ರಾಜ್ಯಾದ್ಯಂತ ವರುಣನ ಆರ್ಭಟ-ಹಳ್ಳ ದಾಟುವಾಗ ಒಂದೇ ಕುಟುಂಬದ ಮೂವರು ನೀರುಪಾಲು

Public TV
1 Min Read
BDR DEATH COLLAGE

– ಗದಗದಲ್ಲಿ ಮೇಲ್ಛಾವಣಿ ಕುಸಿದು ಅಜ್ಜಿ, ಮೊಮ್ಮಕ್ಕಳ ಸಾವು

ಬೀದರ್/ಗದಗ: ಮಳೆಯ ಅವಾಂತರದಿಂದ ಒಂದೇ ಕುಟುಂಬದ ಮೂವರು ಸದ್ಯಸರು ನೀರುಪಾಲಗಿರುವ ಘಟನೆ ಬೀದರ್ ನ ಬಕನಾಳ ಲಾಡವಂತಿ ಬಳಿಯ ಹಳ್ಳದಲ್ಲಿ ನಡೆದಿದೆ.

ಹಳ್ಳ ದಾಟುವಾಗ ಪಕ್ಕದಲ್ಲಿದ್ದ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ ನಡೆದ ಈ ಘಟನೆಯಲ್ಲಿ ಶಂಕರ್, ಲಕ್ಷ್ಮಿ ಮತ್ತು ಲತಾ ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದ ಬಳಿ ಘಟನೆ ನಡೆದಿದ್ದು, ಮಂಠಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

BDR DEATH AV 7

BDR DEATH AV 9

BDR DEATH AV 10

BDR DEATH AV 1

ಗದಗ ಜಿಲ್ಲಾದ್ಯಂತ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಮನೆಯ ಮೇಲ್ಛಾವಣಿ ಕುಸಿದು ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಮೆಹಬೂಬಿ(56), ಮುಸ್ಕಾನ್(8), ನಾಜೀಯಾ(10) ಮೃತ ದುರ್ದೈವಿಗಳು. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

vlcsnap 2017 10 16 07h46m20s8

vlcsnap 2017 10 16 07h47m13s30

vlcsnap 2017 10 16 07h47m32s216

vlcsnap 2017 10 16 07h47m55s198

Share This Article
Leave a Comment

Leave a Reply

Your email address will not be published. Required fields are marked *