ನವದೆಹಲಿ: ಮುಂದಿನ ಐಪಿಎಲ್ನಲ್ಲಿ ನಾನು ಬೌಲಿಂಗ್ ಮಾಡುವ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಆದರೆ ಇದರ ಬಗ್ಗೆ ನಮ್ಮ ತಂಡಕ್ಕೆ ಸರಿಯಾದ ಮಾಹಿತಿಯಿದೆ ಎಂದು ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದರು.
ಕೇವಲ ಬ್ಯಾಟರ್ ಆಗುವುದಕ್ಕಿಂತಲೂ ಆಲ್ರೌಂಡರ್ ಆಗಿ ಆಡಲು ನಾನು ಬಯಸುತ್ತೇನೆ. ನಾನು ಯಾವಾಗಲೂ ಬ್ಯಾಟ್, ಬಾಲ್ ಮತ್ತು ಮೈದಾನದಲ್ಲಿ ಕೊಡುಗೆ ನೀಡುವ ವ್ಯಕ್ತಿಯಾಗಿದ್ದೇನೆ. ಇದು ಸಾಧ್ಯವಾಗದಿದ್ದರೆ ಮಾತ್ರ ಬ್ಯಾಟರ್ ಆಗಿ ಮುಂದುವರೆಯುತ್ತೇನೆ ಎಂದು ಹೇಳಿದರು.
ನಾನು ಯಾವಾಗಲೂ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇಷ್ಟಪಡುವ ವ್ಯಕ್ತಿಯಾಗಿದ್ದೇನೆ ಮತ್ತು ನಾನು ಸವಾಲನ್ನು ಎದುರು ನೋಡುತ್ತಿದ್ದೇನೆ. ನಾಯಕನಾಗಿ, ಎಲ್ಲಾ ಆಟಗಾರರು ನನ್ನಿಂದ ಸಾಕಷ್ಟು ಸಮಯವನ್ನು ಹೊಂದಲು ನಾನು ಬಯಸುತ್ತೇನೆ. ಅದನ್ನೇ ನಾನು ಕಲಿತಿದ್ದೇನೆ ಮತ್ತು ನಾನು ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಶಾಸಕ ನಿತೇಶ್ ರಾಣೆಗೆ ಜಾಮೀನು ನಿರಾಕರಿಸಿದ ಕೋರ್ಟ್
ಪಾಂಡ್ಯ ಅವರನ್ನು ಐಪಿಎಲ್ನ ಅಹಮದಾಬಾದ್ ತಂಡದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಪಾಂಡ್ಯ ಅವರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಆರೋಗ್ಯ ಸುಧಾರಣೆಯಾದ ಬಳಿಕ ಅವರು ಬೌಲ್ ಮಾಡಬಹುದಾದ ಓವರ್ ಗಳ ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡಿಕೊಂಡರು. ಇದನ್ನೂ ಓದಿ: UP Election: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲಿಲ್ಲ ಅಪರ್ಣಾ ಯಾದವ್ ಹೆಸರು