ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ನಾನಾ ಕಡೆ ಬಿರುಗಾಳಿ ಸಹಿತ ಮಳೆ ಮುಂದುವರೆದಿದೆ.
ಬೆಂಗಳೂರಿನಲ್ಲಿ ರಾತ್ರಿಯಿಡಿ ಬಿರುಗಾಳಿ, ಗುಡುಗು ಸಹಿತ ಮಳೆ ಆಗಿ, ಹಲವೆಡೆ ಮರಗಳು ಉರುಳಿದ್ದಿವೆ. ಶಿವಮೊಗ್ಗ, ಮಂಡ್ಯದಲ್ಲಿ ಧಾರಕಾರ ಮಳೆ ಆಗಿದೆ.
ರಾಯಚೂರಿನಲ್ಲಿ ಬಿರುಗಾಳಿ ಬೀಸಿದ ರಭಸಕ್ಕೆ ಹಲವು ಮರಗಳು ಬಿದ್ದಿವೆ. ಜೊತೆಗೆ ಗಾಳಿಗೆ ಆಕಸ್ಮಿಕ ಬೆಂಕಿ ತಗುಲಿ 1 ಗುಡಿಸಲು, 4 ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿವೆ. ಹಲವು ಜಾನುವಾರು ಗಾಯಗೊಂಡಿವೆ. ತುಮಕೂರಿನ ಮಧುಗಿರಿ ಬಳಿ ಸಿಡಿಲು ಬಡಿದು 12 ಕುರಿ ಸಾವನ್ನಪ್ಪಿವೆ ಎಂಬುದಾಗಿ ತಿಳಿದುಬಂದಿದೆ.