Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ವರ್ಷದ ಮೊದಲ ಚಂದ್ರಗ್ರಹಣ ದರ್ಶನ- ಮಧ್ಯರಾತ್ರಿವರೆಗೂ ನಭದಲ್ಲಿ ಕೇತುಗ್ರಸ್ತನ ಕೌತುಕ

Public TV
Last updated: August 8, 2017 8:46 am
Public TV
Share
3 Min Read
TOTAL
SHARE

ಬೆಂಗಳೂರು: ವರ್ಷದ ಮೊದಲ ಚಂದ್ರಗ್ರಹಣಕ್ಕೆ ವಿಶ್ವವೇ ಸಾಕ್ಷಿಯಾಗಿದೆ. ಸುಮಾರು 2 ಗಂಟೆಗಳವರೆಗೆ ಚಂದ್ರಗ್ರಹಣನಿಗೆ ಕೇತುಗ್ರಸ್ತ ಚಂದ್ರಗ್ರಹಣವಾಗಿತ್ತು. ರಾತ್ರಿ 10.52ಕ್ಕೆ ಆರಂಭವಾದ ಗ್ರಹಣ ರಾತ್ರಿ 12.48ಕ್ಕೆ ಕೊನೆಯಾಯಿತು.

ಸೋಮವಾರ ಹುಣ್ಣಿಮೆ. ಹುಣ್ಣಿಮೆ ದಿನದಂದು ಬಾನಿನಲ್ಲಿ ಹೊಳೆದು ರಾತ್ರಿ ಕಳೆದು ಬೆಳಕು ನೀಡಬೇಕಿದ್ದ ಚಂದಿರ ಎರಡು ತಾಸು ಕರಿ ಚೆಂಡಿನಂತಾಗಿದ್ದ. ಸೂರ್ಯ-ಚಂದ್ರನ ನಡುವೆ ಭೂಮಿ ಬಂದ ಕಾರಣ ಕೆಲ ಹೊತ್ತು ಚಂದಿರ ತನ್ನ ಪ್ರಭೆಯನ್ನೇ ಕಳೆದುಕೊಂಡು ಕತ್ತಲಲ್ಲಿ ಮರೆಯಾಗಿದ್ದ. ಭಾರತೀಯ ಸಂಪ್ರದಾಯದಲ್ಲಿ ಚಂದ್ರಗ್ರಹಣಕ್ಕೆ ಸಾಕಷ್ಟು ಮಹತ್ವವವಿದೆ.

ಧಾರ್ಮಿಕ ದೃಷ್ಟಿಕೋನದಲ್ಲಿ ನೋಡೋದಾದ್ರೆ, ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಹುಣ್ಣಿಮೆ ದಿನವಾದ ನಿನ್ನೆ ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸಿದೆ. ಈ ಹೊತ್ತಲ್ಲಿ ಉಪವಾಸ ಆಚರಣೆ ಮಾಡಲಾಯಿತು. ಹಲವಾರು ಕಡೆಗಳಲ್ಲಿ ದೇವರ ದರ್ಶನ ಇರಲಿಲ್ಲ. ಇತ್ತ ವೈಜ್ಞಾನಿಕ ಲೋಕಕ್ಕೂ ಇದು ಕೌತುಕ ಕ್ಷಣವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನೆಹರು ತಾರಾಲಯ ಸೇರಿದಂತೆ ಹಲವಾರು ಕಡೆಗಳಲ್ಲಿ ದೂರದರ್ಶಕದ ಮೂಲಕ ಚಂದಿರನನ್ನು ವೀಕ್ಷಿಸಿ ಸಂಭ್ರಮಪಟ್ಟರು.

BNG

ಬೆಂಗಳೂರಿನ ವಿಶೇಷ ಪ್ರಸಿದ್ಧ ಕಾಡುಮಲ್ಲೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ ನಡೆದಿದೆ. ಈಶ್ವರನಿಗೆ ಪ್ರಿಯವಾದ ಬಿಲ್ವಪತ್ರೆ, ಹಾಲಿನ ಅಭಿಷೇಕ ಮಾಡಲಾಯ್ತು. ಇನ್ನು ನರಸಿಂಹಸ್ವಾಮಿ ದೇವಸ್ಥಾನದಲ್ಲೂ ವಿಶೇಷ ಹೋಮ-ಹವನ ನಡೆದಿದೆ. ಮಂಗಳೂರಲ್ಲಿ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೀತು. ದೇವಿಯ ಸ್ವಯಂ ಭೂಲಿಂಗಕ್ಕೆ ವಿಶೇಷ ಅರ್ಚನೆ ಮಾಡಲಾಯಿತು.

ಅರಮನೆ ನಗರಿ ಮೈಸೂರಲ್ಲೂ ಚಂದ್ರಗ್ರಹಣ ದರ್ಶನ ಪಡೆದ್ರು. ಗ್ರಹಣದ ಹೊತ್ತಲ್ಲಿ ಸಾಂಸ್ಕøತಿಕ ನಗರಿಯ ದೇವಸ್ಥಾನಗಳಲ್ಲಿ ಪೂಜೆಗಳು ನಡೆದಿದ್ದು ವಿಶೇಷವಾಗಿತ್ತು. ಅಮೃತೇಶ್ವರ ದೇವಾಲಯದಲ್ಲಿ ಗ್ರಹಣ ಶಾಂತಿ ನಡೀತು. ದೇವರಾಜ ಮೊಹಲ್ಲಾದಲ್ಲಿರುವ ಸತ್ಯನಾರಾಯಣ ದೇವರ ಸನ್ನಿಧಿಯಲ್ಲಿ ಇವತ್ತು ಬೆಳಗ್ಗೆ 9 ಗಂಟೆಗೆ ಗೃಹತ್ ಶಾಂತಿ ಹೋಮ ನಡೆಯಲಿದೆ. ಇದರಲ್ಲಿ ಎರಡು ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಲಿದ್ದಾರೆ.

BLY

ಬಳ್ಳಾರಿಯಲ್ಲಿರುವ ಪ್ರಸಿದ್ಧ ಕನಕದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರೆವೇರಿತು. ನಸುಕಿನ ಜಾವ 4.30ರಿಂದಲೇ ಕನಕದುರ್ಗಮ್ಮನ ವಿಶೇಷ ಅರ್ಚನೆ ಅರ್ಪಿಸಲಾಯಿತು. ಚಂದ್ರಗ್ರಹಣದ ಬಳಿಕ ನಡೆದ ಮೊದಲ ಪೂಜೆಯಲ್ಲಿ ಭಾಗಿಯಾದ ನೂರಾರು ಭಕ್ತರು ಪುನೀತರಾದರು.

ಇನ್ನು ರಾಯಚೂರಿನಲ್ಲಿರುವ ಗುರುರಾಘವೇಂದ್ರಸ್ವಾಮಿಗಳ ಮಂತ್ರಾಲಯದ ಮಠದಲ್ಲೂ ಪೂಜೆ ಪುನಸ್ಕಾರ ಜೋರಾಗಿದೆ. ಬೆಳಗ್ಗೆಯೇ ದೇಗುಲವನ್ನು ಶುಚಿಗೊಳಿಸಲಾಯ್ತು. ನಂತರ ವಿಶೇಷ ಪೂಜೆ ಆರಂಭವಾಗಿದೆ. ಆಗಸ್ಟ್ 12ರವರೆಗೆ ನಡೆಯಲಿರುವ ಆರಾಧನ ಮಹೋತ್ಸವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿರುವ ಭಕ್ತರು ಉರುಳು ಸೇವೆ ಭಕ್ತಿಯನ್ನು ಅರ್ಪಿಸಿದರು.

ಇನ್ನು ಗೋಕರ್ಣದ ಮಹಾಬಲೇಶ್ವರ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನವಧಾನ್ಯ ಅಭಿಷೇಕ, ಪಂಚಾಮೃತ ಅಭಿಷೇಕ, ನಾಗಾಭರಣ ಪೂಜೆ ನಡೀತು. ಖಂಡಾಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಸಾವಿರಾರು ಭಕ್ತರು ಕಾವೇರಿಯಲ್ಲಿ ತೀರ್ಥಸ್ನಾನ ಮಾಡಿದ್ರು. ಶ್ರೀರಂಗಪಟ್ಟಣದ ಘೋಸಾಯಿ ಘಟ್ಟದ ಕಾವೇರಿ ನದಿ ದಂಡೆಯಲ್ಲಿ ರಾತ್ರಿ 11 ಗಂಟೆಗೆ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ವಿಶೇಷ ಪೂಜೆ ನಡೀತು. ಗ್ರಹಣ ಬಿಟ್ಟ ಬಳಿಕ ಶಾಂತಿ ಹೋಮ ನಡೀತು.

MNG

ಇತ್ತ ಚಿನ್ನದ ನಾಡು ಕೋಲಾರದಲ್ಲಿರುವ ಗಂಗಮ್ಮ ದೇವಸ್ಥಾನದಲ್ಲೂ ಬೆಳಗ್ಗೆಯಿಂದಲೇ ಹೋಮ-ಹವನ ನಡೆಯುತ್ತಿದೆ. ಚಂದ್ರಗ್ರಹಣ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗ್ತಿದೆ. ಯಾದಗಿರಿಯಲ್ಲಿ ಹಳೇ ಕಾಲದ ಪದ್ಧತಿಯಂತೆ ಚಂದ್ರಗ್ರಹಣ ವೀಕ್ಷಿಸಿದ್ದು ವಿಶೇಷವಾಗಿತ್ತು. ತಟ್ಟೆಯಲ್ಲಿ ನೀರು ಹಾಕಿ ಅದರಲ್ಲಿ ಒಣಕೆ ನಿಲ್ಲಿಸಿದಾಗ ಒಣಕೆ ನೇರವಾಗಿ ನಿಂತ್ರೆ ಚಂದ್ರಗ್ರಹಣ ಪ್ರಾರಂಭವಾಗಿದೆ. ಒಣಕೆ ನೆಲಕ್ಕೆ ಬಿದ್ರೆ ಗ್ರಹಣ ಬಿಟ್ಟಿದೆ ಅನ್ನೋದು ಹಳೇ ಕಾಲದ ವಿಧಿ ವಿಧಾನ. ಇದೇ ಪದ್ಧತಿಯಲ್ಲಿ ಯಾದಗಿರಿ ನಗರದಲ್ಲಿ ಗ್ರಹಣ ವೀಕ್ಷಿಸಲಾಯಿತು.

ಹಾಸನದಲ್ಲಿ ಗ್ರಹಣ ನಿಮಿತ್ತ ಹಾಸನಾಂಬ ರಸ್ತೆಯ ಪ್ರಸನ್ನ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನಡೀತು. ನವಗ್ರಹ ಜಪ, ಸೂರ್ಯಚಂದ್ರ ಮೃತ್ಯುಂಜಯ ಮಂತ್ರ ಪಠಿಸಿ ಮಧ್ಯರಾತ್ರಿವರೆಗೂ ಪ್ರಾರ್ಥಿಸಲಾಯ್ತು. ಖಂಡಗ್ರಾಸ ಚಂದ್ರಗ್ರಹಣ ಪ್ರಯುಕ್ತ ಹೊರನಾಡಿನ ಅನ್ನಪೂರ್ಣೇಶ್ವರಿ ಮತ್ತು ಶೃಂಗೇರಿ ದೇವಾಲಯಕ್ಕೆ ರಾತ್ರಿ 9 ಗಂಟೆಗೆ ಬಾಗಿಲು ಹಾಕಲಾಯ್ತು. ಗ್ರಹಣ ಆರಂಭವಾಗಿ ಮುಗಿಯುವ ಹೊತ್ತಿಗೆ ದೇವಸ್ಥಾನದ ದ್ವಾರಗಳನ್ನು ಆಧಿಶಕ್ತಿ ಅನ್ನಪೂರ್ಣೇಶ್ವರಿ ಮತ್ತು ಶಾರದಾಂಬೆಗೆ ವಿಶೇಷ ಪೂಜೆ ನೆರವೇರಿಸಲಾಯ್ತು. ಗ್ರಹಣ ಬಿಡುವವರೆಗೆ ಪೂಜೆ ನೆಡರವೇರಿತು.

RCR

ತುಮಕೂರಲ್ಲಿ ಸಿಗ್ನಾ ಯುವ ಸಮುದಾಯ ವೇದಿಕೆ ಮತ್ತು ತುಮಕೂರು ವಿಜ್ಞಾನ ಕೇಂದ್ರ ಗ್ರಹಣದ ಹೊತ್ತಲ್ಲಿ ಊಟ ಆಯೋಜಿಸಿತ್ತು. ಈ ಮೂಲಕ ಗ್ರಹಣದ ಹೊತ್ತಲ್ಲಿ ಊಟ ಮಾಡಿದ್ರೆ ಕೇಡಾಗುತ್ತೆ ಅನ್ನೋ ಮೂಢನಂಬಿಕೆಯನ್ನು ಹೋಗಲಾಡಿಸುವ ಯತ್ನ ಮಾಡಿದ್ರು. ನಗರದ ಟೌನ್‍ಹಾಲ್ ವೃತ್ತದಲ್ಲಿ ಚಿತ್ರಾನ್ನ, ಉಪಿಟ್ಟು ಸೇವಿಸಿದ್ರು.

MYS 1

CKB 1

BNG 2

TAGGED:bengaluruchandragrahanaDistrictpublictvಚಂದ್ರಗ್ರಹಣಜಿಲ್ಲೆಪಬ್ಲಿಕ್ ಟಿವಿಬೆಂಗಳೂರು
Share This Article
Facebook Whatsapp Whatsapp Telegram

You Might Also Like

GOLD SURESH
Bengaluru City

6 ಲಕ್ಷ ಹಣ ನೀಡುವಂತೆ ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್‌ಗೆ ಬೆದರಿಕೆ – ಎನ್‌ಸಿಆರ್ ದಾಖಲು

Public TV
By Public TV
2 hours ago
mid day meals
Bengaluru City

ಬಿಸಿಯೂಟ ತಯಾರಕರಿಗೆ ಮಾಸಿಕ ಗೌರವ ಸಂಭಾವನೆ 1,000 ರೂ. ಹೆಚ್ಚಳ

Public TV
By Public TV
2 hours ago
Gopi Chandh Padalkar
Latest

ಮತಾಂತರ ಮಾಡುವವರನ್ನು ಕೊಲ್ಲುವವರಿಗೆ 11 ಲಕ್ಷ ಬಹುಮಾನ – ಮಹಾರಾಷ್ಟ್ರ ಬಿಜೆಪಿ ಶಾಸಕನ ಪ್ರಚೋದನಕಾರಿ ಹೇಳಿಕೆ

Public TV
By Public TV
3 hours ago
Ballary Suicide
Bellary

ಕೌಟುಂಬಿಕ ಕಲಹ ಶಂಕೆ – ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ

Public TV
By Public TV
4 hours ago
safari EV bus
Bengaluru City

ದೇಶದಲ್ಲೇ ಮೊದಲು – ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸಫಾರಿ ಇ.ವಿ ಬಸ್‌ಗೆ ಚಾಲನೆ

Public TV
By Public TV
4 hours ago
Turkey Air Ballon
Crime

ಟರ್ಕಿಯಲ್ಲಿ 2 ಏರ್ ಬಲೂನ್ ಅವಘಡ- ಪೈಲಟ್ ಸಾವು, 31 ಪ್ರವಾಸಿಗರಿಗೆ ಗಾಯ

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?