CrimeDistrictsKarnatakaLatestUttara Kannada
ಮಳೆಯಲ್ಲಿಯೇ ಬೈಕ್ ಚಾಲನೆ: ಮರ ಬಿದ್ದು ತಂದೆ-ಮಗನ ದುರ್ಮರಣ

Advertisements
ಕಾರವಾರ: ಬೈಕ್ ಮೇಲೆ ಮರ ಬಿದ್ದು ತಂದೆ ಹಾಗೂ ಮಗ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಇಡಗುಂದಿಯಲ್ಲಿ ನಡೆದಿದೆ.
ಅಂಕೋಲಾ ತಾಲೂಕಿನ ಕನಕನಹಳ್ಳಿ ಗ್ರಾಮದ ಸುಭಾಷ್ ಚಿಪ್ಕರ್ ಹಾಗೂ ನಾಗರಾಜ್ ಸಲಗಾವ್ಕರ್ ಮೃತ ದುರ್ದೈವಿಗಳು. ಇಂದು ಸಂಜೆ ಯಲ್ಲಾಪುರದಿಂದ ಅಂಕೋಲಕ್ಕೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ.
ಭಾರೀ ಗಾಳಿ ಮಳೆಯಲ್ಲಿಯೇ ಸುಭಾಷ್ ಹಾಗೂ ನಾಗರಾಜ್ ಬೈಕಿನಲ್ಲಿ ಸಂಚರಿಸುತ್ತಿದ್ದರು. ದಾರಿ ಮಧ್ಯದಲ್ಲಿ ಬೃಹತ್ ಮರವೊಂದು ಅವರ ಮೇಲೆ ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.