– ರಾಜಕೀಯವಾಗಿ ಮತ ಪಡೆಯಲು ಕಾಂಗ್ರೆಸ್ ಕೀಳು ಮಟ್ಟಕ್ಕೆ ಇಳಿಯುತ್ತೆ
ಹಾಸನ: ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಸಲು RSS ಕಾರಣ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದರು.
ಹಾಸನದ ಸಕಲೇಶಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, RSS ಬಗ್ಗೆ ನಾನು ಈ ಹಿಂದೆ ಹೇಳಿದ್ದ ಹೇಳಿಕೆ, ಅದರ ಪ್ರಚಾರಕರು ಹೇಳಿದ್ದೇ ಆಗಿದೆ. ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಲು RSS ಕಾರಣ ಎಂದು ಆರೋಪಿಸಿದರು.
ಉಪಚುನಾವಣೆ ಕುರಿತು ಮಾತನಾಡಿದ ಅವರು, ಉಪಚುನಾವಣೆಯ ಎರಡೂ ಕ್ಷೇತ್ರಗಳನ್ನ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸಿಂದಗಿ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಸೋಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ ಎಂದು ಹೇಳುವವರು, ಅಭ್ಯರ್ಥಿ ಹಾಕಲು ಯೋಗ್ಯತೆ ಇಲ್ಲದೆ ನಮ್ಮ ಪಕ್ಷದಿಂದ ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಅನಗತ್ಯವಾಗಿ ಖಾಸಗಿ ಆಸ್ಪತ್ರೆ ಶಿಫಾರಸು ಮಾಡಿದ್ರೆ ಸೂಕ್ತ ಕ್ರಮ: ವಿಕಾಸ್ ಕಿಶೋರ್
ಬಹಳ ಅಚ್ಚರಿ ಮೂಡುವಂತದ್ದು, ಎಂದರೆ ದಿ.ಹಿರಿಯ ಶಾಸಕ, ಜೆಡಿಎಸ್ ನಾಯಕ ಎಂ.ಸಿ ಮನಗೂಳಿ ಸಾಯುವ 15 ದಿನ ಮುಂಚೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮಡಿಲಿಗೆ ಅವರ ಮಕ್ಕಳನ್ನ ಹಾಕಿ ನೋಡಿಕೊಳ್ಳಿ ಎಂದಿದ್ದರಂತೆ. ಮನಗೂಳಿ ಪಾಪ ಅವರು, ಅಸಡ್ಡೆಯಿಂದ ಕೋವಿಡ್ ಸಮಯದಲ್ಲಿ ಜನರ ಜೊತೆ ಕೆಲಸ ಮಾಡಲು ಹೋಗಿ ಸೀರಿಯಸ್ ಆಗಿ ಎಮರ್ಜೆನ್ಸಿ ಅಲ್ಲಿ ಇದ್ದರು. ನಾವು ಅವರನ್ನು ಅಪೋಲೊಗೆ ಸೇರಿಸಿದ್ವಿ. ನಾವೇ ಹೋಗಿ ಅವರನ್ನು ನೋಡೋಕೆ ಆಗ್ಲಿಲ್ಲ. ನೋಡಲು ಒಳಗೆ ಬಿಡ್ತಿಲ್ಲ, ದಯವಿಟ್ಟು ಒಂದು ಮಾತು ಹೇಳಿ ಎಂದು ಅವರ ಮಕ್ಕಳು ನನಗೆ ಫೋನ್ ಮಾಡ್ತಿದ್ರು ಎಂದು ನೆನಪಿಸಿಕೊಂಡರು.
ಯಾವಾಗ ಮನಗುಳಿ ಅವರು ಎದ್ದು ಡಿಕೆಶಿಯವರ ಮನೆಗೆ ಹೋಗಿದ್ರು? ಇದಕ್ಕಿಂತ ಹಸೀಸುಳ್ಳು ಮತ್ತೊಂದಿಲ್ಲ. ಮನಗುಳಿ ಅವರು ಬದುಕಿದ್ದಾಗ ದೇವೇಗೌಡರ ಪ್ರತಿಮೆ ಮಾಡಿ ನಿಲ್ಲಿಸಿದ್ದಾರೆ. ಸಾಯುವವರೆಗೂ ದೇವೇಗೌಡರ ಸ್ವಂತ ತಮ್ಮನಿಗಿಂತ ಹೆಚ್ಚಾಗಿದ್ರು. ದೇವೇಗೌಡರಿಗಿಂತ ತನ್ನ ಮಕ್ಕಳನ್ನ ಡಿಕೆಶಿ ಚೆನ್ನಾಗಿ ನೋಡ್ಕೋತಾರೆ ಎಂದು ಮನಗುಳಿ ಅವರ ಮಡಿಲಿಗೆ ಹಾಕಲು ಹೋಗಿದ್ರಾ? ರಾಜಕೀಯವಾಗಿ ಮತ ಪಡೆಯಲು ಕಾಂಗ್ರೆಸ್ ಅವರು ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗದಂತ ನೀಚ ಕೆಲಸ ಕಾಂಗ್ರೆಸ್ ಅವರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಾಯಿಗೆ ಬಂದಂತೆ ಮಾತನಾಡಲು ಜನರು ನಮ್ಮನ್ನು ಆಯ್ಕೆ ಮಾಡಿಲ್ಲ: ಹಾಲಪ್ಪ