Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಜನರೇ ನನ್ನ ಅಡ್ರೆಸ್ ಏನು ಅಂತಾ ಮುಂದಿನ ದಿನಗಳಲ್ಲಿ ತೋರಿಸ್ತಾರೆ: ಎಚ್‍ಡಿಕೆ

Public TV
Last updated: December 25, 2019 7:27 am
Public TV
Share
2 Min Read
hdk
SHARE

ರಾಮನಗರ: ನನ್ನ ಅಡ್ರೆಸ್ ಈಗ ಇಲ್ಲದಿರಬಹುದು. ಅವರೇ 2006ರಲ್ಲಿ ನನ್ನ ಅಡ್ರೆಸ್ ಹುಡುಕಿಕೊಂಡು ಬಂದವರು. ನಾನು ಅವರ ಅಡ್ರೆಸ್ ಹುಡುಕಿಕೊಂಡು ಹೋಗಿರಲಿಲ್ಲ.ಇವತ್ತು ನನಗೆ ಅಡ್ರೆಸ್ ಇಲ್ಲದಿರಬಹುದು ಜನರ ಮಧ್ಯೆ ನಾನಿದ್ದೇನೆ. ಇದೇ ಜನರೇ ನನ್ನ ಅಡ್ರೆಸ್ ಏನೂ ಅಂತಾ ಮುಂದಿನ ದಿನಗಳಲ್ಲಿ ತೋರಿಸ್ತಾರೆ ಎಂದು ಸಿಎಂ ಯಡಿಯೂರಪ್ಪನವರ ಟ್ವೀಟ್ ಗೆ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಚನ್ನಪಟ್ಟಣ ತಾಲೂಕಿನ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಶಂಕುಸ್ಥಾಪನ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ಭಾಗಿಯಾಗಿದ್ದರು. ಇದೇ ವೇಳೆ ಮಳೂರು ಪಟ್ಟಣದಲ್ಲಿ 5 ಕೋಟಿ ರೂ. ವೆಚ್ಚದ ಮೂರು ರಸ್ತೆಗಳ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯ ನೆರವೇರಿಸಿದರು.

ನಾನು ಹಾಸನದ ಹರದನಹಳ್ಳಿಯ 'ದೇವೇಗೌಡ'ರ ಮಗ ಕುಮಾರಸ್ವಾಮಿ. ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿ ನನ್ನ ಶಾಶ್ವತ ವಿಳಾಸ.
ಅಧಿಕಾರದ ಮದ ಕೆಲ ರಾಜಕಾರಣಿಗಳಲ್ಲಿ ಮರೆವು ತರಿಸಿದೆ. ನನ್ನ ಅಡ್ರೆಸ್ ಕೂಡಾ ಮರೆತಿದ್ದಾರೆ. 2006ಕ್ಕೂ ಮುನ್ನ ಮಂತ್ರಿಗಿರಿಗಾಗಿ ನನ್ನ ಅಡ್ರೆಸ್ ಹುಡುಕಿಕೊಂಡು ಬಂದವರು ಬಿಎಸ್ವೈ ಮಾತ್ರ ಅಲ್ಲ.

— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 24, 2019

ಇದೇ ವೇಳೆ ಮಂಗಳೂರು ಗಲಭೆ ವಿಚಾರವಾಗಿ ಮಾತನಾಡಿದ ಅವರು, ಕಲ್ಲು ತುಂಬಿಕೊಂಡು ಬರುವ ಗಾಡಿಯ ವಿಡಿಯೋ ಸತ್ಯವೋ, ಅಸತ್ಯವೋ ತನಿಖೆಯಾಗಲಿ. ಯಾರಾದ್ರೂ ಕಾನೂನು ಬಾಹಿರವಾಗಿ ಗಲಭೆಗೆ ಕಾರಣಕರ್ತರು ಇದ್ದರೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕಾದ್ದು ಸರ್ಕಾರದ ಕ್ರಮ. ಗಲಭೆ ನಡೆಸುವಂತವರಿಗೆ ಬೆಂಬಲ ಕೊಡಲು ನಾನಿಲ್ಲ ಎಂದು ತಿಳಿಸಿದರು. ಅಲ್ಲದೇ ವಿಡಿಯೋ ವೈರಲ್ ಬಗ್ಗೆ ಹಲವಾರು ರೀತಿಯ ಸಂಶಯಗಳಿವೆ. ಸಿಎಂ ಮತ್ತು ಪೊಲೀಸ್ ಕಮಿಷನರ್ ಒಂದೊಂದು ಕಾಂಟ್ರವರ್ಷಿಯಲ್ ಹೇಳಿಕೆ ನೀಡ್ತಿದ್ದಾರೆ. ಇವರ ತಪ್ಪುಗಳನ್ನು ಮುಚ್ಚಿಡಲು ಬೇರೆ ರೀತಿಯ ಹುನ್ನಾರ ನಡೆಸಿದ್ರೆ, ಅದನ್ನ ಕೇಳಿಕೊಂಡಿರಲು ನಾವು ಹೂವು ಮುಡಿದುಕೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಬಿಎಸ್ವೈ, ಶೆಟ್ಟರ್, ಈಶ್ವರಪ್ಪ. ಈ ತ್ರಿಮೂರ್ತಿಗಳು ನನ್ನ ಅಡ್ರೆಸ್ನಲ್ಲಿ ನಿಂತಿದ್ದರು. ನನ್ನನ್ನು ಕೆಣಕಿ ತ್ರಿಮೂರ್ತಿಗಳು ಈಗ ಬೆತ್ತಲಾಗಿದ್ದಾರೆ

ನಾನು ಈಗಲೂ ಹೇಳುತ್ತೇನೆ 'ಮರೆವು ರೋಗ' ಬಂದವರಿಗೆಲ್ಲ ಶೀಘ್ರವೇ ನಮ್ಮ ಜನ ನನ್ನ ಅಡ್ರೆಸ್ ತೋರಿಸುತ್ತಾರೆ. ಇದು ಅಹಂ ಅಲ್ಲ… ನನ್ನ ಜನ ನನಗೆ ಕೊಟ್ಟ ಬಲ.

— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 24, 2019

ರಾಜ್ಯದಾದ್ಯಂತ ಪ್ರತಿಭಟನೆಗೆ ಮೊದಲು ಅವಕಾಶ ನೀಡಿ ಆನಂತರ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಇವರಿಗೆ ಗಲಭೆ ಆಗುತ್ತೆ ಅಂತಾ ಮಾಹಿತಿ ಕೊಟ್ಟವರು ಯಾರು? 14 ತಿಂಗಳ ಮೈತ್ರಿ ಆಡಳಿತದಲ್ಲಿ ಒಂದೇ ಒಂದು ಗಲಭೆಗೆ ಕರಾವಳಿಯಲ್ಲಿ ಅವಕಾಶ ನೀಡಿರಲಿಲ್ಲ. ಗಲಭೆ ಆರಂಭವಾಗಿದ್ದೇ ಪೊಲೀಸರಿಂದ ಅವರಿಗೆ ಆದೇಶ ಕೊಟ್ಟಿದ್ದು ಯಾರು? ಮಂಗಳೂರಿನಲ್ಲಿ ಮತ್ತೊಂದು ಪ್ಯಾರಲಲ್ ಸರ್ಕಾರ ನಡೆಸುತ್ತಿದೆ. ಅಲ್ಲಿನ ಪ್ರಭಾಕರ್ ಭಟ್ ಎಂಬವರ ಸೂಚನೆ ಮೇರೆಗೆ ಪೊಲೀಸರು ಕೆಲಸ ಮಾಡ್ತಿದ್ದಾರೆ ಎಂದು ತಿಳಿಸಿದ್ರು. ಕೆಲಸ ಮಾಡಲು ಹೋಗಿದ್ದವ, ಮಕ್ಕಳನ್ನು ಶಾಲೆಯಿಂದ ಕರೆತಂದು ಇಣುಕಿ ನೋಡಿದವ ಪೊಲೀಸರ ಗುಂಡೇಟಿಗೆ ಬಲಿಯಾದ್ರು. ಮಾಜಿ ಮೇಯರ್ ಶಾಂತಿ ಸಭೆಗೆ ಕರೆದು ರಬ್ಬರ್ ಗುಂಡು ಹಾರಿಸಿ ಐಸಿಯುನಲ್ಲಿ ಮಲಗುವಂತೆ ಮಾಡಿದ್ದಾರೆ. ಇದು ಈ ಸರ್ಕಾರದ ಸಾಧನೆ ಎಂದು ತಿಳಿಸಿದ್ರು.

ಅನರ್ಹರಿಗಾಗಿ ನಡೆದ ಉಪಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಬಿಜೆಪಿ ನಾಯಕರು ನನ್ನ ಅಡ್ರೆಸ್ ಹುಡುಕುತ್ತಿದ್ದಾರೆ. ನನ್ನ ಅಡ್ರೆಸ್ ಕೇಳಿದ ಬಿಎಸ್ವೈ ಸೂಕ್ತ ಉತ್ತರ ಪಡೆದುಕೊಂಡರು. ಈಗ 'ದೊಡ್ಡ ದೊಡ್ಡ ನಾಯಕರ' ಮೂಲಕ ನನ್ನ ಅಡ್ರೆಸ್ ಕೇಳಿಸುತ್ತಿದ್ದಾರೆ. ಅವರಿಗೆಲ್ಲ ಉತ್ತರಿಸುವಷ್ಟು ದೊಡ್ಡವನಲ್ಲದಿದ್ದರೂ ನಾನೇ ಉತ್ತರಿಸುವೆ.

— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 24, 2019

ತೇಜಸ್ವಿ ಸೂರ್ಯ ವಿರುದ್ಧ ಗರಂ: ಅವನ್ಯಾರೋ ಬೆಂಗಳೂರಿನ ಲೋಕಸಭಾ ಸದಸ್ಯ ಅಂತೇ, ಪಂಕ್ಚರ್ ಹಾಕುವವರು, ಎದೆ ಸೀಳಿದ್ರೆ ಎರಡಕ್ಷರ ಇಲ್ಲದವರು ಪ್ರತಿಭಟನೆ ಮಾಡ್ತಾರೆ. ನೋಡಿ ನಮ್ಮ ಜೊತೆ ಪ್ರತಿಭಟನೆ ಮಾಡಲು ಬಂದವರು ಸಾಫ್ಟ್ ವೇರ್ ಇಂಡಸ್ಟ್ರಿಯ ಕಾರ್ಪೋರೇಟ್ ಕಂಪನಿಯ ಜನ ಬಂದು ಕೂತಿದ್ದಾರೆ ಅಂತಾರೆ. ಆದ್ರೆ ಸ್ವಾಮಿ ಈ ದೇಶ ಆಳುತ್ತಿರುವವರು ಸರ್ಕಾರದ ಹಲವು ರಿಯಾಯಿತಿಗಳನ್ನ ಪಡೆದುಕೊಂಡು, ಬ್ಯಾಂಕ್‍ಗಳಲ್ಲಿ ದೊಡ್ಡಮಟ್ಟದ ಸಾಲ ಪಡೆದುಕೊಂಡು ದೇಶ ಬಿಟ್ಟು ಹೋಗುವಂತಹ ರೀತಿಯ ಕ್ರಿಮಿನಲ್‍ಗಳು ನಿಮ್ಮ ಜೊತೆ ಇರಬಹುದು. ಪ್ರತಿಭಟನೆ ಮಾಡ್ತಿರುವವರು ಎರಡು ಹೊತ್ತಿನ ಜೀವನಕ್ಕಾಗಿ ಹೋರಾಟ ಮಾಡುವ ಶ್ರಮಜೀವಿಗಳು. ಇವರ ಬಗ್ಗೆ ಅಗೌರವವಾಗಿ ಮಾತನಾಡ್ತೀರಾ? ಅಮೆರಿಕಾ ದೇಶದಲ್ಲಿ ಚಮ್ಮಾರನೊಬ್ಬ ಆಳಿದ ಇತಿಹಾಸವಿದೆ, ಯಾರಿಗೂ ವಿದ್ಯೆಯನ್ನ ಬರೆದುಕೊಟ್ಟಿಲ್ಲ. ಪಾರ್ಲಿಮೆಂಟ್‍ನಲ್ಲಿ ನಿಮಗೆ ಮೆಜಾರಿಟಿ ಇದೆ ಅಂತಾ ಕಾನೂನು ತರಲಿಕ್ಕಲ್ಲ ಅಧಿಕಾರ ಕೊಟ್ಟಿರುವುದು ಎಂದು ಕಿಡಿ ಕಾರಿದರು.

ಮಂಗಳೂರಿನ ಪ್ರತಿಭಟನೆ ವೇಳೆ ಸೈಜುಗಲ್ಲುಗಳನ್ನು ತಂದ ವಿಡಿಯೋಗಳನ್ನು ಇಷ್ಟೊಂದು ತಡವಾಗಿ ಬಿಡುಗಡೆಗೊಳಿಸುತ್ತಿರುವ ಸರ್ಕಾರ ಅದಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿದೆ? ಎಷ್ಟು ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದೆ?

ಕಲ್ಲು ತೂರಾಟಕ್ಕೆ ತಂದ ವಾಹನಗಳ ವಿಡಿಯೋ ಮಂಗಳೂರಿನ ಗಲಭೆಯದೋ? ಅಥವಾ ಬೇರೆಡೆಯದೋ?
(3/4)

— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 24, 2019

TAGGED:ಜೆಡಿಎಸ್ಪಬ್ಲಿಕ್ ಟಿವಿಬಿಜೆಪಿಮಂಗಳೂರುರಾಮನಗರಹೆಚ್ ಡಿ ಕುಮಾರಸ್ವಾಮಿ
Share This Article
Facebook Whatsapp Whatsapp Telegram

You Might Also Like

Puri Jagannath
Latest

ಪುರಿ ಜಗನ್ನಾಥ ರಥೋತ್ಸವ ವೇಳೆ ಕಾಲ್ತುಳಿತ – 600ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, 40ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕ

Public TV
By Public TV
56 seconds ago
Davanagere Congress
Crime

ದಾವಣಗೆರೆ | ಯೂತ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ `ಕೈ’ ಕಾರ್ಯಕರ್ತರ ಕಾಳಗ!

Public TV
By Public TV
8 minutes ago
kolkata gangrape
Crime

ಕೋಲ್ಕತ್ತಾ ಗ್ಯಾಂಗ್‌ ರೇಪ್‌ | ಕಾಲಿಗೆ ಬಿದ್ದರೂ ನನ್ನನ್ನು ಬಿಡಲಿಲ್ಲ – ಸಂತ್ರಸ್ತೆ ದೂರಿನಲ್ಲಿ ಉಲ್ಲೇಖ

Public TV
By Public TV
8 minutes ago
01 11
Big Bulletin

ಬಿಗ್‌ ಬುಲೆಟಿನ್‌ 27 June 2025 ಭಾಗ-1

Public TV
By Public TV
13 minutes ago
02 13
Big Bulletin

ಬಿಗ್‌ ಬುಲೆಟಿನ್‌ 27 June 2025 ಭಾಗ-2

Public TV
By Public TV
16 minutes ago
03 11
Big Bulletin

ಬಿಗ್‌ ಬುಲೆಟಿನ್‌ 27 June 2025 ಭಾಗ-3

Public TV
By Public TV
17 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?