ಆಸ್ಪತ್ರೆಯಲ್ಲಿ ರೋಗಿ ಸಾವು- ವೈದ್ಯರ ನಿರ್ಲಕ್ಷ್ಯ ಆರೋಪ

Public TV
1 Min Read
tmk hospital galate f

ತುಮಕೂರು: ಆಸ್ಪತ್ರೆಯಲ್ಲಿ ರೋಗಿ ಸಾವನಪಿದ್ದರ ಪರಿಣಾಮ ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿದ ಸಂಬಂಧಿಕರು ರೊಚ್ಚಿಗೆದ್ದು ಆಸ್ಪತ್ರೆಯ ಕಿಟಕಿ ಗಾಜು ಧ್ವಂಸ ಮಾಡಿದ ಘಟನೆ ನಡೆದಿದೆ.

ತುಮಕೂರು ನಗರದ ವಿನಾಯಕ ಆಸ್ಪತ್ರೆಯಲ್ಲಿ ಬೆಳಗಿನ ಜಾವ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಮಂಡಿಪೇಟೆಯ ನಿವಾಸಿ ಗೌಸ್ ಎಂಬವರು ಅಪ್ಪೆಂಡಿಕ್ಸ್ ಕಾಯಿಲೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಮಾಡುತ್ತೆನೆ ಎಂದಿದ್ದ ವೈದ್ಯರು ಎದೆಭಾಗದಿಂದ ಹೊಟ್ಟೆವರೆಗೆ ಕತ್ತರಿಸಿ ಬಳಿಕ ಕೈ ಚೆಲ್ಲಿದ್ದಾರೆ.

tmk hospital galate 1

ಹೊಟ್ಟೆವರೆಗೂ ಕತ್ತರಿಸಿದ ಬಳಿಕ ಬೆಂಗಳೂರಿಗೆ ಹೋಗಿ ಎಂದಿದ್ದಾರೆ. ಬೆಂಗಳೂರಿಗೆ ಹೋಗಲು ಸಿದ್ಧರಾಗುತ್ತಿದ್ದಂತೆ ಗೌಸ್ ಜೀವ ಹೋಗಿದೆ. ಇದರಿಂದ ರೊಚ್ಚಿಗೆದ್ದ ಸಂಬಂಧಿಕರು ಆಸ್ಪತ್ರೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಗಾಜನ್ನು ಪುಡಿಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಈ ನಡುವೆ ಆಸ್ಪತ್ರೆ ಸಿಬ್ಬಂದಿಯೊಬ್ಬ ನಮ್ಮದೇನು ತಪ್ಪಿಲ್ಲ ಎಂದು ವಾದ ಮಾಡಲು ಬಂದಿದ್ದಾನೆ. ಆಗ ರೋಗಿಯ ಸಂಬಂಧಿಕರು ಆತನನ್ನು ಅಟ್ಟಾಡಿಸಿಕೊಂಡು ಹೋದಾಗ ಪ್ರಾಣ ಭಯದಿಂದ ಆತ ಪೊಲೀಸ್ ಜೀಪ್ ಹತ್ತಿಕೊಂಡು ರಕ್ಷಣೆ ಪಡೆದಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *