Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೇಂದ್ರದಿಂದ ಬಂದ ನೆರೆ ಪರಿಹಾರ ಎಷ್ಟು? – ರಾಜ್ಯ ಸರಕಾರಕ್ಕೆ ಇಲ್ಲ ಸ್ಪಷ್ಟತೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕೇಂದ್ರದಿಂದ ಬಂದ ನೆರೆ ಪರಿಹಾರ ಎಷ್ಟು? – ರಾಜ್ಯ ಸರಕಾರಕ್ಕೆ ಇಲ್ಲ ಸ್ಪಷ್ಟತೆ

Bengaluru City

ಕೇಂದ್ರದಿಂದ ಬಂದ ನೆರೆ ಪರಿಹಾರ ಎಷ್ಟು? – ರಾಜ್ಯ ಸರಕಾರಕ್ಕೆ ಇಲ್ಲ ಸ್ಪಷ್ಟತೆ

Public TV
Last updated: January 8, 2020 10:13 am
Public TV
Share
2 Min Read
blg flood
SHARE

ಬೆಂಗಳೂರು: ಮೊನ್ನೆ ಕೇಂದ್ರ ಸರಕಾರವು ರಾಜ್ಯದ ನೆರೆ ಪರಿಸ್ಥಿತಿಗೆ ಘೋಷಿಸಿದ ಪರಿಹಾರ ಮೊತ್ತ 1869 ಕೋಟಿ ರೂಪಾಯಿಯೇ ಅಥವಾ 669 ಕೋಟಿ ರೂಪಾಯಿಯೇ? ಇಂಥದ್ದೊಂದು ಗೊಂದಲ ಈಗ ರಾಜ್ಯ ಸರಕಾರಕ್ಕೆ ಕಾಡುತ್ತಿದೆ. ಕೇಂದ್ರ ಸರಕಾರ ಎನ್‌ಡಿಆರ್‌ಎಫ್‌ ಅಡಿ ಘೋಷಿಸಿದ ಎರಡನೇ ಕಂತಿನ ಪರಿಹಾರ ಮೊತ್ತ ಕುರಿತು ಯಾವುದೇ ಸ್ಪಷ್ಟತೆ ಕೊಡದಿರವುದರಿಂದ ಈ ಗೊಂದಲ ಸೃಷ್ಟಿಯಾಗಿದೆ.

ಕಳೆದ ವರ್ಷದ ಆಗಸ್ಟ್ ನಲ್ಲಿ ರಾಜ್ಯದಲ್ಲಿ ನೆರೆ ಪರಿಸ್ಥಿತಿ ಉದ್ಭವಿಸಿ ಸುಮಾರು 22 ಜಿಲ್ಲೆಗಳಲ್ಲಿ ಸಾಕಷ್ಟು ಪ್ರಾಣ, ಆಸ್ತಿ, ಬೆಳೆ ನಷ್ಟ ಉಂಟಾಗಿತ್ತು. ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಸುಮಾರು 38 ಸಾವಿರ ಕೋಟಿ ರೂ ನಷ್ಟ ಪರಿಹಾರ ಕೊಡಬೇಕೆಂದು ವರದಿ ಸಲ್ಲಿಸಿತ್ತು. ರಾಜ್ಯದ ಮನವಿ ಬಂದ ಬಹಳ ದಿನಗಳವರೆಗೂ ಕಾಯಿಸಿದ ಕೇಂದ್ರ ಸರಕಾರ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಮೊದಲ ಕಂತಿನ ರೂಪದಲ್ಲಿ 1,200 ರೂ ಪರಿಹಾರ ಮೊತ್ತ ನೀಡಿತ್ತು. ಇದೀಗ ಮತ್ತೆ ಸರಿಸುಮಾರು ಅಷ್ಟೇ ಕಾಲಾವಕಾಶ ತಡೆದು ಎರಡನೇ ಕಂತಿನ ಪರಿಹಾರ ಮೊತ್ತವನ್ನು ಘೋಷಣೆ ಮಾಡಿದೆ.

flood

ಕೇಂದ್ರದ ಈ ಬಾರಿಯ ಪರಿಹಾರ ಮೊತ್ತ ಎಷ್ಟು ಅನ್ನುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟತೆ ಸಿಗುತ್ತಿಲ್ಲ. ಈಗಿನ ಪರಿಹಾರ ಮೊತ್ತ ಪ್ರತ್ಯೇಕವಾಗಿ ಘೋಷಿಸಲ್ಪಟ್ಟ 1,869 ಕೋಟಿಯೋ ಅಥವಾ ಮೊದಲ ಕಂತಿಗೆ ಸೇರ್ಪಡೆ ಮಾಡಲ್ಪಟ್ಟು ಘೋಷಣೆಯಾದ 1,869 ಕೋಟಿಯೋ ಎನ್ನುವುದರ ಕುರಿತು ಯಾವುದೇ ಸಮಜಾಯಿಷಿ ದೊರಕುತ್ತಿಲ್ಲ. ಮೊದಲ ಕಂತು ಮತ್ತು ಎರಡನೇ ಕಂತುಗಳಲ್ಲಿ ನೀಡಿದ ಪರಿಹಾರ ಮೊತ್ತ ಪ್ರತ್ಯೇಕ ಎನ್ನುವುದಾದರೆ, ಎರಡೂ ಒಟ್ಟು ಸೇರಿಸಿ ಒಟ್ಟು 3,069 ಕೋಟಿ ರೂ ಪರಿಹಾರ ರಾಜ್ಯಕ್ಕೆ ಬಂದಂತಾಗುತ್ತದೆ. ಆದರೆ ಮೊದಲ ಕಂತಿಗೆ ಸೇರಿಸಲ್ಪಟ್ಟು ಎರಡನೇ ಕಂತು ಬಿಡುಗಡೆ ಮಾಡಿದ್ದರೆ, ಆಗ ಎರಡನೇ ಕಂತಿನ ಪರಿಹಾರ ಮೊತ್ತ ಕೇವಲ 669 ಕೋಟಿ ರೂ. ಆಗಲಿದೆ. ಇದರಲ್ಲಿ ಸ್ಪಷ್ಟತೆ ಸಿಗುತ್ತಿಲ್ಲದಿರುವುದರಿಂದ ರಾಜ್ಯದ ಅಧಿಕಾರಿವರ್ಗ ಗೊಂದಲದಲ್ಲಿದೆ. ಎರಡನೇ ಕಂತಿನ ಪರಿಹಾರ ಮೊತ್ತ ಎಷ್ಟು ಎನ್ನುವುದರ ಬಗ್ಗೆ ಸ್ಪಷ್ಟತೆಯನ್ನು ಕೇಂದ್ರ ಸರ್ಕಾರದ ಬಳಿಯೇ ಕೇಳಿ ಬಗೆಹರಿಸಿಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ ಎನ್ನಲಾಗಿದೆ.

ಮುಖ್ಯಮಂತ್ರಿ @BSYBJP ಗೋಗರೆತಕ್ಕೆ ಕರಗಿದ @narendramodi
ರೂ.669.85 ಕೋಟಿ ಹೆಚ್ಚುವರಿ ನೆರೆಪರಿಹಾರ ದಯಪಾಲಿಸಿದ್ದು,
ಒಟ್ಟು ಪರಿಹಾರ
ರೂ.1869.85 ಆಗುತ್ತೆ.

ಸುಳ್ಳು ದೇವರ ಭಕ್ತರಾದ ಬಿಜೆಪಿ ನಾಯಕರು ಪರಿಹಾರದ ಮೊತ್ತ 1200+1869.85=ರೂ.3069 ಕೋಟಿ ಎಂದು ಹೇಳಿ ಸಂಭ್ರಮಿಸುತ್ತಿರುವುದು ತಮಾಷೆಯಾಗಿದೆ.
1/3

— Siddaramaiah (@siddaramaiah) January 7, 2020

ಈ ಗೊಂದಲ ಮತ್ತು ಅನುಮಾನಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಯೂ ಪುಷ್ಟಿ ಕೊಟ್ಟಿದೆ. ಕೇಂದ್ರ ಸರಕಾರ ಎರಡನೇ ಕಂತಿನಲ್ಲಿ ಬಿಡುಗಡೆ ಮಾಡಲಿರುವ ಪರಿಹಾರ ಮೊತ್ತ ಕಡಿಮೆ. ಈ ಮೊತ್ತ ನೆರೆ ಸ್ಥಿತಿ ಎದುರಿಸಲು ಸಾಕಾಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಎರಡನೇ ಕಂತಿನ ಮೊತ್ತ 1,869 ಎಂದು ಎಲ್ಲರೂ ಕೇಂದ್ರದತ್ತ ಮೆಚ್ಚುಗೆ ನೋಟ ಹರಿಸಿರುವಾಗಲೇ ಮುಖ್ಯಮಂತ್ರಿಗಳ ಈ ಹೇಳಿಕೆಯ ಹಿನ್ನೆಲೆಯಲ್ಲಿ ಕೇಂದ್ರದ ಎರಡನೇ ಪರಿಹಾರ ಕಂತು ಎಷ್ಟು ಅನ್ನುವ ಅನುಮಾನ ಹುಟ್ಟು ಹಾಕಿದೆ.

ಕೇಂದ್ರ ಸರ್ಕಾರ ನೀಡಿರುವ ರೂ.669.85 ಕೋಟಿ ಹೆಚ್ಚುವರಿ ನೆರೆ ಪರಿಹಾರ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ.@BSYBJP ಅವರೇ, ನೆನಪಿರಲಿ ನೀವೇ ಒಪ್ಪಿಕೊಂಡಂತೆ ಅಂದಾಜು ನಷ್ಟ ರೂ. 50 ಸಾವಿರ ಕೋಟಿ, ನೀವು ಕೇಳಿದ್ದು ರೂ.38 ಸಾವಿರ ಕೋಟಿ.
ನಿಮ್ಮ ಗೋಗರೆತಕ್ಕೆ ಸಿಕ್ಕಿದ್ದು ಕೇವಲ ರೂ.1869 ಕೋಟಿ.
ಇಷ್ಟು ಸಾಕಾ?
2/3

— Siddaramaiah (@siddaramaiah) January 7, 2020

ಈ ಗೊಂದಲ ಬಗೆಹರಿಯಲು ಎರಡು ದಾರಿಗಳಿವೆ. ಮೊದಲ ಮಾರ್ಗ, ಎರಡನೇ ಕಂತು ಎಷ್ಟು ಎಂದು ಕೇಂದ್ರ ಸರಕಾರದ ಬಳಿಯೇ ರಾಜ್ಯ ಸರಕಾರ ಸ್ಪಷ್ಟೀಕರಣ ಕೇಳಬೇಕು. ಎರಡನೇ ಮಾರ್ಗ ಸದ್ಯ ಕೇಂದ್ರ ಸರಕಾರ ಘೋಷಣೆ ಮಾಡಿರುವ ಎರಡನೇ ಪರಿಹಾರ ಮೊತ್ತವನ್ನು ರಾಜ್ಯದ ಎನ್‌ಡಿಆರ್‌ಎಫ್‌ ಖಾತೆಗೆ ಹಾಕುವವರೆಗೂ ಕಾಯುವುದು. ಕೇಂದ್ರ ಪರಿಹಾರ ಮೊತ್ತ ರಾಜ್ಯದ ಖಾತೆಗೆ ಬಂದ ಬಳಿಕವೇ ಎರಡನೇ ಕಂತು ಎಷ್ಟು ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.

ನೆರೆ ಪರಿಹಾರವಲ್ಲದೇ ರಾಜ್ಯಕ್ಕೆ ನ್ಯಾಯೋಚಿತವಾಗಿ ಬರಬೇಕಾದ ಅನುದಾನ ಸಾಕಷ್ಟಿದೆ. ತೆರಿಗೆ ಪಾಲು, ನರೇಗಾ ಅನುದಾನ, ಬರ ಪರಿಹಾರ.. ಇವುಗಳನ್ನೆಲ್ಲ ಯಾವಾಗ ಕೊಡುತ್ತೀರಿ ಮೋದಿ ಅವರೇ?
2/2

— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) January 6, 2020

TAGGED:floodkannada newskarnatakaNDRFಕರ್ನಾಟಕಕೇಂದ್ರ ಸರ್ಕಾರನರೇಂದ್ರ ಮೋದಿನೆರೆಪರಿಹಾರಯಡಿಯೂರಪ್ಪ
Share This Article
Facebook Whatsapp Whatsapp Telegram

Cinema news

Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories
Tamil Actress Subashini
ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣು – ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
Cinema Latest Main Post South cinema
shreyas manju
ಶ್ರೇಯಸ್ ಮಂಜುಗೆ ʻದಿಲ್‌ದಾರ್ʼ ಬರ್ತ್‌ಡೇ ಟೀಸರ್ ಗಿಫ್ಟ್‌!
Cinema Latest Sandalwood

You Might Also Like

Shirin Sharmin Chaudhury
Latest

ಬಾಂಗ್ಲಾದ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್‌

Public TV
By Public TV
7 minutes ago
Iran Power Plants
Latest

ಟ್ರಂಪ್‌ಗೆ ಟೆನ್ಷನ್‌ ಕೊಟ್ಟ ಇರಾನ್‌ – ವಿದ್ಯುತ್‌ ಸ್ಥಾವರಗಳ ಸುತ್ತ ಮಾನವ ಸರಪಳಿ ನಿರ್ಮಿಸಲು ದೇಶದ ಯುವ ಸಮೂಹಕ್ಕೆ ಕರೆ

Public TV
By Public TV
24 minutes ago
Illicit Relations
Bengaluru City

ಅನೈತಿಕ ಸಂಬಂಧಕ್ಕೆ ಅಡ್ಡಿ – ಪ್ರೇಯಸಿಯ ಪತಿಯ ಹತ್ಯೆ

Public TV
By Public TV
42 minutes ago
Auto Gas
Bengaluru City

ಗ್ಯಾಸ್ ಅಭಾವದಿಂದ ನಲುಗಿದ ಆಟೋ ಚಾಲಕರು – ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ.. ಮನವಿ

Public TV
By Public TV
1 hour ago
America China AI
Latest

ಯುಎಸ್ ಸೇನೆ ಮಾಹಿತಿ ಇರಾನ್‌ಗೆ ಮಾರಿದ ಚೀನಾ: ಅಮೆರಿಕ

Public TV
By Public TV
2 hours ago
Tolll
Latest

ಏ.10 ರಿಂದ ಟೋಲ್‌ಗಳಲ್ಲಿ ನಗದು ಸ್ವೀಕಾರ ಸಂಪೂರ್ಣ ಬಂದ್‌!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?