ಲಿ ಬ್ರೇಕ್ ತೆಗೆದುಕೊಳ್ಳಲು.. ಹೀಗೆ ಯಾವಾಗ ಬೇಕೆಂದರಾವಾಗ ಏನನ್ನಾದರು ತಿನ್ನುತ್ತಿರುತ್ತಾರೆ. ಇದು ದೇಹದ ಆರೋಗ್ಯಕ್ಕೆ ಪೂರಕವಾಗಲ್ಲ. ಬದಲಾಗಿ ಮಾರಕವಾಗುತ್ತದೆ. ಹಸಿವಾದಾಗ ತಿನ್ನುವುದು ದೇಹಕ್ಕೆ ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ.

angry 1

ಹಸಿವಿನ ಸಾಮಾನ್ಯ ಸೂಚನೆಗಳೇನು?
* ದೇಹದಲ್ಲಿ ಪೋಷಕಾಂಶದಂತಹ ನಿಕ್ಷೇಪಗಳು ಖಾಲಿಯಾದಾಗ, ದೇಹ ದುರ್ಬಲಗೊಂಡಂತೆ ಭಾಸವಾಗುತ್ತದೆ. ಶಕ್ತಿ ಕುಂದುತ್ತದೆ. ಆಯಾಸದ ಭಾವನೆಗೆ ಕಾರಣವಾಗುತ್ತದೆ.
* ಖಾಲಿ ಡಬ್ಬ ಸದ್ದು ಮಾಡುತ್ತದೆ. ಹಾಗೆಯೇ ಹಸಿವಾದಾಗ ಹೊಟ್ಟೆ ಸದ್ದು ಮಾಡುತ್ತದೆ.
* ದೇಹದ ಆರೋಗ್ಯಕ್ಕೆ ಸಾತ್ವಿಕ, ಶುದ್ಧ ಆಹಾರ ತುಂಬಾ ಅವಶ್ಯಕ. ಇಂತಹ ಆಹಾರ ಸೇವನೆಯಿಂದ ಸಾಮಾನ್ಯವಾಗಿ 4 ಗಂಟೆ ಅವಧಿಯಲ್ಲಿ ಹಸಿವು ಪ್ರಾರಂಭವಾಗುತ್ತದೆ.

ನೀವು ನಿಜವಾಗಿಯೂ ಹಸಿದಿದ್ದೀರಾ?
ಮೇಲೆ ತಿಳಿದಿದ್ದು ಸಾಮಾನ್ಯ ಹಸಿವಿನ ಸೂಚನೆಗಳಷ್ಟೆ. ಆದರೆ ನಿಜವಾಗಿಯೂ ಹಸಿವಾಗುವಿಕೆ ಬಗ್ಗೆ ಕೆಲವೊಂದು ಅಚ್ಚರಿಯ ಅಧ್ಯಯನದ ಅಂಶಗಳನ್ನು ತಜ್ಞರು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಮಗು ಆರೋಗ್ಯವಾಗಿ, ಫಿಟ್ ಆಗಿರಲು ಗರ್ಭಿಣಿಯರು ಈ ಆಹಾರಗಳನ್ನು ಸೇವಿಸಿ

DRINKING WATER

ಬಾಯಾರಿಕೆ
ಕೆಲವೊಮ್ಮೆ ಕೇವಲ ಬಾಯಾರಿಕೆಯಿಂದ ನಿಜವಾಗಿಯೂ ಹಸಿವಾಗಿದೆ ಎಂದು ಭಾವಿಸಿ ಕೆಲವರು ಆಹಾರ ಸೇವಿಸಲು ಮುಂದಾಗುತ್ತಾರೆ. ಅಂತಹ ಸನ್ನಿವೇಶದಲ್ಲಿ ಆಹಾರ ತಿನ್ನುವ ಮೊದಲು ಒಂದು ಲೋಟ ನೀರು ಕುಡಿಯಬೇಕು. ಬಾಯಾರಿಕೆ ನೀಗಲು ಕೆಲ ನಿಮಿಷ ತೆಗೆದುಕೊಳ್ಳುತ್ತದೆ.

ಬಾಯಲ್ಲಿ ಹೆಚ್ಚು ನೀರೂರುವುದು
ದೇಹಕ್ಕೆ ತುಂಬಾ ಆಯಾಸವಾಗಿ ಹಸಿವು ಉತ್ತುಂಗಕ್ಕೇರಿದಾಗ ಬಾಯಲ್ಲಿ ಜೊಲ್ಲು ಹೆಚ್ಚಾಗಿ ಆವರಿಸಲು ಪ್ರಾರಂಭವಾಗುತ್ತದೆ. ಅದು ಹೊಟ್ಟೆಯನ್ನು ಸೇರುತ್ತದೆ. ಇದು ಕೂಡ ಹಸಿವಿನ ಒಂದು ಸೂಚನೆ. ಇದನ್ನೂ ಓದಿ: ಎಲೆಗಳು ಮಾತ್ರವಲ್ಲದೆ ತುಳಸಿ ಬೀಜಗಳೂ ಆರೋಗ್ಯಕ್ಕೆ ಒಳ್ಳೆಯದು!

headache

ತಲೆನೋವು
ಎಷ್ಟೋ ಜನ ಹೆಚ್ಚು ಒತ್ತಡ ಆದಾಗ ತಲೆನೋವು ಬರುತ್ತದೆ ಎಂದು ಭಾವಿಸುತ್ತಾರೆ. ಆದರೆ ಕೆಲವೊಮ್ಮೆ ತುಂಬಾ ಹಸಿವಾದಾಗಲೂ ತಲೆನೋವು ಬರುತ್ತದೆ. ಅಂತಹವರಿಗೆ ಆಹಾರ ಸೇವಿಸಿದಾಗ ತಲೆನೋವು ಕಡಿಮೆಯಾಗುತ್ತದೆ.

ಸಿಟ್ಟು
ಸಿಟ್ಟಾದವರನ್ನು ಕಂಡಾಗ, ಯಾರೋ ಕಿಚಾಯಿಸಿರಬಹುದು ಅಥವಾ ಬೇಸರವಾಗುವಂತೆ ನಡೆದುಕೊಂಡಿರಬಹುದು ಎಂದುಕೊಳ್ಳುವವರೇ ಹೆಚ್ಚು. ಆದರೆ ತೀವ್ರತರ ಹಸಿವು ಸಹ ಸಿಟ್ಟಿಗೆ ಕಾರಣವಾಗಬಹುದು ಎಂಬುದನ್ನು ಗಮನದಲ್ಲಿಡಿ. ಹಸಿವು ತಾಳ್ಮೆಯನ್ನು ಕೆಡಿಸುತ್ತದೆ. ಆಗ ಸಣ್ಣಪುಟ್ಟ ವಿಚಾರಗಳಿಗೂ ವ್ಯಕ್ತಿ ಸಿಟ್ಟಾಗಲು ಕಾರಣವಾಗುತ್ತದೆ.

TAGGED:healthHungryಆರೋಗ್ಯಹಸಿವು
Share This Article
Facebook Whatsapp Whatsapp Telegram

Cinema news

CM Nandini
ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು
Bengaluru City Cinema Crime Latest Main Post TV Shows
Raj B Shetty 1
ರಾಜ್ ಬಿ ಶೆಟ್ಟಿ ನಟನೆಯ ರಕ್ಕಸಪುರದೊಳ್ ರಿಲೀಸ್ ಡೇಟ್ ಫಿಕ್ಸ್
Cinema Latest Sandalwood Top Stories
K POP Kannada Movie
ಕೊರಿಯನ್ ಪಾಪ್ ಸಂಸ್ಕೃತಿ ಬಿಂಬಿಸುವ ಕನ್ನಡದ ʻಕೆ-ಪಾಪ್ʼ
Cinema Latest Sandalwood
Prabhas
ಸಂಕ್ರಾಂತಿ ಹಬ್ಬಕ್ಕೆ ʻದಿ ರಾಜಾ ಸಾಬ್ʼ ಅಬ್ಬರ; ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮಿಂಚಿದ ರೆಬೆಲ್ ಸ್ಟಾರ್ ಪ್ರಭಾಸ್
Cinema Latest South cinema

You Might Also Like

bengaluru drugs
Bengaluru City

ಬೆಂಗ್ಳೂರಿನ ಮೂರು ಕಡೆ ಮಾದಕ ವಸ್ತು ಫ್ಯಾಕ್ಟರಿ ಪತ್ತೆ ಕೇಸ್ – ಮೂವರು ಪೊಲೀಸ್ ಇನ್ಸ್‌ಪೆಕ್ಟರ್‌ ಸಸ್ಪೆಂಡ್

Public TV
By Public TV
51 minutes ago
TB Dam Janardhana Reddy 2
Bellary

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಅಳವಡಿಕೆ ಪರಿಶೀಲಿಸಿದ ಜನಾರ್ದನ ರೆಡ್ಡಿ

Public TV
By Public TV
58 minutes ago
siddaramaiah 1 3
Bengaluru City

Kogilu layout Demolition | ಅರ್ಹರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ತೀರ್ಮಾನ: ಸಿದ್ದರಾಮಯ್ಯ

Public TV
By Public TV
1 hour ago
NAMMA METRO 4
Bengaluru City

ನ್ಯೂ ಇಯರ್‌ಗೆ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಡಿ.31ರಂದು ಮೂರು ಮಾರ್ಗದಲ್ಲಿ ಸೇವಾ ಸಮಯ ವಿಸ್ತರಣೆ

Public TV
By Public TV
2 hours ago
AragaJnanendra
Districts

ಯುವಕರನ್ನು ಸರಿ ದಾರಿಗೆ ತರುವ ಹೊಣೆ ರಾಜ್ಯ ಸರ್ಕಾರಕ್ಕೆ ಇದ್ದಂತಿಲ್ಲ: ಆರಗ ಕಿಡಿ

Public TV
By Public TV
2 hours ago
HD Revanna
Bengaluru City

ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಿಗ್‌ ರಿಲೀಫ್‌; ಹೆಚ್‌.ಡಿ ರೇವಣ್ಣ ವಿರುದ್ಧದ ಪ್ರಕರಣ ಕೈಬಿಟ್ಟ ಕೋರ್ಟ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?