ಸುದೀಪ್ ಮನೆ ಮುಂದೆ ಹೈ ಡ್ರಾಮಾ: ಬಿಗ್ ಬಾಸ್ ಮನೆಗೆ ನನ್ನನ್ನೂ ಕಳಿಸಿ

Public TV
1 Min Read
Sudeep 6

ಕಿಚ್ಚನ (Sudeep) ಮನೆ ಮುಂದೆ ವ್ಯಕ್ತಿಯೊಬ್ಬನು ಅತಿರೇಕದ ವರ್ತನೆ ಮಾಡಿದ್ದಾನೆ. ಈ ವರ್ತನೆ ಕಂಡು ಮನೆಯ ಸೆಕ್ಯೂರಿಟಿ ದಂಗಾಗಿದ್ದಾರೆ. ಬಿಗ್ ಬಾಸ್ (Big Boss Kannada) ಮನೆಗೆ ಚಾನ್ಸ್ ಕೇಳೋಕೆ ಅಂತ ಎತ್ತಿನ ಗಾಡಿಯಲ್ಲಿ ಸುದೀಪ್ ಮನೆಗೆ ಬಂದಿದ್ದ ವ್ಯಕ್ತಿ. ಬಿಗ್ ಬಾಸ್ ಮನೆಗೆ ಹೋಗೋಕೆ ಅವಕಾಶ ಮಾಡಿ ಕೊಡಿ ಅಂತ ಹೈ ಡ್ರಾಮಾ ಶುರುಮಾಡಿದ್ದಾನೆ.

sudeep 1 3

ಮಂಜು (Manju) ಹೆಸರಿನ ವ್ಯಕ್ತಿಯು ನಿನ್ನೆ ಸಂಜೆ ಸುಮಾರು 6 ಗಂಟೆಯಿಂದ 10ಗಂಟೆವರೆಗೂ ಸುದೀಪ್ ಮನೆ ಮುಂದೆ ಕಾದು ನಿಂತಿದ್ದ. ತಾನು ಟಿ ನರಸಿಪುರದಿಂದ ಬಂದಿರುವುದಾಗಿ ತಿಳಿಸಿದ್ದಾನೆ. ನಾವು ಅನಕ್ಷರಸ್ಥರು. ರೈತರು ಬಿಗ್ ಬಾಸ್ ಹೋಗಲು ಅವಕಾಶ ಕೊಡಿ ಅಂತ ಎತ್ತಿನ ಗಾಡಿ ತಂದು ಸುದೀಪ್ ಮನೆ ಮುಂದೆ ನಿಲ್ಲಿಸಿದ್ದ. ನಂತರ ಸುದೀಪ್ ಮನೇಲಿಲ್ಲ. ಚೆನ್ನೈ ಹೋಗಿದ್ದಾರೆ ಅಂತ ಹೇಳಿ ಸೆಕ್ಯುರಿಟಿ ಮನವಿ ಮಾಡಿ ಕಳಿಸಿದ್ದಾರೆ.

 

ಎತ್ತಿನ ಗಾಡಿಗೆ ಬ್ಯಾನರ್ ಕಟ್ಕೊಂಡ್ ಬಂದು, ಜೆಪಿ ನಗರದ ಸುದೀಪ್ ಮನೆ ಮುಂದೆ ಗಾಡಿ ನಿಲ್ಲಿಸಿದ್ದ. ನಂತರ ಬುದ್ದಿ ಹೇಳಿ ಆತನನ್ನ ಕಳಿಸಲಾಗಿದೆ. ಮಂಜು ಅಂತ ಹೆಸರನ್ನು ಬ್ಯಾನರ್ ನಲ್ಲಿ ಬರೆಯಲಾಗಿತ್ತು. ಕೆಲ ಸಮಯದ ನಂತರ ಅವರನ್ನು ಸಮಾಧಾನಿಸಿ ಕಳುಹಿಸಲಾಗಿದೆ ಎಂದಿದ್ದಾರೆ ಸುದೀಪ್ ಆಪ್ತರು.

Share This Article