ಬೆಂಗಳೂರು: ಆಸರೆ ಕೊಟ್ಟ ಸ್ನೇಹಿತರ ಮೊಬೈಲ್, ಹಣ ಕದ್ದು ಪರಾರಿಯಾಗಿದ್ದ ಖದೀಮನನ್ನು ಸ್ನೇಹಿತರು ಹಿಡಿದಿರುವ ಘಟನೆ ಕೆಆರ್ ಪುರಂ ನಲ್ಲಿ ನಡೆದಿದೆ.
ಸಾಗರ ಮೂಲದ ಸಿದ್ದಿಕ್ ಎಂಬಾತನೇ ಸ್ನೇಹಿತನ ಮನೆಗೆ ಕನ್ನ ಹಾಕಿದವನು. ಕೆ.ಆರ್ ಪುರಂನಲ್ಲಿರುವ ಸ್ನೇಹಿತರ ರೂಮ್ನಲ್ಲಿ ಸಿದ್ದಿಕ್ ಆಸರೆ ಪಡೆದಿದ್ದನು. ರೂಮಿನಲ್ಲಿ ಯಾರು ಇಲ್ಲದ ವೇಳೆಯಲ್ಲಿ ಸ್ನೇಹಿತರ ಮೂರು ಮೊಬೈಲ್, 10 ಸಾವಿರ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
ಮೊಬೈಲ್ ಕದ್ದು ಹೋಗುತ್ತಿದ್ದ ಸಿದ್ದಿಕ್ ನನ್ನು ಸ್ನೇಹಿತರು ನಗರದ ಹೊರವಲಯದ ನೆಲಮಂಗಲದ ಬಳಿ ಹಿಡಿದಿದ್ದಾರೆ. ಕೊನೆಗೆ ಸಿದ್ದಿಕ್ನನ್ನು ಕೆ.ಆರ್.ಪುರಂ ಠಾಣೆಯ ಪೊಲೀಸರ ವಶಕ್ಕೆ ನೀಡಿದ್ದಾರೆ.
ಘಟನೆ ಸಂಬಂಧ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.