ತುಮಕೂರು: ಹೈಕೋರ್ಟ್ (High Court) ಆದೇಶದಂತೆ ಹೊಸಕೆರೆ ಗ್ರಾಮ ಪಂಚಾಯತ್ (Village Panchayat) ಶಿವನೇಹಳ್ಳಿ ವಾರ್ಡ್ ಮತಗಳ ಮರುಎಣಿಕೆ (Recounting) ಗುರುವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.
ಎರಡೂವರೆ ವರ್ಷದ ಹಿಂದೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶಿವೇನಹಳ್ಳಿ ವಾರ್ಡ್ನ ಅಜಯ್ 296 ಮತ ಪಡೆದು, ಕೇವಲ 1 ಮತದ ಅಂತರದಲ್ಲಿ ಗೆಲುವು ಸಾಧಿಸಿದ್ದರು. 295 ಮತ ಪಡೆದಿದ್ದ ಅರೇಹಳ್ಳಿ ನಟರಾಜು ಮತ ಎಣಿಕೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಗುಬ್ಬಿ ಹಾಗೂ ತುಮಕೂರು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಎರಡು ವರ್ಷದ ನಂತರ ಚುನಾಯಿತ ಸದಸ್ಯ ಅರೇಹಳ್ಳಿ ನಟರಾಜು ಎಂದು ಘೋಷಿಸಿ ಪ್ರಮಾಣ ಪತ್ರ ಸಹ ನೀಡಲಾಗಿತ್ತು. ಇದನ್ನೂ ಓದಿ: ಟ್ವಿಟ್ಟರ್ಗಿಂತ ಥ್ರೆಡ್ಸ್ ಭಿನ್ನ ಹೇಗೆ? ವಿಶೇಷತೆ ಏನು
ಈ ಆದೇಶವನ್ನು ಪ್ರಶ್ನಿಸಿ ಸದಸ್ಯ ಅಜಯ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ ಗುರುವಾರ ಮರು ಎಣಿಕೆ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸದೇ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ಗೆ ಕಳುಹಿಸಲಾಗಿದೆ.
ಅರ್ಜಿದಾರ ಅಜಯ್ ಪ್ರತಿಕ್ರಿಯಿಸಿ, ಕೆಳ ನ್ಯಾಯಾಲಯಗಳ ತೀರ್ಪಿನ ವಿರುದ್ಧ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಮರುಎಣಿಕೆ ಆದೇಶ ಪಡೆಯಲಾಗಿತ್ತು. ಅದರಂತೆ ಈಗಎಣಿಕೆ ನಡೆದಿದ್ದು, ಗೆಲುವು ಸಾಧಿಸುತ್ತೇನೆ ಎಂಬ ನಿರೀಕ್ಷೆ ಇದೆ ಎಂದರು.
Web Stories