ಮಂಡ್ಯ: ನಗರದಲ್ಲಿ ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಆಗಮಿಸುವ ವಿಐಪಿಗಳ ಕಾರು ನಿಲುಗಡೆಗೆ ಅನುಕೂಲವಾಗಲಿ ಅಂತ ಸರ್ಕಾರಿ ಮಹಾವಿದ್ಯಾಲಯದ ಕಾಂಪೌಂಡ್ ಡೆಮಾಲಿಷ್ ಮಾಡಿದ್ದಾರೆ.
ಶುಕ್ರವಾರ ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಸಲುವಾಗಿ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಇವರ ಆಗಮನಕ್ಕೆ ನಗರದ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಬೃಹತ್ ವೇದಿಕೆಯನ್ನ ಕೂಡ ನಿರ್ಮಾಣ ಮಾಡಲಾಗುತ್ತಿದೆ. ಆದ್ರೆ ಈ ವೇದಿಕೆಗೆ ಆಗಮಿಸೋದಕ್ಕೆ ರಸ್ತೆ ಇದ್ದರೂ ಕೂಡ ಮಂಡ್ಯ ಜಿಲ್ಲಾಡಳಿತ ಸರ್ಕಾರಿ ಮಹಾವಿದ್ಯಾಲಯದ ಕಾಂಪೌಂಡ್ ಒಡೆದು ಕೃತಕ ರಸ್ತೆ ನಿರ್ಮಾಣ ಮಾಡಿದೆ.
ಮಹಾವಿದ್ಯಾಲಯದ ಆವರಣದಲ್ಲಿ ದಿನ ನಿತ್ಯ ನೂರಾರು ಜನ ಜಾಗಿಂಗ್ ಮಾಡ್ತಾರೆ. ಆದ್ರೆ ಕಳೆದ 3 ದಿನಗಳಿಂದ ವಿದ್ಯಾಲಯದ ಆವರಣದಲ್ಲಿ ನಿರ್ಮಾಣ ಮಾಡ್ತಿರೋ ಬೃಹತ್ ವೇದಿಕೆಯಿಂದ ಜಾಗಿಂಗ್ ಮಾಡಲು ತೊಂದರೆಯಾಗುತ್ತಿದೆ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಐಪಿಗಳ ಕಾರು ಪಾರ್ಕಿಂಗ್ ಮಾಡುವ ಸಲುವಾಗಿ ಮಹಾವಿದ್ಯಾಲಯದ ಎರಡು ಕಡೆ ಕಾಂಪೌಂಡ್ ಒಡೆಯಲಾಗಿದೆ. ಇದ್ರಿಂದ ಆಕ್ರೋಶಗೊಂಡ ಸಾರ್ವಜನಿಕರು, ಸರ್ಕಾರದ ಆಸ್ತಿಯನ್ನ ಈ ರೀತಿ ಹಾಳು ಮಾಡೋದು ಎಷ್ಟು ಸರಿ ಅಂತ ಪ್ರಶ್ನೆ ಮಾಡಿದ್ದಾರೆ.