Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜಿಎಸ್‍ಟಿಗೆ ಪ್ರಕಾಶ್ ರೈ ವಿರೋಧ ಯಾಕೆ?- ಈ ಸ್ಟೋರಿ ಓದಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಜಿಎಸ್‍ಟಿಗೆ ಪ್ರಕಾಶ್ ರೈ ವಿರೋಧ ಯಾಕೆ?- ಈ ಸ್ಟೋರಿ ಓದಿ

Cinema

ಜಿಎಸ್‍ಟಿಗೆ ಪ್ರಕಾಶ್ ರೈ ವಿರೋಧ ಯಾಕೆ?- ಈ ಸ್ಟೋರಿ ಓದಿ

Public TV
Last updated: October 18, 2017 4:04 pm
Public TV
Share
3 Min Read
PRAKASH RAI
SHARE

ಬೆಂಗಳೂರು: ಕಳೆದ ಐದು ದಿನಗಳಿಂದ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಕೈ ಉತ್ಪನ್ನಗಳನ್ನ ತೆರಿಗೆಯಿಂದ ಮುಕ್ತಗೂಳಿಸಬೇಕು ಅಂತ ನಗರದಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದು, ಇದೀಗ ಈ ಸತ್ಯಾಗ್ರಹಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಕೈ ಜೋಡಿಸಿದ್ದಾರೆ.

ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು ಜಿಎಸ್‍ಟಿ ಅನ್ನೋದು ನಿಜವಾದ ಗ್ರಾಮೀಣ ಪ್ರದೇಶದಲ್ಲಿ ಸರಿಯಲ್ಲ. ಅವರವರ ವರಮಾನದಲ್ಲಿ ಸಮಾನತೆ ಇಲ್ಲದಿದ್ದರೆ ಏನು ಪ್ರಯೋಜನ? ಯಾಕಂದ್ರೆ ಗ್ರಾಮೀಣ ಭಾಗದಲ್ಲಿ ಸಮಾನ ಅದಾಯ ಇರುವುದಿಲ್ಲ. ಹಲವು ಸರ್ಕಾರಗಳು ಗ್ರಾಮೀಣ ಭಾಗದ ಜನರನ್ನು, ಬುಡಕಟ್ಟು ಜನರನ್ನು, ಅದಿವಾಸಿಗಳನ್ನು ಕಡೆಗಣಿಸುತ್ತಿದ್ದಾರೆ. ಬಡವರಿಗೆ, ಹಿಂದುಳಿದವರಿಗೆ ಜಿಎಸ್‍ಟಿಯಿಂದ ವಿನಾಯಿತಿಯನ್ನು ನೀಡಬೇಕು. ಹೆಚ್ಚಾಗಿ ಗ್ರಾಮೀಣ ಪ್ರದೇಶವಿರುವ ಭಾರತ ದೇಶದಲ್ಲಿ ಎಷ್ಟರಮಟ್ಟಿಗೆ ಒಂದು ಸಮಾನವಾದ ತೆರಿಗೆ ನಿಯಮವನ್ನು ಒಪ್ಪಿಕೊಳ್ಳಲಾಗುತ್ತದೆ? ಅವರವರ ವರಮಾನದಲ್ಲಿ ಸಮಾನತೆ ಇಲ್ಲದಿದ್ದರೆ ಏನು ಪ್ರಯೋಜನ? ಅಂತ ಹೇಳಿದ್ರು.

vlcsnap 2017 10 18 15h12m34s223

ಗ್ರಾಮೀಣ ಜನರನ್ನ ಕಡೆಗಣಿಸ್ತಿದ್ದಾರೆ: 1930ರ ಕಾಲದಲ್ಲಿ ಬ್ರಿಟೀಷರು ಉಪ್ಪಿಗೆ ತೆರಿಗೆ ಹಾಕಿದ್ರು. ಅದಾದ ನಂತರ ಬಂದ ಎಲ್ಲಾ ಸರ್ಕಾರಗಳು ಬ್ರಿಟೀಷರಂತೆ ಕೆಲಸ ಮಾಡುತ್ತಿವೆ. ಇವತ್ತ್ಯಾಕೆ ಇದೊಂದು ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಿದೆ ಅಂದ್ರೆ ಸಾಕಷ್ಟು ವರ್ಷಗಳಿಂದ ಬಂದಂತಹ ಯಾವುದೇ ಸರ್ಕಾರಗಳು ಕೂಡ ನಮ್ಮ ರೈತರು, ಆದಿವಾಸಿಗಳು ಹಾಗೂ ಗ್ರಾಮೀಣ ಪ್ರದೇಶದ ಜನರನ್ನು ಕಡೆಗಣಿಸುತ್ತಲೇ ಬಂದಿವೆ ಅನ್ನೋದನ್ನ ನಾವು ಒಪ್ಪಿಕೊಳ್ಳಲೇಬೇಕು ಅಂದ್ರು.

ಕೈ ಉತ್ಪನ್ನಗಳು ಏನು ಅನ್ನೋದರ ಬಗ್ಗೆ ಒಂದು ಸ್ಪಷ್ಟವಾದ ಪರಿಕಲ್ಪನೆ ಇಲ್ಲದಂತಹ ಸರ್ಕಾರಗಳು ಇಂದು ನಮ್ಮ ದೇಶವನ್ನು ಆಳುತ್ತಾ ಇವೆ. ಬ್ರಿಟೀಷರು ನಮ್ಮ ದೇಶಕ್ಕೆ ಬರೋದಕ್ಕಿಂತಲೂ ಮೊದಲು ನಮ್ಮ ದೇಶದಲ್ಲಿ ಯಂತ್ರಗಳಿರಲಿಲ್ಲ. ಆ ಸಂದರ್ಭದಲ್ಲಿ ನಾವು ನಮ್ಮ ಕೈಯಿಂದ ಉತ್ಪನ್ನವಾದ ವಸ್ತುಗಳನ್ನೇ ಬಳಸುತ್ತಾ ಇದ್ದೆವು ಮತ್ತು ಅದನ್ನೇ ಬೇರೆ ದೇಶಕ್ಕೆ ರಫ್ತು ಮಾಡುತ್ತಿದ್ದೆವು. ಆ ಕಾಲದಲ್ಲಿಯೇ ನಾವು ಇಷ್ಟೊಂದು ಬಡವರಾಗಿರಲಿಲ್ಲ. ಕೈ ಉತ್ಪನ್ನಗಳು ಮತ್ತು ಗ್ರಾಮೀಣ ಬದುಕನ್ನು ನೋಡಬೇಕಾದ್ರೆ ಅದು ಕೇವಲ ಹಣಕಾಸಿಗಾಗಿ ಮಾತ್ರವಲ್ಲ. ಅದು ಅವರ ಅಸ್ತಿತ್ವ, ನಮ್ಮ ಸಂಸ್ಕೃತಿ, ಬದುಕಿನ ರೀತಿ. ಜ್ಞಾನ, ಕೊಂಡಾಟ ಹಾಗೂ ನಮ್ಮ ಸಂಭ್ರಮವನ್ನು ಹೇಳಿಕೊಳ್ಳುವಂತಹ ಒಂದು ರೈತ ಬದುಕು ಕಟ್ಟುವ ರೀತಿಯಾಗಿದೆ. ಹೀಗಿದ್ದಂತಹ ಸಂದರ್ಭದಲ್ಲಿ ಬ್ರಿಟೀಷರು ಇಲ್ಲಿಗೆ ಬಂದು ಅವರ ಯಂತ್ರಗಳನ್ನು ಇಲ್ಲಿಗೆ ತಂದು, ಅದರಿಂದ ಉತ್ಪಾದಿಸಿ, ನಮ್ಮ ಗ್ರಾಮೀಣ ಜನರ ಕೈ ಉತ್ಪನ್ನಗಳನ್ನು ಕಡಿಮೆ ಮಾಡಿ ವಿದೇಶಗಳಿಂದ ನಾವೇ ವಸ್ತುಗಳನ್ನು ಆಮದು ಮಾಡಿಕೊಳ್ಳುವಂತೆ ಮಾಡಿದ್ದಾರೆ ಅಂದ್ರು.

vlcsnap 2017 10 18 15h13m08s37

ಜಿಎಸ್‍ಟಿಯಿಂದ ಸೋಲು: ಇಂದಿನ ಬಿಜೆಪಿ ಸರ್ಕಾರ ಕೂಡ ಈ ಹಿಂದಿನ ಸರ್ಕಾರಗಳಂತೆ ಅದನ್ನೇ ಮುಂದುವರೆಸಿಕೊಂಡು ಬಂದಿದೆ. ಇಂದು ನಾವು ಈ ಹೋರಾಟ ಮಾಡುವ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ನಮ್ಮ ಮುಂದಿದೆಯಷ್ಟೆ. ಇವರು ಇನ್ನೂ ದೊಡ್ಡ ತಪ್ಪು ಮಾಡಿದ್ದಾರೆ ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಕೈ ಉತ್ಪನ್ನಗಳನ್ನ ತೆರಿಗೆ ಮುಕ್ತಗೊಳಿಸಬೇಕು ಅನ್ನೋ ನಿಟ್ಟಿನಲ್ಲಿ ಪ್ರಸನ್ನ ಅವರು ಕಳೆದ 5 ದಿನಗಳಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಜಿಎಸ್‍ಟಿಗೆ ವಿರೋಧ ವ್ಯಕ್ತಪಡಿಸಲೇಬೇಕು. ಇಂದು ಜಿಎಸ್‍ಟಿ ಎಲ್ಲರಿಗೂ ಸಮಾನ ತೆರಿಗೆ. ಯಾವ ಒಂದು ದೊಡ್ಡ ದೃಷ್ಟಿಕೋನದಿಂದ ಮಾಡಿದ್ರೋ? ಇದ್ರಿಂದ ಸೋಲುಂಟಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದೊಡ್ಡ ದೊಡ್ಡ ಕಂಪನಿಗಳಿಗೆ ಒಂದೇ ಟ್ಯಾಕ್ಸ್. ಒಬ್ಬ ಸಾಮಾನ್ಯ ಮನುಷ್ಯನಿಗೂ ಅದೇ ಟ್ಯಾಕ್ಸ್ ಆದ್ರೆ ಹೇಗೆ ಬದುಕಲು ಸಾಧ್ಯ. ಸಾಮಾನ್ಯ ವ್ಯಕ್ತಿಯ ಉತ್ಪನನ್ನಗಳಿಗೆ ಬೆಲೆ ಕೊಡ್ತಾ ಇಲ್ಲ. ಆತನಿಗೆ ಉದ್ಯೋಗಾವಕಶವನ್ನು ಕೊಡ್ತಾ ಇಲ್ಲ. ಈಗಾಗಲೇ ಯಾಂತ್ರೀಕರಣದಿಂದ ಒದ್ದಾಡುತ್ತಿರೋ ಹೊತ್ತಲ್ಲಿ ಆತನ ಮೇಲೆ ಈ ಜಿಎಸ್‍ಟಿ ಯನ್ನು ಹಾಕಿ ತುಳಿದರೆ ಈ ದೇಶ ಏನಾಗಬೇಕು ಅಂತ ಹೇಳಿದ್ರು.

vlcsnap 2017 10 18 15h13m52s230

ಇದೇ ವೇಳೆ ಮಾತನಾಡಿದ ರಂಗಕರ್ಮಿ ಪ್ರಸನ್ನ, ಜಿಎಸ್‍ಟಿ ತೆರಿಗೆ ಜಾರಿಗೆ ತರುವ ಮೊದಲು ಅವರು ಕೈ ಉತ್ಪನ್ನಗಳನ್ನು ಪರಿಗಣಿಸಲೇ ಇಲ್ಲ. ಕೈ ಉತ್ಪನ್ನ ಅನ್ನೋ ವ್ಯಾಖ್ಯಾನವೇ ಇಡೀ ಜಿಎಸ್‍ಟಿ ಎಂಬ ಪದಗುಚ್ಚದಲ್ಲೇ ಇಲ್ಲ. ಹೀಗಾಗಿ ಇದೊಂದು ಯಂತ್ರೋತ್ಪನ್ನಗಳ ಪರವಾದ ಹಾಗೂ ಕೈ ಉತ್ಪನ್ನಗಳ ವಿರುದ್ಧವಾದ ತೆರಿಗೆಯಾಗಿ ಜಾರಿಗೆ ಬಂದಿದೆ. ಕೈ ಉತ್ಪನ್ನಗಳು ಸಹಜವಾಗಿಯೇ ದುಬಾರಿ. ಹೀಗಾಗಿ ಅವುಗಳಿಗೆ ತೆರಿಗೆ ವಿಧಿಸದೇ ಇರುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಬೇಕಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಇಂದು ಟಾಟಾ, ಬಿರ್ಲಾಗಳಿಗೆ ಸಾಮಾಜಿಕ ನ್ಯಾಯಗಳನ್ನು ವಿಧಿಸುತ್ತಿವೆ. ಹೀಗಾಗಿ ಈ ವಿಷಯ ನಿರ್ಧಾರವಾಗುವವರೆಗೆ ಅಂದ್ರೆ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗೋವರೆಗೆ ಈ ಹೋರಾಟ ಮುಂದುವರೆಸುವುದಾಗಿ ಹೇಳಿದ್ರು.

vlcsnap 2017 10 18 15h12m09s216

vlcsnap 2017 10 18 15h12m50s117

vlcsnap 2017 10 18 15h13m44s137

TAGGED:actorbengalurugstPrakash Raipublictvಜಿ ಎಸ್ ಟಿಪಬ್ಲಿಕ್ ಟಿವಿಪ್ರಕಾಶ್ ರೈಬಹುಭಾಷಾ ನಟಬೆಂಗಳೂರು
Share This Article
Facebook Whatsapp Whatsapp Telegram

Cinema news

ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories
ranveer singh 2
ದೈವಕ್ಕೆ ಅಪಮಾನ – ಇನ್ಮುಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲ್ಲ: ಕ್ಷಮೆಯಾಚಿಸಿದ ರಣವೀರ್ ಸಿಂಗ್
Cinema Court Latest South cinema Top Stories

You Might Also Like

teacher committed suicide by being shot in madikeri
Crime

ಪ್ರೀತಿಯ ವಿದ್ಯಾರ್ಥಿಗಳೆ ನಿಮಗೆ ವಿದಾಯ ಎಂದು ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕಿ

Public TV
By Public TV
28 minutes ago
Rising temperature In Bagalkot the historical Muchakhandi lake has dried up 2
Bagalkot

ಬಾಗಲಕೋಟೆಯಲ್ಲಿ ಸುಡುವ ಬಿಸಿಲು: ಬತ್ತಿ ಬರಿದಾದ ಐತಿಹಾಸಿಕ ಮುಚಖಂಡಿ ಕೆರೆ!

Public TV
By Public TV
59 minutes ago
IPL 2026 Preity Zinta Punches Priyansh Arya After Punjab Kings Historic Win
Cricket

ಗೆದ್ದ ಬಳಿಕ `ಪ್ರೀತಿʼಯ ಪಂಚ್‌ – ಪ್ರಿಯಾಂಶ್‌ ಆರ್ಯ ಶಾಕ್!

Public TV
By Public TV
1 hour ago
Engagement
Crime

ಇಂದು ನಿಶ್ಚಿತಾರ್ಥ, ನಿನ್ನೆ ರಾತ್ರಿ ಇಬ್ರಾಹಿಂ ಜೊತೆ ಪರಾರಿ – ಲವ್‌ ಜಿಹಾದ್‌ ಆರೋಪ

Public TV
By Public TV
3 hours ago
Delhi Airport SWISS Flight Fire
Latest

ಟೇಕಾಫ್ ವೇಳೆ ಎಂಜಿನ್ ವೈಫಲ್ಯದಿಂದ ಸ್ವಿಸ್ ವಿಮಾನದಲ್ಲಿ ಬೆಂಕಿ – 6 ಮಂದಿಗೆ ಗಾಯ

Public TV
By Public TV
3 hours ago
White House Correspondents Dinner
Latest

Explained| ಏನಿದು ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್? ಅಧ್ಯಕ್ಷರು ಯಾಕೆ ಬರುತ್ತಾರೆ? ಹಿಲ್ಟನ್ ಹೋಟೆಲ್‌ನಲ್ಲೇ ಆಯೋಜನೆ ಯಾಕೆ?

Public TV
By Public TV
3 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?