ಹಾಸನ: ಮೀನು (Fishing) ಹಿಡಿಯಲು ಹೋಗಿದ್ದವರ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ನಾಗರಾಜ್ ಹಾಗೂ ಅನಿಲ್ ಎಂದು ಗುರುತಿಸಲಾಗಿದೆ. ಪೆಲ್ಲೆಟ್ ಗನ್ನಿಂದ ಗುಂಡಿನ ದಾಳಿ ಮಾಡಿ ಕೊಲೆ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ.
ಕೊಲೆಗೆ ಕಾರಣವೇನು..?: 2022ರ ನವೆಂಬರ್ 30 ರಂದು ನವೀನ್ ಅಕ್ರಮವಾಗಿ ಮರಳು (Sand Mafia) ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಟ್ರಾಕ್ಟರ್ ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದರು. ಅದೇ ಗ್ರಾಮದ ನಾಗರಾಜ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅನುಮಾನಗೊಂಡ ನವೀನ್, ಪದೇ ಪದೇ ನಾಗರಾಜ್ ಜೊತೆ ಜಗಳವಾಡುತ್ತಿದ್ದ. ಅಲ್ಲದೇ ನಾಗರಾಜ್ ವಿಶೇಷ ಚೇತನನಾಗಿದ್ದು ಇನ್ನೊಂದು ಕಾಲು ಮುರಿಯುತ್ತೇನೆ ಎಂದು ಧಮ್ಕಿ ಹಾಕಿದ್ದ. ಇದರಿಂದ ಕೆರಳಿದ ನಾಗರಾಜ್ ನವೀನ್ ಮರ್ಡರ್ ಮಾಡಲು ಸ್ಕೆಚ್ ಹಾಕಿದ್ದ.
ಜ.10 ರಂದು ರಾತ್ರಿ 8.10 ರ ಸಮಯದಲ್ಲಿ ನವೀನ್ (Naveen) ಗೆ ಕರೆ ಮಾಡಿದ ನಾಗರಾಜ್ ಎಲ್ಲಿದ್ದಿಯಾ ಎಂದು ಕೇಳಿದ್ದಾನೆ. ಆಗ ಆತ, ಮೀನು ಹಿಡಿಯಲು ಬಂದಿದ್ದೇನೆ ಎಂದು ಹೇಳಿದಾಗ ನಾನು ಬರ್ತೀನಿ ಎಂದು ನಾಗರಾಜ್ ಹೇಳಿದ್ದಾನೆ. ಇತ್ತ ಕೂಲಿ ಕೆಲಸ ಮಾಡುವ ಅನಿಲ್ ಎಂಬಾತನನ್ನು ಒಂದು ಕೆಲಸವಿದೆ ಎಂದು ನಾಗರಾಜ್ (Nagaraj) ಗನ್ ಜೊತೆ ಕರೆದುಕೊಂಡು ಹೋಗಿದ್ದ.
ಹಳ್ಳದ ದಡದಲ್ಲಿ ನವೀನ್, ದಯಾನಂದ್, ಪದ್ಮನಾಭ ಹಾಗೂ ರಾಜಾಚಾರಿ ಮೀನು ಹಿಡಿಯುತ್ತಿದ್ದರು. ಈ ವೇಳೆ ಫೋನ್ನಲ್ಲಿ ಮಾತನಾಡುತ್ತಿದ್ದ ನವೀನ್ನನ್ನು ಗುರುತು ಮಾಡಿ ಫೈರ್ ಮಾಡಿ ನಾಗರಾಜ್ ಹತ್ಯೆ ಮಾಡಿದ್ದಾನೆ. ನಂತರ ಎರಡೇ ನಿಮಿಷಗಳಲ್ಲಿ ಗ್ರಾಮದಲ್ಲಿ ವಾಹನ ಇಟ್ಟುಕೊಂಡಿದ್ದ ಚಾಲಕನಿಗೆ ಕರೆ ಮಾಡಿದ್ದ ನಾಗರಾಜ್, ಶೂಟೌಟ್ನಿಂದ ನವೀನ್ ಸಾವನ್ನಪ್ಪಿದ್ದಾನೆ. ಇಬ್ಬರಿಗೆ ಗಾಯವಾಗಿದೆ ಎಂದು ಹೇಳಿ ಹಾಸನದ ಆಸ್ಪತ್ರೆಗೆ ಇಬ್ಬರನ್ನು ತಂದು ದಾಖಲಿಸಿದ್ದಾನೆ.
ಈ ಮೂಲಕ ನಾಗರಾಜ್, ಕೊಲೆ ಪ್ರಕರಣದ ದಿಕ್ಕು ತಪ್ಪಿಸಲು ಆಸ್ಪತ್ರೆಗೆ ಸೇರಿಸಿ ನಾಟವಾಡಿದ್ದ. ಸದ್ಯ ಮರಳಿನ ವಿಚಾರವೇ ಕೊಲೆಗೆ ಕಾರಣ ಎಂಬುದಾಗಿ ತಿಳಿದುಬಂದಿದೆ. ಪ್ರಕರಣ ಸಂಬಂಧ ಒಂದೇ ದಿನದಲ್ಲಿ ಪ್ರಕರಣ ಭೇದಿಸಿ ಯಸಳೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹೇಮಾವತಿ ದಡದಲ್ಲಿ ಮೀನು ಹಿಡಿಯಲು ಹೋಗಿದ್ದವರಿಗೆ ಗುಂಡೇಟು- ಓರ್ವ ಸಾವು, ಇಬ್ಬರು ಗಂಭೀರ
ಆರೋಪಿ ನಾಗರಾಜ್, ಅನಿಲ್ನನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಗನ್ ಅನ್ನು ವಶಕ್ಕೆ ಪಡೆದಿರುವುದಾಗಿ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k