ಚಿಕ್ಕಮಗಳೂರು: ಭದ್ರಾ ನದಿಯ ನೀರಿನ ರಭಸಕ್ಕೆ ಹೊರನಾಡು ಅನ್ನಪೂಣೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಶಿಥಿಲಾವಸ್ಥೆಯಲ್ಲಿರುವ ಹೆಬ್ಬಾಳೆ ಸೇತುವೆ ಇಕ್ಕೆಲಗಳಲ್ಲಿದ್ದ ತಡೆಗೋಡೆಯ ಕಂಬಗಳು ಮುರಿದು ಬಿದ್ದಿದೆ.
ಸೇತುವೆಯೂ ಪಾಳು ಬಿಟ್ಟು, ಸೇತುವೆಯೇ ಮಧ್ಯದಲ್ಲೇ ರಂಧ್ರಗಳಾಗಿವೆ. ಮಳೆ ನಿಂತ ಮೇಲೆ ಭದ್ರೆಯ ರಭಸ ಕಡಿಮೆಯಾದ ಮೇಲೆ ನೀರಿನಲ್ಲಿ ತೇಲಿ ಬಂದಿದ್ದ ದೊಡ್ಡ ಮರದ ದಿಣ್ಣೆಗಳನ್ನ ಜೆಸಿಬಿ ಮೂಲಕ ಸ್ವಚ್ಛ ಮಾಡಲಾಗಿದೆ.
ಸೇತುವೆಯ ಮಧ್ಯದಲ್ಲೇ ಬಿರುಕು ಬಿಟ್ಟಿದೆ. ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೋಗುವ ಬಹುತೇಕ ವಾಹನಗಳು ಈ ಸೇತುವೆಯ ಮೂಲಕವೇ ಸಂಚರಿಸುತ್ತದೆ. ನೀರಿನ ರಭಸಕ್ಕೆ ಸೇತುವೆಯ ಪಿಲ್ಲರ್ ಗಳು ಯಾವ ಹಂತದಲ್ಲಿವಯೋ ಗೊತ್ತಿಲ್ಲ.
30 ಮೀಟರ್ ಉದ್ದದ ಸೇತುವೆಯನ್ನು 1992ರಲ್ಲಿ ಸಿಎಂ ಬಂಗಾರಪ್ಪನವರು ಉದ್ಘಾಟಿಸಿದ್ದಾರೆ. ಮುಂದೊಂದು ದಿನ ಮತ್ತೊಂದು ಅನಾಹುತ ಸಂಭವಿಸಿದ ಮೇಲೆ ಜಿಲ್ಲಾಡಳಿತ ಮುಜುಗರಕ್ಕೀಡಾಗೋ ಬದಲು ಕೂಡಲೇ ಸೇತುವೆ ದುರಸ್ಥಿಗೊಳಲಿಸೋದು ಒಳ್ಳೆಯದು ಎಂದು ಸಾರ್ವಜನಿಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.